ಪ್ರಯಾಗ್ ರಾಜ್ : ಬುಧವಾರ ನಡೆಯುವ ಮಾಘೀ ಪೂರ್ಣಿಮೆಯ ಸಮಯದಲ್ಲಿ ವಿಶೇಷ ಸಂಚಾರ ಯೋಜನೆ ರೂಪಿಸಿದೆ.
ಮಂಗಳವಾರ ಬೆಳಿಗ್ಗೆ 4 ಗಂಟೆಯಿಂದ ನಗರವನ್ನು ‘ವಾಹನ ರಹಿತ ವಲಯ’ ಎಂದು ಘೋಷಿಸಲಾಗಿದ್ದು, ಈ ನಿಯಮವು ಸಂಜೆ 5 ಗಂಟೆಯಿಂದ ಇಡೀ ನಗರದಲ್ಲಿ ತುರ್ತು ಮತ್ತು ಅಗತ್ಯ ಸೇವೆಗಳಿಗಾಗಿ ವಿನಾಯಿತಿಯೊಂದಿಗೆ ಅನ್ವಯವಾಗಲಿದೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಬುಧವಾರ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸಂಗಮದಲ್ಲಿ ಸ್ನಾನ ಮಾಡಲು ನಿರೀಕ್ಷಿತವಾಗಿರುವುದರಿಂದ, ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಈ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿಕೆಯಲ್ಲಿ ವಿವರಿಸಲಾಗಿದೆ.
ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಮೇಳ ಪ್ರದೇಶದಿಂದ ಭಕ್ತರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವುದನ್ನು ಖಚಿತಪಡಿಸಿಕೊಳ್ಳಲು, ಬುಧವಾರ ಸ್ನಾನದ ಆಚರಣೆ ಪೂರ್ಣಗೊಳ್ಳುವವರೆಗೆ ವಿಶೇಷ ಸಂಚಾರ ಯೋಜನೆ ಜಾರಿಯಲ್ಲಿರುತ್ತದೆ.