ಮಹಾರಾಷ್ಟ್ರ : ಬಾಲ್ಯದಲ್ಲಿ ಅವರು ತನ್ನ ತಾಯಿಯೊಂದಿಗೆ ಬಳೆಗಳನ್ನು ಮಾರುತ್ತಿದ್ದರು. ಬಡತನದ ಹಿನ್ನೆಲೆಯಿಂದ ಬಂದ ನಂತರ ರಮೇಶ್ ಘೋಲಾಪ್ ಐಎಎಸ್ ಅಧಿಕಾರಿಯಾದ ಕಥೆ.
ಐಎಎಸ್ ರಮೇಶ್ ಘೋಲಾಪ್ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಮಹಾಗಾಂವ್ ನಿವಾಸಿ. ಅವರ ತಂದೆ ಗೋರಖ್ ಘೋಲಾಪ್ ವಾಹನಗಳನ್ನು ಪಂಕ್ಚರ್ ಮಾಡುತ್ತಿದ್ದರು. ಬಾಲ್ಯದಲ್ಲಿ, ರಮೇಶ್ ಅವರ ಎಡಗಾಲಿನಲ್ಲಿ ಪೋಲಿಯೊ ಇತ್ತು, ಇದರಿಂದಾಗಿ ಅವರು ಬಹಳಷ್ಟು ತೊಂದರೆಗಳನ್ನು ಎದುರಿಸುತ್ತಿದ್ದರು.
ರಮೇಶ್ ಅವರ ತಂದೆ ಕುಡಿತದ ಚಟ ಹೊಂದಿದ್ದರು. ಇದರಿಂದ ಅವರ ಇಡೀ ಕುಟುಂಬ ರಸ್ತೆಗೆ ಬಂದಿತ್ತು. ರಮೇಶ್ ಅವರ ತಾಯಿ ವಿಮಲಾದೇವಿ ಬೀದಿ ಬೀದಿಗಳಲ್ಲಿ ಬಳೆಗಳನ್ನು ಮಾರುತ್ತಿದ್ದರು. ರಮೇಶ್ ಕೆಲವೊಮ್ಮೆ ತನ್ನ ತಾಯಿಗೆ ಮತ್ತು ಕೆಲವೊಮ್ಮೆ ತಂದೆಗೆ ಸಹಾಯ ಮಾಡುತ್ತಿದ್ದರು.
ರಮೇಶ್ ತನ್ನ ಆರಂಭಿಕ ಶಿಕ್ಷಣವನ್ನು ಹಳ್ಳಿಯ ಶಾಲೆಯಲ್ಲಿ ಪಡೆದರು. ಇದಾದ ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಚಿಕ್ಕಪ್ಪನವರ ಗ್ರಾಮವಾದ ಬಾರ್ಸಿಗೆ ಹೋದರು. ರಮೇಶ್ 12ನೇ ತರಗತಿ ಪರೀಕ್ಷೆಯಲ್ಲಿ ಶೇ 88.50 ಅಂಕ ಪಡೆದಿದ್ದರು.ಶಿಕ್ಷಣದಲ್ಲಿ ಡಿಪ್ಲೊಮಾ ಮಾಡಿದ ನಂತರ ರಮೇಶ್ ಹಳ್ಳಿಯಲ್ಲಿಯೇ ಶಾಲೆಯೊಂದರಲ್ಲಿ ಪಾಠ ಮಾಡಲು ಪ್ರಾರಂಭಿಸಿದರು. ಡಿಪ್ಲೊಮಾ ಜೊತೆಗೆ ಬಿಎ ಪದವಿಯನ್ನೂ ಪಡೆದಿರು. ಹಸು ಖರೀದಿಸಲು ಅವರ ತಾಯಿ ಪಡೆದಿದ್ದ ಲೋನ್ ಮೊತ್ತ 18 ಸಾವಿರ ರೂಪಾಯಿಯಲ್ಲಿ ರಮೇಶ್ ಓದು ಮುಗಿಸಿದರು.
ತಂದೆ ತೀರಿಕೊಂಡಾಗ ರಮೇಶ್ ಅವರಿಗೆ ಚಿಕ್ಕಪ್ಪನ ಹಳ್ಳಿಯಿಂದ ತನ್ನ ಗ್ರಾಮಕ್ಕೆ ಹೋಗಲು 2 ರೂಪಾಯಿ ಕೂಡ ಇರಲಿಲ್ಲ. ಆಗ ಎರಡು ಗ್ರಾಮಗಳ ನಡುವೆ ಸಂಚರಿಸುತ್ತಿದ್ದ ಬಸ್ ನಲ್ಲಿ 5 ರೂ. ಟಿಕೆಟ್ ಇತ್ತು. ಆದರೆ ರಮೇಶ್ ಅವರಿಗೆ ಪೋಲಿಯೋ ಬಂದಿದ್ದರಿಂದ ಅವರ ಪ್ರಯಾಣ ದರ ಕೇವಲ 2 ರೂ. ಇತ್ತು. ಆ ಹಣವನ್ನು ಹೊಂದಿಸಲು ರಮೇಶ್ ಪರದಾಡಿದ್ದರು.
ಇನ್ನು UPSC ಪರೀಕ್ಷೆಯ ಎರಡನೇ ಪ್ರಯತ್ನದಲ್ಲಿ ರಮೇಶ್ ಘೋಲಾಪ್ ಯಶಸ್ವಿಯಾಗಿದ್ದಾರೆ. 2011 ರ UPSC ಪರೀಕ್ಷೆಯಲ್ಲಿ ಅವರು 287 ನೇ ರ್ಯಾಂಕ್ ಗಳಿಸಿದ್ದರು. ಅದೇ ವರ್ಷ ರಾಜ್ಯ ಸೇವಾ ಪರೀಕ್ಷೆಯಲ್ಲಿ ರಾಜ್ಯ ಟಾಪರ್ ಆದರು. ಐಎಎಸ್ ರಮೇಶ್ ಘೋಲಪ್ ಅವರನ್ನು ಜಾರ್ಖಂಡ್ ಕೇಡರ್ ನಲ್ಲಿ ಪೋಸ್ಟ್ ಮಾಡಲಾಗಿದೆ. ಬಳಿಕ ಜಾರ್ಖಂಡ್ನಲ್ಲಿರುವ ಗರ್ವಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಆದರು.