ಬೆಂಗಳೂರು : ತಪ್ಪು ಮಾಹಿತಿಗಳನ್ನು ತಡೆಗಟ್ಟಲು ಕರ್ನಾಟಕ ಸರ್ಕಾರ ಮಸೂದೆ ರಚಿಸಿರುವ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಭಾರತವು ಸುಳ್ಳು ಮಾಹಿತಿಗಳ ರಾಜಧಾನಿಯಾಗಿದೆ ಎಂದು ವಿಶ್ವ ಆರ್ಥಿಕ ವೇದಿಕೆ ವರದಿ ನೀಡಿದೆ ಎಂದು ನುಡಿದ ಅವರು, ಇದನ್ನು ತಡೆಗಟ್ಟಲು ಸರ್ಕಾರ ಸಿದ್ದವಾಗಿದೆ ಎಂದರು.
ನಾವು ಸುಳ್ಳು ಹಾಗೂ ತಪ್ಪು ಮಾಹಿತಿ ಹರಡುವುದರಲ್ಲಿ ಮೊದಲನೇ ಸ್ಥಾನದಲ್ಲಿದ್ದೇವೆ. ಇದು ದೇಶದ ಕಾನೂನು ಸುವ್ಯವಸ್ಥೆಯ ಬೇರುಮಟ್ಟಕ್ಕೆ ಹೊಡೆತ ನೀಡುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಇತ್ತೀಚಿಗಷ್ಟೇ ಸೇನಾ ಮುಖ್ಯಸ್ಥರು ತಮ್ಮ ಸೇನೆಯ ಶೇ 50 ರಷ್ಟು ಸಿಬ್ಬಂದಿ ಸುಳ್ಳು ಸುದ್ದಿಗಳ ವಿರುದ್ದ ಹೋರಾಡುತ್ತಿದೆ ಎಂದಿದ್ದಾರೆ. ಚುನಾವಣಾ ಆಯೋಗವೂ ಸಹ 3M ( ಮನಿ, ಮಸಲ್ ಪವರ್ ಮತ್ತು ಮಿಸ್ ಇನ್ಫರ್ಮೇಷನ್)ಗಳಿಂದ ಪಾರದರ್ಶಕ ಚುನಾವಣಾ ವ್ಯವಸ್ಥೆಗೆ ಅಡ್ಡಿಯಾಗಿದೆ ಎಂದು ಒಪ್ಪಿಕೊಂಡಿದೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ಗಿಗಳೂ ಸಹ ಸುಳ್ಳು ಸುದ್ದಿಗಳು ಭಾರತಕ್ಕೆ ಎರವಾಗಿದೆ ಎಂದು ಹೇಳಿದ್ದಾರೆಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.