ಬೆಂಗಳೂರು : ಭಾಗ್ಯಲಕ್ಷ್ಮಿ ಫಲಾನುಭವಿಗಳೇ ಗಮನಿಸಿ, ಮೆಚ್ಯುರಿಟಿ ಹಣ ಪಡೆಯಲು ಸರ್ಕಾರ ಸೂಚನೆ ನೀಡಿದೆ. ಬೆಂಗಳೂರು ಜಿಲ್ಲಾ ವ್ಯಾಪ್ತಿಯಲ್ಲಿ 2006-07ರಲ್ಲಿ ವಿತರಣೆ ಮಾಡಿದ್ದ ಭಾಗಲಕ್ಷ್ಮೀ ಬಾಂಡ್ಗಳು ಇದೀಗ ಮೆಚ್ಯುರಿಟಿ ಆಗಿವೆ. ಹಣ ಪಡೆಯಲು ಸೂಚನೆ ನೀಡಿದೆ.
18 ವರ್ಷದ ಹಿಂದೆ ನೋಂದಣಿಯಾಗಿದ್ದು 1,520 ಫಲಾನುಭವಿಗಳಿಗೆ ಎಲ್ ಐಸಿ ಯಿಂದ ಮೆಚ್ಯುರಿಟಿ ಮೊತ್ತ ಮಂಜೂರಾಗಿದೆ. ಹೆಚ್ಚಿನ ಮಾಹಿತಿಗೆ ಹತ್ತಿರದ ಅಂಗನವಾಡಿ ಕೇಂದ್ರ ಅಥವಾ ಶಿಶು ಅಭಿವೃದ್ಧಿ ಯೋಜನೆಯ ಬೆಂಗ ಳೂರು ರಾಜ್ಯ ಯೋಜನೆ ಕಚೇರಿ, 1ನೇ ಮಹಡಿ, ಬಿಬಿಎಂಪಿ ಕಟ್ಟಡ, ಎನ್.ಆರ್.ಕಾಲೋನಿ ಬೆಂಗಳೂರು ಇಲ್ಲಿ ಸಂಪರ್ಕಿಸಬಹುದು ಎಂದು ಯೋಜನೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಕಟಣೆ ಹೊರಡಿಸಿದ್ದಾರೆ.