IAS ರುಕ್ಮಣಿ ರಿಯಾರ್ ಯುಪಿಎಸ್‌ಸಿ ಯಶಸ್ಸಿನ ಕಥನ

WhatsApp
Telegram
Facebook
Twitter
LinkedIn

ಪಂಜಾಬ್ : ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆ ಅತ್ಯಂತ ಕಠಿಣ ಪರೀಕ್ಷೆಯಾಗಿ ಹೆಸರುವಾಸಿಯಾಗಿದ್ದು, ಪ್ರತಿ ವರ್ಷ ಲಕ್ಷಾಂತರ ಅಭ್ಯರ್ಥಿಗಳು ಇದರ ಪ್ರಿಲಿಮ್ಸ್ ಹಂತಕ್ಕೆ ಹಾಜರಾಗುತ್ತಾರೆ. ಆದರೆ, ಅದರಲ್ಲಿ ಕೆಲವೇ ಜನರು ಮುಖ್ಯ ಪರೀಕ್ಷೆ ಮತ್ತು ಸಂದರ್ಶನ ಹಂತಕ್ಕೆ ತಲುಪುತ್ತಾರೆ. ಇಂತಹ ಅಧ್ವಿತೀಯ ಸಾಧನೆಯ ಪಾತ್ರಧಾರಿ ರುಕ್ಮಣಿ ರಿಯಾರ್, ಪಂಜಾಬ್‌ನ ಗುರುದಾಸ್ಪುರದಿಂದ ಬರುವ ಅವರು, ಸ್ವಯಂ ಅಧ್ಯಯನದಿಂದ ಉತ್ಕೃಷ್ಟ ಸಾಧನೆ ಮಾಡಿ, ಐಎಎಸ್ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದಾರೆ.

ರುಕ್ಮಣಿ ರಿಯಾರ್ ಅವರು ಬಾಲ್ಯದಿಂದಲೂ ಪ್ರತಿಭಾವಂತ ವಿದ್ಯಾರ್ಥಿನಿಯಾಗಿರಲಿಲ್ಲ. ಅವರು ಏಳನೇ ತರಗತಿಯಲ್ಲಿ ಅನುತ್ತೀರ್ಣಳಾದರೂ, ತಮ್ಮ ಶಿಕ್ಷಣ ಮತ್ತು ಭವಿಷ್ಯಕ್ಕಾಗಿ ಅವರ ಕುಟುಂಬವು ಎಚ್ಚರಿಕೆಯಿಂದ ಗಮನ ಹರಿಸಿತು. ಶಾಲಾ ದಿನಗಳಲ್ಲಿ ಸಾಧಾರಣ ಪ್ರಯತ್ನದ ಬಳಿಕ, ರುಕ್ಮಣಿ ರಿಯಾರ್ ಅವರು ಡಾಲ್ಹೌಸಿ ಸೇಕ್ರೆಡ್ ಹಾರ್ಟ್ ಶಾಲೆಗೆ ಸೇರಿದರು.

ರುಕ್ಮಣಿ ಅಮೃತಸರದ ಗುರುನಾನಕ್ ದೇವ್ ವಿಶ್ವವಿದ್ಯಾಲಯದಿಂದ ಸಮಾಜ ವಿಜ್ಞಾನದಲ್ಲಿ ಪದವಿ ಪಡೆದರು. ಸ್ನಾತಕೋತ್ತರ ಪದವಿಯನ್ನು ಮುಂಬೈನ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್‌ನಲ್ಲಿ ಚಿನ್ನದ ಪದಕವನ್ನು ಪಡೆದು ಮುಕ್ತಾಯಗೊಳಿಸಿದರು.

ಅವರು ಮೈಸೂರಿನ ಅಶೋಧ್ಯ ಮತ್ತು ಮುಂಬೈನ ಅನ್ನಪೂರ್ಣ ಮಹಿಳಾ ಮಂಡಲ್‌ನಲ್ಲಿ ಇಂಟರ್ನ್‌ಶಿಪ್ ಮಾಡಿದ ನಂತರ, ನಾಗರಿಕ ಸೇವೆಗೆ ಆಸಕ್ತಿಯಾದರು ಮತ್ತು UPSC ಪರೀಕ್ಷೆಗೆ ತಯಾರಿ ನಡೆಸಲು ನಿರ್ಧರಿಸಿದರು. ಅವರು ಐಎಎಸ್ ಸಿದ್ಧಾರ್ಥ್ ಸಿಹಾಗ್ ಅವರನ್ನು ವಿವಾಹವಾದರು ಮತ್ತು ಅವರ ಪ್ರೇರಣೆ ಸಹಾಯದಿಂದ ಅವರು UPSC ಪ್ರವೇಶ ಪರೀಕ್ಷೆಗೆ ತಯಾರಾದರು.

ರುಕ್ಮಣಿ ರಿಯಾರ್ ಅವರು ಯಾವುದೇ ತರಬೇತಿ ಪಡೆಯದೇ, ಸ್ವಯಂ ಅಧ್ಯಯನದ ಮೂಲಕ UPSC ಗೆ ತಯಾರಿ ನಡೆಸಿದರು. ಅವರು ಮೊದಲ ಪ್ರಯತ್ನದಲ್ಲಿಯೇ ಅಖಿಲ ಭಾರತ ರ್ಯಾಂಕ್ 2 (AIR 2) ಗಳಿಸಿ, ತಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣೆಗೆ ಪ್ರತಿಫಲವಾಗಿ UPSC ಪರೀಕ್ಷೆಯನ್ನು ತೇರ್ಗಡೆಗೊಳಿಸಿದರು.

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon