Ganesh Chathurthi : ಚತುರ್ಥಿ ಹಬ್ಬದ ಇತಿಹಾಸ, ಮಹತ್ವ ಮತ್ತು ಆಚರಣೆಗಳು ಇಲ್ಲಿವೆ.. – ನಿಮಗೆ ಈ ಎಲ್ಲಾ ವಿಷ್ಯಗಳು ತಿಳಿದಿರಲಿ..

ಭಾರತದ ಮತ್ತೊಂದು ಪ್ರಮುಖ ಹಬ್ಬವಾದ ಗಣೇಶ ಚತುರ್ಥಿಯನ್ನು ಆಚರಿಸುವ ಸಂಭ್ರಮದಲ್ಲಿ ನಾವಿದ್ದೇವೆ. ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ, ಹತ್ತು ದಿನಗಳ ಅವಧಿಯ ಹಬ್ಬವು ಪ್ರತಿ ವರ್ಷ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳಲ್ಲಿ ಬರುತ್ತದೆ. ಈ ಹಬ್ಬವು ಭಗವಾನ್ ಶಿವ ಮತ್ತು ಪಾರ್ವತಿ ದೇವಿಯ ಮಗನಾದ ಭಾದ್ರಪದ ಮಾಸದ ಶುಕ್ಲ ಪಕ್ಷದಲ್ಲಿ ಜನಿಸಿದ ಭಗವಾನ್ ಗಣೇಶನ ಜನ್ಮವನ್ನು ಸೂಚಿಸುತ್ತದೆ. ಈ ಆಚರಣೆಯು ಆಗಸ್ಟ್ 31 ರಂದು ಪ್ರಾರಂಭವಾಗುತ್ತದೆ ಮತ್ತು ಅನಂತ ಚತುರ್ದಶಿಯಂದು ಮುಕ್ತಾಯಗೊಳ್ಳುತ್ತದೆ.

ಗಣೇಶ ವಿಸರ್ಜನೆ ಅಥವಾ ನಿಮಜ್ಜನವು ಹಬ್ಬದ ಕೊನೆಯ ದಿನವಾದ ಸೆಪ್ಟೆಂಬರ್ 19 ರಂದು ನಡೆಯುತ್ತದೆ. ಗಣೇಶ ಚತುರ್ಥಿ ಹಬ್ಬದ ಇತಿಹಾಸ, ಮಹತ್ವ ಮತ್ತು ಆಚರಣೆಯ ಬಗ್ಗೆ ಇಲ್ಲಿದೆ ಮಾಹಿತಿ.

ಗಣೇಶ ಚತುರ್ಥಿಯ ಇತಿಹಾಸ:

ಪುರಾಣದ ಪ್ರಕಾರ, ಗಣೇಶನು ಪಾರ್ವತಿ ದೇವಿಯ ಸೃಷ್ಟಿ ಎಂದು ನಂಬಲಾಗಿದೆ. ಭಗವಾನ್ ಶಿವನ ಅನುಪಸ್ಥಿತಿಯಲ್ಲಿ, ಪಾರ್ವತಿ ದೇವಿಯು ತನ್ನ ಮೈಯಲ್ಲಿದ್ದ ಶ್ರೀಗಂಧದಿಂದ ಗಣೇಶನನ್ನು ಸೃಷ್ಟಿಸಿದಳುಮತ್ತು ತಾನು ಸ್ನಾನಕ್ಕೆಂದು ಹೋಗುವಾಗ ಗಣೇಶನನ್ನು ಕಾವಲಿಗಾಗಿ ನಿಲ್ಲಿಸಿ ಹೋದಳು.

ಆದರ್ಶ ಮಗುವಾಗಿ, ಗಣೇಶನು ತನ್ನ ತಾಯಿಯ ಸೂಚನೆಗಳನ್ನು ಅನುಸರಿಸಿದನು ಮತ್ತು ಯಾರನ್ನೂ ಮನೆಗೆ ಬಿಡಲಿಲ್ಲ. ಶಿವನ ಅರಿವಿಲ್ಲದಿದ್ದರೂ, ಅವನು ಬರುವಾಗ ಅವನನ್ನು ಮನೆಯೊಳಗೆ ಪ್ರವೇಶಿಸದಂತೆ ತಡೆದನು. ಇದು ಇಬ್ಬರ ನಡುವೆ ಯುದ್ಧಕ್ಕೆ ಕಾರಣವಾಯಿತು ಮತ್ತು ಕೋಪಗೊಂಡ ಶಿವನು ಅವನ ತಲೆಯನ್ನು ಕತ್ತರಿಸಿದನು.

