ಬೆಂಗಳೂರು : ಸದಾ ಒಂದಲ್ಲ ಒಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸಾಕಷ್ಟು ಸುದ್ದಿಯಲ್ಲಿರುವ ಮಾಜಿ ಶಾಸಕ ಈಶ್ವರಪ್ಪ ಮತ್ತೊಂದು ಹೇಳಿಕೆಯೊಂದನ್ನು ನೀಡಿದ್ದು, ಮುಸಲ್ಮಾನರು ಗೆದ್ದಿತ್ತಿನ ಬಾಲ ಹಿಡಿಯುವರರು, ಅವರಿಗೆ ಬದ್ಧತೆ ಅನ್ನೋದಿಲ್ಲ ಎಂದು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಮುಸಲ್ಮಾನರು ಬಿಜೆಪಿಗೆ ವೋಟ್ ಹಾಕುತ್ತಾರೆ, ಪ್ರಧಾನಿ ಮೋದಿ ಜೈಕಾರ ಹಾಕುತ್ತಾರೆ.
ಬಿಜೆಪಿ ಬಾವುಟ ಹಿಡಿದು ಹೋಗುತ್ತಾರೆ, ಯಾರು ಗೆಲ್ಲುವ ರೇಸ್ ನಲ್ಲಿ ಇರುತ್ತಾರೋ ಅವರ ಕಡೆ ಮುಸಲ್ಮಾನರು ಹೋಗುತ್ತಾರೆ ಎಂದು ಹೇಳಿದರು.
ಸದ್ಯ ರಾಜ್ಯದಲ್ಲಿ ಅರ್ಧಕ್ಕಿಂತ ಹೆಚ್ಚಿನ ಮುಸ್ಲಿಮರು ಕಾಂಗ್ರೆಸ್ ಗೆ ಸಪೋರ್ಟ್ ಮಾಡುತ್ತಾರೆ ಅದೇ ನಾಳೆಯ ದಿನದಲ್ಲಿ ಬಿಜೆಪಿ ಗೆಲ್ಲುತ್ತೆ ಅಂದ್ರೆ ದಿಢೀರ್ ಆಗಿ ಬದಲಾಗಿ ಬಿಜೆಪಿಗೆ ಸಪೋರ್ಟ್ ಮಾಡುತ್ತಾರೆ. ಅವರು ಒಂದು ತರ ಗೆದ್ದಿತ್ತಿನ ಬಾಲ ಹಿಡಿಯುವರರು, ಅವರಿಗೆ ಬದ್ಧತೆ ಅನ್ನೋದಿಲ್ಲ ಎಂದು ಈಶ್ವರಪ್ಪ ಹೇಳಿದ್ದಾರೆ.
ಹೀಗಾಗಿ ನಾವು ಅಧಿಕಾರದಲ್ಲಿ ಇದ್ದೀವಿ ಅದಕ್ಕೆ ನಾವೇ ಮುಸಲ್ಮಾನರ ಕಡೆ ಹೋಗೋಣ ಎಂದುಕೊಂಡು ಹೇಳಿಕೊಂಡು ರಾಜ್ಯ ಸರ್ಕಾರ ನೇರವಾಗಿ ಮುಸಲ್ಮಾನರಿಗೆ ಬೆಂಬಲ ಕೊಟ್ಟುಕೊಂಡು ಹೋಗುತ್ತಿದ್ದಾರೆ ಎಂದು ಈಶ್ವರಪ್ಪ ಟಾಂಗ್ ನೀಡಿದರು.