CSKಯನ್ನು ಸೋಲಿಸಿದ ಮಾತ್ರಕ್ಕೆ ಟ್ರೋಫಿ ಗೆದ್ದಂತಾಗುವುದಿಲ್ಲ – RCB ಅಭಿಮಾನಿಗಳನ್ನ ಮತ್ತೆ ಕೆಣಕಿದ ರಾಯುಡು

ಬೆಂಗಳೂರು: ಐಪಿಎಲ್ 2024ರ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 4 ವಿಕೆಟ್‌ಗಳ ಅಂತರದಿಂದ ಸೋಲು ಕಂಡು ಟೂರ್ನಿಯಿಂದ ಹೊರ ಬಂದಿದೆ.

ಇದೇ ವಿಚಾರವಾಗಿ ಸಿಎಸ್‌ಕೆ ತಂಡದ ಮಾಜಿ ಆಟಗಾರ ಅಂಬಾಟಿ ರಾಯುಡು ಮಾತನಾಡಿ ಆರ್‌ಸಿಬಿ ಅಭಿಮಾನಿಗಳನ್ನು ಕೆಣಕಿದ್ದಾರೆ. “ನಾವು ಇಂದು ಆರ್‌ಸಿಬಿ ಬಗ್ಗೆ ಮಾತನಾಡುವುದಾದರೆ, ಉತ್ಸಾಹ ಮತ್ತು ಆಕ್ರಮಣಕಾರಿ ಆಚರಣೆಗಳು ನಿಮಗೆ ಟ್ರೋಫಿಗಳನ್ನು ಗೆಲ್ಲುವುದಿಲ್ಲ ಎಂದು ತೋರಿಸುತ್ತದೆ. ನೀವು ಯೋಜಿಸಬೇಕಾಗಿದೆ. ಪ್ಲೇಆಫ್ ತಲುಪಿದ ಮಾತ್ರಕ್ಕೆ ನೀವು ಐಪಿಎಲ್ ಟ್ರೋಫಿಯನ್ನು ಪಡೆಯುವುದಿಲ್ಲ.

ಅದೇ ಹಸಿವಿನಿಂದ ಆಟವಾಡಬೇಕು. ಸಿಎಸ್‌ಕೆ ತಂಡವನ್ನು ಸೋಲಿಸಿದ ಮಾತ್ರಕ್ಕೆ ಐಪಿಎಲ್ ಟ್ರೋಫಿ ಗೆಲ್ಲುತ್ತೀರಿ ಎಂದು ಭಾವಿಸಬೇಡಿ. ನೀವು ಮುಂದಿನ ವರ್ಷ ಮತ್ತೊಮ್ಮೆ ಬರಬೇಕು,” ಎಂದು ಅಂಬಟಿ ರಾಯುಡು ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಿಡಿಕಾರಿದ್ದಾರೆ.

Advertisement

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement