ನವದೆಹಲಿ : ಕೇಂದ್ರ ಲೋಕಸೇವಾ ಆಯೋಗ ನಡೆಸುವ ಅಖಿಲ ಭಾರತ ನಾಗರೀಕ ಸೇವೆಗಳ ಪರೀಕ್ಷೆ ದೇಶದ ಅತಿ ಕಠಿಣ ಪರೀಕ್ಷೆ. ಆದರೆ ಲಕ್ಷಾಂತರ ಅಭ್ಯರ್ಥಿಗಳು ಪರೀಕ್ಷೆ ಬರೆದರು ಸಹ ಗೆಲ್ಲುವುದು, ಯಶಸ್ಸು ಗಳಿಸುವುದು ಸಾವಿರ ಸಂಖ್ಯೆಯಲ್ಲಿ ಮಾತ್ರ. ಅದೇ ರೀತಿ ಮಂದರ್ ಪತ್ಕಿ ಒಬ್ಬ ಇಂಜಿನಿಯರ್ ತನ್ನ ಸ್ವಯಂ ಅಧ್ಯಯನ ಮೂಲಕ ಮೊದಲ ಪ್ರಯತ್ನದಲ್ಲೇ 22ನೇ ರ್ಯಾಂಕ್ ನಲ್ಲಿ ಯುಪಿಎಸ್ಸಿ ಪಾಸ್ ಆದ ಸಕ್ಸಸ್ ಸ್ಟೋರಿ ಇಲ್ಲಿದೆ.
ಮಂದರ್ ಪತ್ಕಿ ಮಹಾರಾಷ್ಟ್ರ ಮೂಲದವರು. ಮಂದರ್ ಪತ್ಕಿ ಶೈಕ್ಷಣಿಕವಾಗಿ ಯಾವುದೇ ರ್ಯಾಂಕ್ ವಿದ್ಯಾರ್ಥಿ ಏನಲ್ಲ. ಪುಣೆಯ ವಿಶ್ವಕರ್ಮ ತಾಂತ್ರಿಕ ಸಂಸ್ಥೆಯಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದರು. ಅದಕ್ಕೂ ಮೊದಲು ಪುಣೆಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲೊಮ ಅಧ್ಯಯನ ಮಾಡಿದ್ದರು. ತಮ್ಮ ಇಂಜಿನಿಯರಿಂಗ್ ಪದವಿ ನಂತರವೇ ಇವರು ಯುಪಿಎಸ್ಸಿ ಪರೀಕ್ಷೆ ಬರೆಯಲು ನಿರ್ಧರಿಸಿದರು.
ಇಂಜಿನಿಯರಿಂಗ್ ಮುಗಿಯುತ್ತಿದ್ದಂತೆ ಯಾವುದೇ ಕೋಚಿಂಗ್ ಇಲ್ಲದೆ ಸ್ವಯಂ ಅಧ್ಯಯನದಿಂದ ತಮ್ಮ ಮೊದಲ ಪ್ರಯತ್ನದಲ್ಲೇ ನಾಗರೀಕ ಸೇವೆಗಳ ಪರೀಕ್ಷೆಯನ್ನು ಪಾಸ್ ಮಾಡಿದರು.
2020ನೇ ಬ್ಯಾಚ್ನಲ್ಲಿ ಮಹಾರಾಷ್ಟ್ರ ಕೇಡರ್ನ ಐಎಎಸ್ ಅಧಿಕಾರಿಯಾದವರು. ಪ್ರಸ್ತುತ ಇಂಟಿಗ್ರೇಟೆಡ್ ಟ್ರೈಬಲ್ ಡೆವಲಪ್ಮೆಂಟ್ ಸಚಿವಾಲಯದಲ್ಲಿ ಮಂದರ್ ಅಸಿಸ್ಟಂಟ್ ಕಲೆಕ್ಟರ್ ಮತ್ತು ಪ್ರಾಜೆಕ್ಟ್ ಆಫೀಸರ್ ಆಗಿ ನಿಯೋಜನೆಗೊಂಡಿದ್ದಾರೆ.2022ರ ಜುಲೈ ನಿಂದ ನವೆಂಬರ್ ವರೆಗೆ ಬುಡಕಟ್ಟು ವ್ಯವಹಾರಗಳ ಸಚಿವಾಲಯದಲ್ಲಿ ಅಸಿಸ್ಟಂಟ್ ಸೆಕ್ರೇಟರಿ ಆಗಿ ಸೇವೆ ಸಲ್ಲಿಸಿದ್ದರು. ಅದಕ್ಕೂ ಮುನ್ನ ಅಮರಾವತಿ’ಯಲ್ಲಿ ತರಬೇತುದಾರ ಅಸಿಸ್ಟಂಟ್ ಕಲೆಕ್ಟರ್ ಆಗಿ ಕರ್ತವ್ಯ ಸಲ್ಲಿಸಿದ್ದರು.
ಮಂದರ್ ಪತ್ಕಿ ಶೈಕ್ಷಣಿಕವಾಗಿ ಯಾವುದೇ ರ್ಯಾಂಕ್ ವಿದ್ಯಾರ್ಥಿ ಏನಲ್ಲ. ಪುಣೆಯ ವಿಶ್ವಕರ್ಮ ತಾಂತ್ರಿಕ ಸಂಸ್ಥೆಯಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದರು. ಅದಕ್ಕೂ ಮೊದಲು ಪುಣೆಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲೊಮ ಅಧ್ಯಯನ ಮಾಡಿದ್ದರು. ತಮ್ಮ ಇಂಜಿನಿಯರಿಂಗ್ ಪದವಿ ನಂತರವೇ ಇವರು ಯುಪಿಎಸ್ಸಿ ಪರೀಕ್ಷೆ ಬರೆಯಲು ನಿರ್ಧರಿಸಿದ್ದು.ಸ್ವಯಂ ಅಧ್ಯಯನ ಮಾದರಿ ಅನುಸರಿಸಿ, ಒಂದು ವರ್ಷದಲ್ಲೇ ಯುಪಿಎಸ್ಸಿ ಪರೀಕ್ಷೆಯನ್ನು ಟಾಪ್ 22 ನೇ ರ್ಯಾಂಕ್ ನಲ್ಲಿ ಪಾಸ್ ಮಾಡಿದ ಇವರು ಎಷ್ಟೋ ಯುಪಿಎಸ್ಸಿ ಆಕಾಂಕ್ಷಿಗಳಿಗೆ ಮಾದರಿ.