ಒಳಮೀಸಲಾತಿ ಹೋರಾಟಕ್ಕೆ ನಕಲಿ ಹೋರಾಟಗಾರರು ಎಂಟ್ರಿ ಎಚ್ಚರ.! ಓ.ಶಂಕರ್

WhatsApp
Telegram
Facebook
Twitter
LinkedIn

 

ಚಿತ್ರದುರ್ಗ: ರಾಜ್ಯದಲ್ಲಿ ಒಳಮೀಸಲಾತಿ ಹೋರಾಟಕ್ಕೆ ದೀರ್ಘ ಕಾಲದ ಇತಿಹಾಸ ಇದೆ. ಸಾವಿರಾರು ಮಂದಿ ಹೋರಾಟಗಾರರು ಬದುಕನ್ನು ತ್ಯಾಗ ಮಾಡಿದ್ದಾರೆ. ಆಗಸ್ಟ್ ಅಂತ್ಯದೊಳಗೆ ಒಳಮೀಸಲಾತಿ ಜಾರಿಗೊಳ್ಳುವುದು ಖಚಿತವಾಗಿದೆ. ಆದರೆ ಇದರ ಲಾಭವನ್ನು ಪಡೆಯಲು ನಕಲಿ ಹೋರಾಟಗಾರರು ರಾಜ್ಯದಲ್ಲಿ ಹುಟ್ಟಿಕೊಂಡಿದ್ದಾರೆ, ಇವರ ಬಗ್ಗೆ ನಮ್ಮ ಸಮುದಾಯದವರು ತೆಲೆ ಕೆಡಿಸಿಕೊಳ್ಳಬಾರದೆಂದು ಲಿಡ್ಕರ್ನ ಮಾಜಿ ಆಧ್ಯಕ್ಷರಾದ ಓ.ಶಂಕರ್ ಸಮುದಾಯದವರನ್ನು ಎಚ್ಚರಿಸಿದ್ದಾರೆ.

ಚಿತ್ರದುರ್ಗ ನಗರದ ಪ್ರವಾಸಿ ಮಂದಿರದಲ್ಲಿ ಭುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮೀಸಲಾತಿ ಜಾರಿಗಾಗಿ ಅನೇಕ ರಾಜಕಾರಣಿಗಳು, ಜನಪ್ರತಿನಿಧಿಗಳು ಬೆಂಬಲವಾಗಿ ನಿಂತಿದ್ದಾರೆ.. ಒಟ್ಟಾರೆ ಇವರೆಲ್ಲರ ತ್ಯಾಗ, ಬದ್ಧತೆ ಕಾರಣಕ್ಕೆ ರಾಜ್ಯದಲ್ಲಿ ಒಳಮೀಸಲಾತಿ ಜಾರಿಗೆ ದಿನಗಣನೆ ಆರಂಭವಾಗಿದೆ. ಒಳಮೀಸಲಾತಿ ಜಾರಿ ಹೋರಾಟಕ್ಕೆ ಬದುಕನ್ನು ಅರ್ಪಿಸಿಕೊಂಡಿದ್ದ ಬಹಳಷ್ಟು ಮಂದಿ ಗಂಭೀರತೆಯಿಂದ ಸರ್ಕಾರದ ಕಾರ್ಯಕ್ಕೆ ಬೆಂಬಲವಾಗಿ ನಿಂತಿದ್ದಾರೆ.ಅದರಲ್ಲೂ ಮಾಜಿ ಸಚಿವರಾದ ಹೆಚ್. ಆಂಜನೇಯರವರು ಸೇರಿ ಅನೇಕ ರಾಜಕಾರಣಿಗಳು ಒಳಮೀಸಲಾತಿ ಜಾರಿಗಾಗಿ ರಾಜ್ಯದಲ್ಲಿ ನ್ಯಾ ನಾಗಮೋಹನ್ ದಾಸ್ ಆಯೋಗ ಕೈಗೊಂಡ ಜಾತಿಗಣತಿ ಸಮೀಕ್ಷೆ ಕಾರ್ಯದಲ್ಲಿ ಸಮುದಾಯದವರು ಪಾಲ್ಗೊಳ್ಳುವಂತೆ ರಾಜ್ಯಾದ್ಯಂತ ಜಾಗೃತಿ ಕಾರ್ಯಕ್ರಮ, ಸಭೆ, ಸಿಎಂ ಸಿದ್ದರಾಮಯ್ಯರವರನ್ನು ಭೇಟಿ ಮಾಡಿ ಅವರೊಂದಿಗೆ ಚರ್ಚಿಸಿ ವಿವಿಧ ರೀತಿಯಲ್ಲಿ ಶ್ರಮಿಸಿದ್ದಾರೆ ಎಂದರು.

