ನವದೆಹಲಿ : “ಹೆಂಡತಿ ಮಾತು ಕೇಳದೇ ಏರ್ ಇಂಡಿಯಾ ಹತ್ತಿದ್ರೆ ನಾನೇ ಇರ್ತಿರ್ಲಿಲ್ಲ. ಹೆಂಡತಿಯಿಂದ ಇಂದು ನಾನು ಜೀವಂತವಾಗಿದ್ದೇನೆ ಆಕೆಗೆ ಎಷ್ಟು ಧನ್ಯವಾದ ಹೇಳಿದ್ರೂ ಸಾಲದು ಎಂದು ಡಾ. ಉಮಂಗ್ ಪಟೇಲ್ ಹೇಳಿದ್ದಾರೆ.
ಉಮಂಗ್ ಪಟೇಲ್ ವೃತ್ತಿಯಲ್ಲಿ ವೈದ್ಯರಾಗಿದ್ದು, ಕಳೆದ ಐದು ವರ್ಷಗಳಿಂದ ಲಂಡನ್ನ ನಾರ್ಥಾಂಪ್ಟನ್ನಲ್ಲಿ ವಾಸವಿದ್ದಾರೆ. ಉಮಂಗ್ ಅವರ ತಂದೆ ಕೂಡ ವೈದ್ಯರೇ ಆದರೆ ಅವರು ಪಾರ್ಶ್ವವಾಯುವಿಗೆ ತುತ್ತಾಗಿದ್ದ ಕಾರಣ ಅನಿವಾರ್ಯವಾಗಿ ಭಾರತಕ್ಕೆ ಮರಳಬೇಕಾಗಿತ್ತು.
ಮೇ 24ರಂದು ಅವರು ಲಂಡನ್ನಿಂದ ತಮ್ಮ ಪತ್ನಿಯೊಂದಿಗೆ ಭಾರತಕ್ಕೆ ಬಂದಿದ್ದರು. ಜೂನ್ 12ರಂದು ಪತ್ನಿಯನ್ನು ಇಲ್ಲೇ ಬಿಟ್ಟು ಏರ್ ಇಂಡಿಯಾ ವಿಮಾನದಲ್ಲಿ ಲಂಡನ್ಗೆ ವಾಪಸ್ಸಾಗಲು ಟಿಕೆಟ್ ಬುಕ್ ಮಾಡಿದ್ದರು. ಆದರೆ ಅಹಮದಾಬಾದ್ನಿಂದ ಲಂಡನ್ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಮೇಘನಿ ನಗರದಲ್ಲಿ ವೈದ್ಯಕೀಯ ಕಾಲೇಜು ಹಾಸ್ಟೆಲ್ ಮೇಲೆ ಪತನವಾಗಿತ್ತು. ಈ ದುರಂತದಲ್ಲಿ ವಿಮಾನದಲ್ಲಿದ್ದ 242 ಜನರ ಪೈಕಿ 241 ಜನ ಹಾಗೂ ವೈದ್ಯಕೀಯ ಕಾಲೇಜು ಹಾಸ್ಟೆಲ್ನಲ್ಲಿದ್ದವರು ಹಾಗೂ ಸ್ಥಳೀಯ ನಿವಾಸಿಗಳು ಸೇರಿ ಒಟ್ಟು 274 ಮಂದಿ ಸಾವನ್ನಪ್ಪಿದ್ದರು.
ಡಾ. ಉಮಂಗ್ ಯುಕೆಯಿಂದ ತಮ್ಮ ಪತ್ನಿ, ಪುತ್ರರು ಹಾಗೂ ಅಜ್ಜಿಯೊಂದಿಗೆ ಬಂದಿದ್ದರು. ಗುಜರಾತ್ನ ಮಹಿಸಾಗರ್ ಜಿಲ್ಲೆಯ ಕೊಯ್ಡಮ್ ಗ್ರಾಮದಲ್ಲಿರುವ ತಮ್ಮ ಪೂರ್ವಜರ ಮನೆಗೆ ಬಂದಿದ್ದರು. ಜೂನ್ 9ರಂದು ತಮ್ಮ ಪತ್ನಿಯನ್ನು ಅವರ ತಾಯಿಯ ಮನೆಗೆ ಬಿಟ್ಟು ತಾವೊಬ್ಬರೇ ಹೊರಡುವ ನಿರ್ಧರಿಸಿ ಟಿಕೆಟ್ ಬುಕ್ ಕೂಡ ಮಾಡಿದ್ದರು. ಆದರೆ ಅತ್ತೆಯ ಮನೆಗೆ ಹೋಗುವಷ್ಟರ ಹೊತ್ತಿಗೆ ತೀವ್ರ ಜ್ವರವಿತ್ತು, ನಡೆದಾಡುವುದೂ ಕಷ್ಟವಾಗಿತ್ತು.
ಹೀಗಾಗಿ ಜೂನ್ 12ರಂದು ನೀವು ಯುಕೆಗೆ ಹೋಗುವುದು ಬೇಡ ಟಿಕೆಟ್ ಕ್ಯಾನ್ಸಲ್ ಮಾಡಿಬಿಡಿ ಎಂದು ಪತ್ನಿ ತುಂಬಾ ಒತ್ತಾಯ ಮಾಡಿದ್ದರು. ಹೀಗಾಗಿ ಪತ್ನಿಯ ಮಾತಿಗೆ ಒಪ್ಪಿ ಉಮಂಗ್ ಅಂದು ಲಂಡನ್ಗೆ ತೆರಳುವುದನ್ನು ಕ್ಯಾನ್ಸಲ್ ಮಾಡಿ ಜೂನ್ 15 ಕ್ಕೆ ಇನ್ನೊಂದು ಟಿಕೆಟ್ ಬುಕ್ ಮಾಡಿದ್ದೆ. ಅದಾದ ನಂತರ ವಿಮಾನ ಅಪಘಾತದ ಸುದ್ದಿ ಕೇಳಿದೆ. ದೇವರೇ ಹೆಂಡತಿಯ ರೂಪದಲ್ಲಿ ಬಂದು ನನ್ನನ್ನು ರಕ್ಷಿಸಿದ್ದಾನೆ ಎಂದು ಉಮಂಗ್ ತಿಳಿಸಿದ್ದಾರೆ.