ಚಿತ್ರದುರ್ಗ: ಮೆದೆಹಳ್ಳಿ ರಸ್ತೆಯಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ 26ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಗುರುಪೂರ್ಣಮಿ ದಿನಾಂಕ 10.07.2025ನೇ ಗುರುವಾರ ದಂದು ವಾರ್ಷಿಕೋತ್ಸವದ ಅಂಗವಾಗಿ ಪೂಜಾ ಕಾರ್ಯಕ್ರಮಗಳನ್ನು ಏರ್ಪಡಿಸ ಲಾಯಿತು.
ಈ ಸಂದರ್ಭದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ದೇವರಿಗೆ ವಿಶೇಷ ಅಭಿಷೇಕ ಮತ್ತು ಅಲಂಕಾರ ಮಾಡಲಾಯಿತು. ಬೆಳಿಗ್ಗೆ 10.30 ಕ್ಕೆ ಶ್ರೀ ಲಕ್ಷ್ಮಿ ನಾರಾಯಣ ಹೃದಯಾ ಹೋಮ 12:30 ಗಂಟೆಗೆ ಪೂರ್ಣವತಿ ನೆರವೇರುವುದು. ಈ ಪೂರ್ಣಾವತಿಗೆ ಭಕ್ತಾದಿಗಳು ಸೀರೆ, ಕುಪ್ಪಸ, ಹಣ್ಣು, ದವಸ ಧಾನ್ಯಗಳು ತುಪ್ಪ ಗಂಧ ಹಾಗೂ ಇನ್ನಿತರೆ ಪೂಜಾ ಸಾಮಗ್ರಿಗಳನ್ನುc ಪೂರ್ಣಹುತಿ
ಅರ್ಪಿಸಿದರು.
ಮಧ್ಯಾಹ್ನ 1:00 ಗೆ ಅನ್ನ ಸಂತರ್ಪಣೆ ಕಾರ್ಯಕ್ರಮವು ಪ್ರಾರಂಭವಾಗಿ ಸಾವಿರಾರು ಭಕ್ತರು ಸ್ವೀಕರಿಸಿದರು ಈ ಪೂಜೆಯ ಸೇವಾ ಕರ್ತರು ಶ್ರೀಮತಿ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಮತ್ತು ಮಕ್ಕಳು ಮಹೇಶ್ ಮೋಟರ್ಸ್ ಹಾಗೂ ದೇವಸ್ಥಾನದ ಶಾಮಿಯಾನ ಮತ್ತು ವಿದ್ಯುತ್ ದೀಪ ಅಲಂಕಾರ ಸೇವಾಕರ್ತರು ಶ್ರೀಮತಿ ಶ್ರೀ ಹನುಮಂತರೆಡ್ಡಿ ಮತ್ತು ಮಕ್ಕಳು ಮಾರುತಿ ಶಾಮಿಯಾನ. ಇದರ ಅಧ್ಯಕ್ಷತೆಯನ್ನು ಶರಣ್ ಕುಮಾರ್ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ಚಿತ್ರದುರ್ಗ ಹಾಗೂ ಕಾರ್ಯದರ್ಶಿಯಾದ ಎಂಪಿ ವೆಂಕಟೇಶ್ ಉಪಾಧ್ಯಕ್ಷರು ಹಾಗೂ ನಿರ್ದೇಶಕರು ಉಪಸ್ಥಿತರಿರುವರು. ಈ ಎಲ್ಲಾ ಪೂಜಾ ಕಾರ್ಯಕ್ರಮಕ್ಕೆ ಚಿತ್ರದುರ್ಗದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು ಸ್ವಾಮಿಕೃಪೆಗೆ ಪಾತ್ರರಾದರು.