ಮಹಿಳೆಯರು ತ್ರಿಶೂಲವನ್ನು (Trishula) ವ್ಯಾನಿಟಿ ಬ್ಯಾಗ್ನಲ್ಲಿಟ್ಟುಕೊಳ್ಳಿ. ಯಾರಾದರು ಚುಡಾಯಿಸಿದರೆ ಅಥವಾ ಅತ್ಯಾಚಾರ ಮಾಡಲು ಬಂದ್ರೆ ಚುಚ್ಚಿಬಿಡಿ. ಎಲ್ಲಿ ಒದಿಬೇಕು ಅಂತ ಗೊತ್ತಿದೆ ಅಲ್ವಾ, ಅಲ್ಲಿಗೆ ಒದ್ದುಬಿಡಿ ಎಂದು ಶ್ರೀರಾಮಸೇನೆ (Sri Ram Sena) ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಹುಬ್ಬಳ್ಳಿಯ ಶಿವಕೃಷ್ಣ ಮಂದಿರದಲ್ಲಿ ಶ್ರೀರಾಮ ಸೇನೆವತಿಯಿಂದ ಹಿಂದೂ ಮಹಿಳೆಯರಿಗೆ ತ್ರಿಶೂಲ ದೀಕ್ಷೆ ನೀಡಲಾಯಿತು. ಈ ಕಾರ್ಯಕ್ರಮಕ್ಕೆ ಬಂದ ಪ್ರತಿಯೊಬ್ಬ ಹೆಣ್ಮಕ್ಕಳಿಗೂ ಶ್ರೀರಾಮಸೇನೆ ಕಾರ್ಯಕರ್ತರು ತ್ರಿಶೂಲ ಹಂಚಿದರು. ತ್ರಿಶೂಲಗಳನ್ನು ಪಡೆದ ಮಹಿಳೆಯರು ಅದನ್ನು ಪ್ರದರ್ಶನ ಮಾಡಿದರು.
ತ್ರಿಶೂಲ ದೀಕ್ಷೆ ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಮೋದ್ ಮುತಾಲಿಕ್, ಆಯುಧ ಪೂಜೆ ದಿನ ಮನೆಯಲ್ಲಿ ತಲವಾರ ಪೂಜೆ ಮಾಡಬೇಕು. ಆದರೆ, ಇಂದು ಪುಸ್ತಕ ಪೆನ್ನು ಇಟ್ಟು ಪೂಜೆ ಮಾಡುತ್ತಿದ್ದೇವೆ. ದುರ್ಗಾಮಾತೆಯ ಕೈಯಲ್ಲಿ ಹತ್ತು ಶಸ್ತ್ರಗಳಿವೆ. ಈಶ್ವರನ ಕೈಯಲ್ಲಿ ತ್ರಿಶೂಲವಿದೆ. ಅದನ್ನೇ ಮಹಿಳೆಯರ ಕೈಗೆ ಕೊಡುತ್ತಿದ್ದೇವೆ. ಮುಂದಿನ ಆಯುಧ ಪೂಜೆ ದಿನ ಹರಿತವಾದ ತಲವಾರ ಇಟ್ಟು ಪೂಜೆ ಮಾಡಿ ಎಂದು ಹೇಳಿದರು. ನಾವು ನೀಡುತ್ತಿರುವ ತ್ರಿಶೂಲ ಬಗ್ಗೆ ಯಾರು ಭಯ ಪಡಬೇಡಿ. ಹಿಡಿಕೆ ಬಿಟ್ಟು ಆರು ಇಂಚು ಉದ್ದ ಇದ್ದರೇ ಅದು ಆಯುಧವಾಗುತ್ತದೆ. ಆದರೆ, ನಾವು ನೀಡುತ್ತಿರುವುದು ಮೂರು ಇಂಚಿನ ತ್ರಿಶೂಲ. ಯಾರಾದರು ಕೇಳಿದರೆ, ಮೊದಲು ಅವರಿಗೆ ಚುಚ್ಚಿಬಿಡಿ. ಪೊಲೀಸರು ಬಂದೂಕಿಗೆ ಪೂಜೆ ಮಾಡುತ್ತಾರೆ. ಹೀಗಾಗಿ, ನಾವು ಯಾಕೆ ತ್ರಿಶೂಲ ಇಟ್ಟುಕೊಳ್ಳಲು ಭಯ ಪಡಬೇಕು ಎಂದರು.
