ಮಾಟ- ಮಂತ್ರದ ಹೆಸರಿನಲ್ಲಿ ಮಹಿಳೆಯ ಬೆತ್ತಲೆ ವಿಡಿಯೋ ಮಾಡಿ ಬ್ಲ್ಯಾಕ್ ಮೇ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಕೇರಳದ ಪೆರಿಂಗೊಟ್ಟುಕರ ದೇವಸ್ಥಾನದ ಅರ್ಚಕ ಅರುಣ್ ಎಂಬಾತನನ್ನು ಆರೆಸ್ಟ್ ಮಾಡಲಾಗಿದೆ.
ಬೆಂಗಳೂರಿನ ಬೆಳ್ಳಂದೂರು ಪೊಲೀಸರು ಅರ್ಚಕ ಅರುಣನನ್ನು ಬಂಧಿಸಿದ್ದಾರೆ. ಮುಖ್ಯ ಅರ್ಚಕ ಉನ್ನಿ ದಾಮೋದರನ್ ಎಂಬಾತ ಪರಾರಿಯಾಗಿದ್ದಾನೆ.
ನನಗೆ ಯಾರೋ ಮಾಟ ಮಂತ್ರ ಮಾಡಿಸಿದ್ದಾರೆ ಎಂದು ಮಹಿಳೆ ಪೂಜೆಗಾಗಿ ದೇಗುಲಕ್ಕೆ ತೆರಳಿದ್ದರು. 24 ಸಾವಿರ ಹಣ ಕೊಟ್ಟರೆ ಪೂಜೆ ಮಾಡುವುದಾಗಿ ಅರ್ಚಕ ಅರುಣ್ ಹೇಳಿದ್ದ. ಬಳಿಕ ಮಹಿಳೆಯ ಮೊಬೈಲ್ ನಂಬರ್ ಪಡೆದುಕೊಂಡು ದಿನ ಬರಲು ಸೂಚನೆ ನೀಡಿದ್ದಾನೆ. ಮಹಿಳೆಗೆ ತಡರಾತ್ರಿಯಲ್ಲಿ ನಿರಂತರ ವಾಟ್ಸ್ಯಾಪ್ ಕರೆ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ.
ಮಾಟ ಮಂತ್ರ ತೆಗೆಯಬೇಕು ಅಂದರೆ ಬೆತ್ತಲಾಗಬೇಕು ಅಂತ ಅರ್ಚಕ ಹೇಳಿದ್ದ. ಮಹಿಳೆ ಒಪ್ಪದಿದ್ದಕ್ಕೆ ಮಕ್ಕಳು ಸಾಯುವ ಹಾಗೆ ಪೂಜೆ ಮಾಡುವ ಬೆದರಿಕೆ ಹಾಕಿದ್ದಾನೆ. ಅರ್ಚಕ ಅರುಣ್ ಬೆದರಿಕೆಯಿಂದ ಮಹಿಳೆ ಬೆತ್ತಲೆಯಾಗಿದ್ದಾಳೆ. ಬಳಿಕ ಬೆತ್ತಲೆ ವಿಡಿಯೋವನ್ನು ಅರ್ಚಕ ರೆಕಾರ್ಡ್ ಮಾಡಿಕೊಂಡಿದ್ದಾನೆ. ಅದೇ ವಿಡಿಯೋ ಇಟ್ಟುಕೊಂಡು ಕೇರಳಕ್ಕೆ ಬರುವಂತೆ ಕರೆದು ಒತ್ತಾಯಿಸಿದ್ದಾನೆ. ನೀನು ಬರುವಾಗ ಹೇಳು ರೂಮ್ ಬುಕ್ ಮಾಡುತ್ತೇನೆ ಎಂದು ಅರ್ಚಕ ಅರುಣ ಕಿರುಕುಳ ನೀಡಿದ್ದಾನೆ.
ಅರ್ಚಕನ ಹಿಂಸೆ ತಾಳಲಾರದೆ ಸಂತ್ರಸ್ತ ಮಹಿಳೆ ಕೇರಳಕ್ಕೆ ತೆರಳಿದ್ದಾಳೆ. ಈ ವೇಳೆ ಅರ್ಚಕ ಅಸಭ್ಯ ವರ್ತನೆ ತೋರಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾಳೆ. ಅಲ್ಲದೇ ಮಹಿಳೆಯನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸಿರುವುದಾಗಿಯೂ ಆರೋಪಿಸಿದ್ದಾಳೆ. ಇವರ ಕಿರುಕುಳಕ್ಕೆ ಬೇಸತ್ತು ಮಹಿಳೆ ಬೆಳ್ಳಂದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಅರ್ಚಕ ಅರುಣ್ನನ್ನು ಇದೀಗ ಪೊಲೀಸರು ಬಂಧಿಸಲಾಗಿದೆ. ಮುಖ್ಯ ಅರ್ಚಕ ಉನ್ನಿ ದಾಮೋದರನ್ ಪರಾರಿಯಾಗಿದ್ದಾನೆ.