Advertisement

ಇದನ್ನು ತಿಳಿದ ಪಾರ್ವತಿಯು ಕ್ರುದ್ಧಳಾದಳು ಮತ್ತು ಕಾಳಿ ದೇವತೆಯಾಗಿ ರೂಪಾಂತರಗೊಂಡಳು. ಅವಳು ಜಗತ್ತನ್ನು ಕೊನೆಗೊಳಿಸುವುದಾಗಿ ಬೆದರಿಕೆ ಹಾಕಿದಳು. ದೇವರು ಮತ್ತು ದೇವತೆಗಳು ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಲು ಮತ್ತು ಕಾಳಿ ದೇವಿಯ ಕೋಪವನ್ನು ಶಾಂತಗೊಳಿಸಲು ಶಿವನನ್ನು ಪ್ರಾರ್ಥಿಸಿದರು.

ಭಗವಾನ್ ಶಿವನು ಅಂತಿಮವಾಗಿ ಒಂದು ಪರಿಹಾರವನ್ನು ಕಂಡುಹಿಡಿದನು. ಯಾರು ಉತ್ತರ ದಿಕ್ಕಿಗೆ ತಲೆಯನ್ನಿಟ್ಟು ಮಲಗಿರುತ್ತಾರೋ ಅವರ ತಲೆಯನ್ನು ಕಡಿದು ತರುವಂತೆ ತನ್ನ ಎಲ್ಲಾ ಅನುಯಾಯಿಗಳಿಗೆ ಆದೇಶಿಸಿದನು. ಅನುಯಾಯಿಗಳು ಕೆಲ ಸಮಯಗಳವರೆಗೆ ಹುಡುಕಿದ ನಂತರ ಅವರಿಗೆ ಆನೆ ಮರಿಯು ಉತ್ತರ ದಿಕ್ಕಿಗೆ ತಲೆಯಿಟ್ಟು ಮಲಗಿರುವುದು ಕಾಣಿಸಿತು. ಶಿವನ ಅನುಯಾಯಿಗಳು ಅದನ್ನು ಕತ್ತರಿಸಿ ತಂದು ಶಿವನಿಗೆ ನೀಡುತ್ತಾರೆ. ಶಿವನು ಅದನ್ನು ಗಣೇಶನ ದೇಹಕ್ಕೆ ಜೋಡಿಸಿ ಅವನನ್ನು ಜೀವಂತಗೊಳಿಸಿದನು.

ಚತುರ್ಥಿ ಮಹತ್ವ

ಹತ್ತು ದಿನಗಳ ಕಾಲ ನಡೆದ ಈ ಆಚರಣೆಯಲ್ಲಿ ಜನರು ಗಣೇಶನ ಪ್ರತಿಮೆಯನ್ನು ಸ್ಥಾಪಿಸಿ ಪೂಜಿಸಿದರು. ಹಬ್ಬದ ಹತ್ತನೇ ದಿನವಾದ ವಿಸರ್ಜನೆ ದಿನದಂದು, ಭಕ್ತರು ಮೆರವಣಿಗೆಯನ್ನು ತೆಗೆದುಕೊಂಡು ‘ಗಣಪತಿ ಬಪ್ಪ ಮೋರಿಯಾ’ ಎಂದು ಕೂಗನ್ನು ಹಾಕುತ್ತಾರೆ. ಕೆಲವು ಭಕ್ತರು ತಮ್ಮ ಕುಟುಂಬದ ಸಂಪ್ರದಾಯದಂತೆ ಮೂರನೇ, ಐದನೇ ಅಥವಾ ಏಳನೇ ದಿನದಂದು ವಿಸರ್ಜನೆಯನ್ನು ಮಾಡುತ್ತಾರೆ.