ಒಳಮೀಸಲಾತಿ ಜಾರಿಯ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆ ಎಂದು ಸುಪ್ರೀಂ ಕೋರ್ಟ್ ಹೇಳುತ್ತಿದ್ದಂತೆ ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಒಳಮೀಸಲಾತಿ ಜಾರಿಗೆ ಆಯೋಗನ್ನು ರಚಿಸಿ.. ಆಯೋಗ ವರದಿ ನೀಡುತ್ತಿದ್ದಂತೆಯೇ ಜಾರಿಗೆ ತಂದೇ ತರುತ್ತೇನೆಂದು ಘೋಷಿಸಿದ್ದಾರೆ.ಈ ಘೋಷಣೆ ಆಗುತ್ತಿದ್ದಂತೆಯೇ ಇದ್ದಕ್ಕಿದ್ದಂತೆ ಕೆಲವೇ ಜನ ಮೀಸಲಾತಿಗೆ ಸಂಬಂಧಪಟ್ಟಂತೆ ವಿವಿಧ ರೀತಿಯ ಹೋರಾಟಗಳನ್ನು ನಡೆಸುತ್ತಿದ್ದಾರೆ, ಇದರಲ್ಲಿ ನೆಲಮಂಗಲದ ಭಾಸ್ಕರ್ ಪ್ರಸಾದ್ ಎಂಬುವವರು ಯಾವಾಗಿನಿಂದಲೂ ಸಹಾ ಈ ಹೋರಾಟದ ಬಗ್ಗೆ ಯಾವುದನ್ನು ಮಾಡದ ಅವರು ಈಗ ಮೀಸಲಾತಿಯ ಬಗ್ಗೆ ಪಾದಯಾತ್ರೆ.. ರಥಯಾತ್ರೆ ಹೋದ ಸ್ಥಳಗಳಲ್ಲೆಲ್ಲಾ ಭಾಸ್ಕರ್ ಪೋನ್ ಪೇ, ಪೋನ್ ಪೇ, ಗೂಗಲ್ ಪೇ ಗೂಗಲ್ ಪೇ ಹಣ ಕೊಡಿ.. ಹಣ ಕೊಡಿ ಎಂದು ಮುಗ್ಧ ಮಾದಿಗ ಸಮುದಾಯದ ನೌಕರರು ಮತ್ತು ಜನರಿಂದ ಹೇರಳವಾಗಿ ಹಣ ಸಂಗ್ರಹ ಮಾಡಿದ ಈ ರೋಲ್ ಕಾಲ್ ಭಾಸ್ಕರ್ನ ಅಕೌಂಟ್ಗೆ ಎಷ್ಟು ಹಣ ಹೋಗಿದೆ ಎಂದು ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.

