‘ಲೂಟಿಕೋರ ರಾಜ್ಯ ಸರಕಾರದ ವಿರುದ್ಧ ಜನರು ಬೀದಿಗಿಳಿಯುವ ದಿನ ಬರಲಿದೆ’-ಡಿ.ವಿ.ಸದಾನಂದಗೌಡ

WhatsApp
Telegram
Facebook
Twitter
LinkedIn

ಬೆಂಗಳೂರು : ಕಾಂಗ್ರೆಸ್ಸಿನ ಲೂಟಿಕೋರ ರಾಜ್ಯ ಸರಕಾರದ ವಿರುದ್ಧ ಜನರು ಶೀಘ್ರವೇ ಬೀದಿಗಿಳಿಯುವ ದಿನ ಬರಲಿದೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ಎಚ್ಚರಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು ಪ್ರಶ್ನೆಗೆ ಉತ್ತರ ನೀಡಿದರು. ಮತದಾನಕ್ಕೆ ಇನ್ನೂ 2-3 ವರ್ಷ ಅಧಿಕಾರ ಇದೆ ಎಂದು ಅವರು ತಿಳಿದುಕೊಂಡಿರಬಹುದು. ಅಷ್ಟರೊಳಗೆ ಎಲ್ಲ ಮಾಡಿಕೊಳ್ಳುತ್ತೇವೆ ಎಂದು ಅವರು ಭಾವಿಸಿರಬಹುದು. ಆದರೆ, ಜನರು ಬೀದಿಗೆ ಇಳಿದರೆ ಇವರ ಯಾವ ಸಚಿವರೂ ಯಾವ ಊರಿಗೂ ಹೋಗದಂತೆ ಆಗಲಿದೆ. ಮುಖ್ಯಮಂತ್ರಿಯು ವಿಧಾನಸೌಧ ಇಲ್ಲವೇ ಅವರ ಮನೆಯಲ್ಲಿ ಕುಳಿತಿರಬೇಕಾದ ಪರಿಸ್ಥಿತಿ ಬಂದೀತು ಎಂದು ತಿಳಿಸಿದರು.

ಮಹಿಳೆಗೆ 2-3 ತಿಂಗಳ ಹಣ ಬಂದಿಲ್ಲ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರ ಬಳಿ ಬರುತ್ತಾರೆ. 3 ತಿಂಗಳ ಹಣದಲ್ಲಿ 1 ತಿಂಗಳದ್ದು ಕೊಟ್ಟಲ್ಲಿ ಮೊತ್ತ ಕೊಡಿಸುವುದಾಗಿ ಲೂಟಿ ಹೊಡೆಯುವ ಪ್ರವೃತ್ತಿಗೆ ಪ್ರೇರಣೆ ಕೊಡುವ ಕೆಲಸ ಕಾರ್ಯ ಅನುಷ್ಠಾನ ಸಮಿತಿ ಮೂಲಕ ಆಗುತ್ತಿದೆ ಎಂದು ಟೀಕಿಸಿದರು.ಅನುಷ್ಠಾನ ಸಮಿತಿ ಯಾಕೆ ಬೇಕು? ಸರಕಾರಿ ಅಧಿಕಾರಿಗಳು ಇರುವುದು ಯಾಕೆ? ಸರಕಾರಿ ಯೋಜನೆ ಅನುಷ್ಠಾನಕ್ಕೆ ಲೂಟಿಕೋರರನ್ನು ತಯಾರು ಮಾಡುವ ಅವಶ್ಯಕತೆ ಇಲ್ಲ. ಮಂತ್ರಿಗಳು ಯಾಕೆ ಇದ್ದಾರೆ ಎಂದು ಕೇಳಿದರು.

ಅಧಿಕಾರಿಗಳನ್ನೂ ಮೇಯಲು ಬಿಟ್ಟಿದ್ದಾರೆ. ಅಧಿಕಾರಿಗಳಿಗೆ ನೀನು ಇಷ್ಟು ಕೊಟ್ಟಲ್ಲಿ ಇಂಥ ಜಾಗ ಎಂದು ನಿಗದಿಪಡಿಸುತ್ತಾರೆ ಎಂದು ದೂರಿದರು.ಇದು ಆಲಿಬಾಬಾ ಮತ್ತು 40 ಕಳ್ಳರ ಮಾದರಿ. ಸಿದ್ದರಾಮಯ್ಯ ಮತ್ತು 4 ಸಾವಿರ ಕಳ್ಳರು ಎಂಬಂತೆ ತಯಾರು ಮಾಡುವ ಕಾರ್ಯ ಕರ್ನಾಟಕದಲ್ಲಿ ನಡೆಯುತ್ತಿದೆ. ಇದು ದುರದೃಷ್ಟಕರ ಎಂದು ಆಕ್ಷೇಪಿಸಿದರು.

ಇಂಥ ಭ್ರಷ್ಟ, ಲಜ್ಜೆಗೆಟ್ಟ, ನೀತಿಗೆಟ್ಟ ಸರಕಾರ, ಜನರ ಕಿಸೆಯಿಂದ, ಪ್ರತಿ ವ್ಯಕ್ತಿಯ ಕಿಸೆಯಿಂದ ದುಡ್ಡು, ಲಂಚ ಪಡೆಯುವ ರೀತಿಯಲ್ಲಿ ಕ್ರೋಡೀಕರಿಸುವುದು ನಾನು ಯಾವತ್ತೂ ಕಂಡಿಲ್ಲ ಎಂದು ತಿಳಿಸಿದರು. ಕಾಂಗ್ರೆಸ್ ಸರಕಾರದ ಗ್ಯಾರಂಟಿಗಳು ಜನರಿಗಾಗಿ ಅಲ್ಲ; ರಾಜ್ಯ ಸರಕಾರದ ಹಿತಾಸಕ್ತಿಗಾಗಿ ಅಲ್ಲ; ಅದು ಇರುವುದೇ ಅವರ ಸ್ವಂತ ಚೇಲಾಗಳಿಗಾಗಿ. ನಾವು ಖಜಾನೆ ಲೂಟಿ ಮಾಡುತ್ತಿದ್ದೇವೆ. ನೀವೂ ಸ್ವಲ್ಪ ತಿನ್ನಿ ಎಂಬಂತಿದೆ ಎಂದು ಆರೋಪ ವ್ಯಕ್ತಪಡಿಸಿದರು. ಇದೊಂದು ಅತ್ಯಂತ ಕೆಟ್ಟ ಸಂಪ್ರದಾಯ ಎಂದು ದೂರಿದರು. 48 ಅವಶ್ಯಕ ವಸ್ತುಗಳ ಮೇಲಿನ ದರ ಏರಿಕೆಯನ್ನೂ ಅವರು ಟೀಕಿಸಿದರು.

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon