ಹಾಸನ: ಶ್ರೀ ಹಾಸನಾಂಬ ದೇವಿ ದರ್ಶನ ಮತ್ತು ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಅ.9 ರಂದು ಪ್ರಾರಂಭವಾಗಲಿದೆ. ಮಧ್ಯಾಹ್ನ 12 ಗಂಟೆಗೆ ಶ್ರೀ ಹಾಸನಾಂಬ ದೇವಿಯ ದೇವಾಲಯದ ಬಾಗಿಲನ್ನು ತೆರೆಯಲಾಗುತ್ತದೆ. ಅ.23 ರಂದು ದೇವಾಲಯದ ಬಾಗಿಲನ್ನು ಮುಚ್ಚಲಾಗುತ್ತದೆ. ಭಕ್ತರಿಗೆ ಅ.10 ರಿಂದ ಅ.23 ರವರೆಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ, ತುಮಕೂರು ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ.
ದರ್ಶನದ ವೇಳಾಪಟ್ಟಿ
ಅಕ್ಟೋಬರ್ 9 (ಗುರುವಾರ)
ಮಧ್ಯಾಹ್ನ 12 ಗಂಟೆಗೆ ದೇವಾಲಯ ತೆರೆಯಲಾಗುತ್ತದೆ – ಪೂಜೆ ಮತ್ತು ಆಚರಣೆ ಮಾತ್ರ. ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ
ಅಕ್ಟೋಬರ್ 10 (ಶುಕ್ರವಾರ)
ಬೆಳಿಗ್ಗೆ 6ರಿಂದ ಸಂಜೆ 7ರವರೆಗೆ ಸಾರ್ವಜನಿಕ ದರ್ಶನ
ಅಕ್ಟೋಬರ್ 11 ರಿಂದ 22ರವರೆಗೆ
ದೇವಾಲಯ ದರ್ಶನ ಬೆಳಿಗ್ಗೆ 6 ರಿಂದ ರಾತ್ರಿಯಿಡೀ ತೆರೆದಿರುತ್ತದೆ
ಮುಚ್ಚಿರುವ ಸಮಯ
ಬೆಳಿಗ್ಗೆ 2ರಿಂದ 5ರವರೆಗೆ ನಡೆಯಲಿದೆ.
ಮಧ್ಯಾಹ್ನ 2ರಿಂದ 3.30ರವರೆಗೆ
ಅಕ್ಟೋಬರ್ 22 (ಬುಧವಾರ)
ಸಂಜೆ 7 ಗಂಟೆಗೆ ಸಾರ್ವಜನಿಕ ದರ್ಶನ ಮುಕ್ತಾಯ
ಅಕ್ಟೋಬರ್ 23 (ಗುರುವಾರ)
ಅಂತಿಮ ಪೂಜೆಯ ನಂತರ ದೇವಾಲಯ ಮುಚ್ಚಲಾಗುತ್ತದೆ.
ಸಾರ್ವಜನಿಕ ಪ್ರವೇಶ ಇರುವುದಿಲ್ಲ