ನಾಲ್ಕು ಪ್ರಮುಖ ಆಚರಣೆಗಳಿವೆ

ಗಣೇಶ ಚತುರ್ಥಿಯು ನಾಲ್ಕು ಮುಖ್ಯ ಆಚರಣೆಗಳನ್ನು ಹೊಂದಿದೆ. ಅದೆನೆಂದರೆ ಪ್ರತಿಷ್ಠಾಪನೆ, ಶೋಡಶೋಪಚಾರ, ಉತ್ತರಪೂಜೆ ಮತ್ತು ವಿಸರ್ಜನೆ ಪೂಜೆ. ಆ ದಿನ ಜನರು ತಮ್ಮ ಮನೆಗಳನ್ನು ಹೂವು ಮತ್ತು ರಂಗೋಲಿಗಳಿಂದ ಅಲಂಕರಿಸುತ್ತಾರೆ, ಜೊತೆಗೆ ಗಣೇಶನ ಮಣ್ಣಿನ ವಿಗ್ರಹಗಳನ್ನು ತಂದು ಪೂಜೆ ಮಾಡುತ್ತಾರೆ. ಚತುರ್ಥಿಯ ದಿನದಂದು ಎಲ್ಲ ಕಡೆಗಳಲ್ಲಿಯೂ ವಿವಿಧ ಭಂಗಿಯ ಗಣಪನನ್ನು ಕೂರಿಸಿ, ನೈವೇದ್ಯ ಅರ್ಪಿಸಿ, ಗಣಪನಿಗೆ ಅದ್ದೂರಿ ಸ್ವಾಗತ ಕೋರುತ್ತಾರೆ.

ಪ್ರಾಣಪ್ರತಿಷ್ಠೆ ಅಥವಾ ಪ್ರತಿಷ್ಠಾಪನಾ ಆಚರಣೆಯನ್ನು ಪುರೋಹಿತರು ಮಂತ್ರವನ್ನು ಪಠಿಸುವ ಮೂಲಕ ಗಣೇಶನನ್ನು ಮನೆಯಲ್ಲಿ ಕೂರಿಸಲಾಗುತ್ತದೆ. ಅದರ ನಂತರ, 16 ವಿಭಿನ್ನ ಆಚರಣೆಗಳನ್ನು ನಡೆಸಲಾಗುತ್ತದೆ. ಇದನ್ನು ಶೋಡಶೋಪಚಾರ ಪೂಜೆ ಎಂದು ಕರೆಯಲಾಗುತ್ತದೆ. ಗಣೇಶನ ನೆಚ್ಚಿನ ಪ್ರಸಾದ ಎಂದು ಹೇಳಲಾಗುವ ಮೋದಕವನ್ನು ಮಾಡಿ ನೈವೇದ್ಯ ಅರ್ಪಿಸಿ ಪೂಜೆ ಮಾಡಲಾಗುತ್ತದೆ. ಜೊತೆಗೆ ಗಣೇಶನಿಗೆ ಇತರ ಸಿಹಿತಿಂಡಿಗಳು ಮತ್ತು ಹಣ್ಣುಗಳನ್ನೂ ಅರ್ಪಿಸಲಾಗುತ್ತದೆ.

ಜನರು ಧಾರ್ಮಿಕ ಭಕ್ತಿಗೀತೆಗಳನ್ನು ಹಾಡುವ ಮೂಲಕ, ನೃತ್ಯ ಮಾಡುತ್ತಾರೆ ಮತ್ತು ರುಚಿಕರವಾದ ಊಟವನ್ನು ತಯಾರಿಸುವ ಮೂಲಕ ಹಬ್ಬವನ್ನು ಆಚರಿಸುತ್ತಾರೆ. ಗಣೇಶ ಚತುರ್ಥಿಯ ಮೂರನೇ ಮುಖ್ಯ ಆಚರಣೆ ಉತ್ತರಪೂಜೆ ಇದು ಗಣೇಶನಿಗೆ ವಿದಾಯ ಹೇಳುವ ಕ್ರಮವಾಗಿದೆ.

ಇನ್ನು ಗಣೇಶ ಚತುರ್ಥಿಯ 10 ನೇ ಮತ್ತು ಕೊನೆಯ ದಿನದಂದು, ಗಣೇಶನ ವಿಗ್ರಹವನ್ನು ಹತ್ತಿರದ ನದಿಯಲ್ಲಿ ಪೂರ್ಣ ಭಕ್ತಿಯಿಂದ ಮುಳುಗಿಸಲಾಗುತ್ತದೆ ಮತ್ತು ಈ ಸಮಾರಂಭವನ್ನು ಗಣೇಶ ವಿಸರ್ಜನೆ ಎಂದು ಕರೆಯಲಾಗುತ್ತದೆ. ಜನರು ಗಣಪನನ್ನ ನಾನಾ ಹೆಸರುಗಳಿಂದ ಕೂಗುತ್ತಾ, ಅವನ ನಾಮಾಂಕಿತವನ್ನು ಜಪಿಸುತ್ತಾರೆ, ಜೊತೆಗೆ ಮುಂದಿನ ವರ್ಷ ಬಾ ಎಂದು ಗಣೇಶನನ್ನು ಬೇಡಿಕೊಳ್ಳುತ್ತಾರೆ.

 

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement