ನವದೆಹಲಿ: ಪ್ರಧಾನಿ ಸ್ಥಾನವನ್ನು ಮೋದಿ ಅವರು ಅಲಂಕರಿಸುವ ಮೊದಲು ಭಾರತವನ್ನು ಜಗತ್ತಿನಲ್ಲೇ ಅಭಿವೃದ್ಧಿ ಹೊಂದದ ಮತ್ತು ಹಿಂದುಳಿದ ರಾಷ್ಟ್ರ ಎಂದು ಪರಿಗಣಿಸಲಾಗಿತ್ತು. ಆದರೆ ಈಗ ಪ್ರಧಾನಿ ಮೋದಿ ಮತ್ತು ಭಾರತದ ಖ್ಯಾತಿ ವಿಶ್ವದಲ್ಲಿ ಹೆಚ್ಚಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತ ಹೇಳಿದ್ದಾರೆ.
ಪ್ರಸ್ತುತ ವಿದೇಶಗಳಲ್ಲಿ ಭಾರತೀಯರನ್ನು ಶುಭಾಶಯ, ನಮಸ್ಕಾರಗಳ ಜೊತೆಗೆ ಸ್ವಾಗತ ಮಾಡಲಾಗುತ್ತಿದೆ. ಪ್ರಧಾನಿ ಮೋದಿ ಅವರು ದೇಶವನ್ನು ಸ್ವಾವಲಂಬಿ ರಾಷ್ಚ್ರವನ್ನಾಗಿಸಲು ಮತ್ತು ಸಮೃದ್ಧವನ್ನಾಗಿ ಮಾಡಲು ಕೆಲಸ ಮಾಡುತ್ತಿದ್ದಾರೆ. ದೆಹಲಿಯಲ್ಲೂ ತ್ರಿಬಲ್ ಎಂಜಿನ್ ಬಿಜೆಪಿ ಆಡಳಿತ ನಡೆಸುತ್ತಿದ್ದು ಇದು ಸುವರ್ಣ ಯುಗ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿಶ್ವದಲ್ಲೇ 2014 ಕ್ಕೂ ಮೊದಲು ಭಾರತ ಹಿಂದುಳಿದ ರಾಷ್ಟ್ರ ಎಂದೇ ಬಿಂಬಿಸಲ್ಪಟ್ಟಿತ್ತು. ಆದರೆ ಈಗ ನಾವು ವಿದೇಶಕ್ಕೆ ಹೋಗಿ ಭಾರತೀಯರು ಎಂದು ಹೇಳಿದರೆ ನಮಸ್ಕಾರ ಎಂದು ಶುಭಾಶಯ ಕೋರುತ್ತಾರೆ. ದೆಹಲಿಯಲ್ಲೂ ಬಿಜೆಪಿ ಆಡಳಿತ ನಡೆಯುತ್ತಿದ್ದು ಇದು ದೆಹಲಿಗೆ ಚಿನ್ನದ ಯುಗ ಎಂದು ಅವರು ಹೇಳಿದ್ದಾರೆ.