ಇಂದಿಗೆ ಸಿರಿಯಾಗಿ ಒಂದು ವರ್ಷದ ಹಿಂದೆ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆಯಾಯಿತು. ಹತ್ಯೆ ಮಾಡಿದ ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು. ಅಂದಾಗ ಮಾತ್ರ ನೇಹಾ ಹಿರೇಮಠ ಹತ್ಯೆಗೆ ನ್ಯಾಯ ಸಿಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೂರೇ ತಿಂಗಳಿನಲ್ಲಿ ನ್ಯಾಯ ಕೊಡಿಸ್ತೇನೆ ಅಂತ ಹೇಳಿದ್ದರು. ಆದರೆ, ನಿದ್ರಾಮಯ್ಯನವರೇ ಏನು ಮಾಡುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನ್ಯಾಯಾಲಯ ಆತನಿಗೆ ಜಾಮೀನು ನೀಡಿದರೇ, ನಾವೇ ಅವನನ್ನು ಕಲ್ಲು ಹೊಡೆದು ಕೊಂದು ಹಾಕುತ್ತೇವೆ. ನೇಹಾ ಹಿರೇಮಠ ಪ್ರೀತಿ ಮಾಡಿರಬಹುದು. ಆದರೆ, ಮದುವೆ ಆಗಲ್ಲ ಅಂತ ಹೇಳಿದ್ದಕ್ಕೆ ಕೊಂದು ಬಿಡುವುದಾ? ಮೋಸ ಮಾಡಿ ಹಿಂದೂ ಯುವತಿಯರನ್ನು ಲವ್ ಜಿಹಾದ್ ಮಾಡುತ್ತಿದ್ದಾರೆ. ಅಬ್ದಲ್ಲಾ, ಅಶೋಕ ಅಂತ ಹೇಳಿ ಪ್ರೀತಿ ಮಾಡುತ್ತಾನೆ. ಪ್ರೀತಿ ಮಾಡಿ ಬುರ್ಕಾ ಹಾಕಿಸಿ, ನಮಾಜ ಮಾಡಿಸಿ ಗೋ ಮಾಂಸ ತಿನಿಸುತ್ತಿದ್ದಾರೆ. ಈ ದೇಶವನ್ನು ಮತ್ತೊಂದು ಪಾಕಿಸ್ತಾನ ಮಾಡಲು ಹೊರಟಿದ್ದಾರೆ ಎಂದು ಹೇಳಿದ್ದಾರೆ.
ಅವರಿಗೆ ಹಂದಿ ಕಂಡರೆ ಆಗಲ್ಲ
ಒಂಬತ್ತು ಲಕ್ಷ ಎಕರೆ ವಕ್ಪ್ ಬೋರ್ಡ್ ಅಧಿನದಲ್ಲಿದೆ. ಇದು ಐದು ಪಾಕಿಸ್ತಾನ, ಹತ್ತು ಬಾಂಗ್ಲಾದೇಶಕ್ಕೆ ಸಮಾನವಾಗಿದೆ. ಜನಸಂಖ್ಯೆ ಹೆಚ್ಚಿಸಲು ನಾಲ್ಕೈದು ಮದುವೆ ಮಾಡಿಕೊಳ್ಳುತ್ತಾರೆ. ಹಮ್ ಪಾಂಚ್, ಹಮಾರ ಪಚ್ಚಿಸ್ ಅಂತಾರೆ. ಹೀಗಾಗಿ, ಅವರಿಗೆ ಹಂದಿ ಕಂಡರೆ ಆಗಲ್ಲ. ಹಿಂದೂ ದಂಪತಿಗಳು ಮೂರು, ನಾಲ್ಕು, ಡಜನ್ಗಟ್ಟಲೆ ಮಕ್ಕಳಿಗೆ ಜನ್ಮ ನೀಡಿ. ಮೂರನೇ ಮಗುವಿನ ಶಿಕ್ಷಣ, ಆರೋಗ್ಯ ಜವಾಬ್ದಾರಿ ಶ್ರಿರಾಮಸೇನೆ ಹೊತ್ತುಕೊಳ್ಳುತ್ತೆ. ದೇಶ ಉಳಿಸಬೇಕಾಗಿದೆ. ನಿಮಗೆ ಸಾಕಲು ಸಾದ್ಯವಾಗದಿದ್ದರೆ ನಾವು ಸಾಕುತ್ತೇವೆ ಎಂದರು.