ಈತನ ವಿರುದ್ಧ ಚಿತ್ರದುರ್ಗ ಸೇರಿ ರಾಜ್ಯಾದ್ಯಂತ ಸಮುದಾಯದವರು ದೂರು ದಾಖಲಿಸಲಿದ್ದಾರೆ. ಮಾದಿಗ ಸಮುದಾಯವರು ಈತನನ್ನು ನಂಬುತ್ತಿಲ್ಲ. ಜೊತೆಗೆ ಅನೇಕ ಸಂಘಟನೆಗಳು ಈತನನ್ನು ದೂರ ಇಟ್ಟಿವೆ. ಪೊಲೀಸರು ಈತನು ಎಲ್ಲಿಯಾದರೂ ಕಂಡ ತಕ್ಷಣ ಆತನನ್ನು ಹಿಡಿದುಕೊಂಡು ಮಾನಸಿಕ ವೈದ್ಯರ ಬಳಿ ಚಿಕಿತ್ಸೆ ಕೊಡಿಸುವುದು ಜನರ ಹಿತದೃಷ್ಟಿಯಿಂದ ಒಳ್ಳೆಯದು. ಒಳಮೀಸಲಾತಿ ಜಾರಿಗೆ ದಿನಗಣನೆ ಆರಂಭವಾಗಿದೆ.ನ್ಯಾ. ನಾಗಮೋಹನ್ ದಾಸ್ ಆಯೋಗ ಶೀಘ್ರದಲ್ಲಿಯೇ ವರದಿ ಸಲ್ಲಿಸಲಿದ್ದು, ಮುಖ್ಯಮಂತ್ರಿ  ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅದನ್ನು ತಕ್ಷಣ ಸ್ವೀಕರಿಸಿ ಆಗಸ್ಟ್ ಅಂತ್ಯದೊಳಗೆ ಜಾರಿಗೊಳಿಸಲಿದೆ.ಈ ಸತ್ಯ ಅರಿತಿರುವ ಇವನು.ನನ್ನಿಂದಲೇ ಒಳಮೀಸಲಾತಿ ಜಾರಿ ಗೊಂಡಿತು ಎಂದು ನಂಬಿಸಲು ಅನಗತ್ಯವಾಗಿ ಹಾರಾಟ ನಡೆಸುತ್ತಿದ್ದಾನೆ ಎಂದು ತಿಳಿಸಿದರು.

 

ಒಳಮೀಸಲಾತಿ ಜಾರಿ ವಿಷಯದಲ್ಲಿ ಯಾವುದೇ ರೀತಿ ನಕಲಿ ಹೋರಾಟಗಾರರು ಲಾಭಗಳಿಸಲು ನಾವೆಲ್ಲರೂ ಬಿಡುವುದಿಲ್ಲ.30 ವರ್ಷಗಳಿಂದ ಹೋರಾಟ ನಡೆಸಿದ ದ.ಸಂ.ಸ ಸೇರಿ ನಮ್ಮ ಸಮುದಾಯದ ಸಂಘಟನೆಗಳು.. ಹೋರಾಟಗಾರರಿಗೆ ಗೌರವ ಸಲ್ಲಬೇಕು.ಒಳಮೀಸಲಾತಿ ಜಾರಿಗೆ ತರುವ ಸುವರ್ಣಾವಕಾಶ ಸಾಮಾಜಿಕ ನ್ಯಾಯದ ಹರಿಕಾರ ಮುಖ್ಯಮಂತ್ರಿ  ಸಿದ್ದರಾಮಯ್ಯರವರಿಗೆ ಒಲಿದಿರುವುದು ಅವರ ಭಾಗ್ಯ.., ಒಳ ಮೀಸಲಾತಿ ಪಡೆಯುತ್ತಿರುವುದು ನಮ್ಮ ಭಾಗ್ಯ. ಭಾಸ್ಕರ್ ಪ್ರಸಾದ್ ಇವನು ಪೇಸ್ಬುಕ್ ಮತ್ತು ವಾಟ್ಸಪ್ನಲ್ಲಿ ನಮ್ಮ ನಾಯಕರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ವೀಡಿಯೋ ಕ್ಲಿಪ್ ಗಳನ್ನೆಲ್ಲಾ ಪೊಲೀಸ್ ಇಲಾಖೆಯವರಿಗೆ ತಲುಪಿಸಿದ್ದೇವೆ.ಮತ್ತು ಭಾಸ್ಕರನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಕೂಡಲೇ ಬಂಧಿಸುವಂತೆ ಆಗ್ರಹಿಸಿದರು.

ಗೋಷ್ಟಿಯಲ್ಲಿ ಜಿ.ಪಂ.ಮಾಜಿ ಸದಸ್ಯ ನರಸಿಂಹರಾಜು, ನ್ಯಾಯಾವಾದಿಗಳಾದ ಶರಣಪ್ಪ, ರವೀಂದ್ರ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶಿವಣ್ಣ, ಅನಿಲ್ ಕೋಟೆ ಸೇರಿದಂತೆ ಇತರರು ಭಾಗವಹಿಸಿದ್ದರು.

 

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon