ಪಿಯು ಫೇಲ್ ಆಗಿ ಟೆಂಪೊ ಡ್ರೈವರ್ ಕೆಲಸ ಮಾಡುತ್ತಲೇ ಓದಿ IPS ಆಗಿದ್ದ ಮನೋಜ್‌ ಕುಮಾರ್ ಈಗ IG

WhatsApp
Telegram
Facebook
Twitter
LinkedIn

ನವದೆಹಲಿ : 9, 10ನೇ ತರಗತಿಯಲ್ಲಿ ಸಿ ಗ್ರೇಡ್‌ ವಿದ್ಯಾರ್ಥಿ ಆಗಿದ್ದರು, 12ನೇ ತರಗತಿ ಫೇಲ್ ಆಗಿದ್ದರು ಸಹ ಛಲ ಬಿಡದೇ ಟೆಂಪೋ ಡ್ರೈವರ್ ಆಗಿ ಕೆಲಸ ಮಾಡುತ್ತಲೇ ಐಪಿಎಸ್‌ ಅಧಿಕಾರಿ ಆದ ಮನೋಜ್‌ ಕುಮಾರ್‌ ಶರ್ಮಾರ ಯಶಸ್ಸಿನ ಸ್ಟೋರಿ.

ದೇಶದ ಯುವಜನತೆಗೆ ಅದರಲ್ಲೂ ಕಡು ಬಡತನದಲ್ಲಿ ಓದುವ ವಿದ್ಯಾರ್ಥಿಗಳಿಗೆ ದೇಶದಾದ್ಯಂತ ಸ್ಫೂರ್ತಿಯಾಗಿರುವ ಐಪಿಎಸ್‌ ಅಧಿಕಾರಿ ಮನೋಜ್‌ ಕುಮಾರ್ ಶರ್ಮಾ ರವರು ಈಗ ಜೆನೆರಲ್‌ ಇನ್ಸ್‌ಪೆಕ್ಟರ್ (ಐಜಿ) ಆಗಿ ಭಡ್ತಿ ಪಡೆದಿದ್ದಾರೆ.

ಇವರು 12ನೇ ತರಗತಿ ವಾರ್ಷಿಕ ಪರೀಕ್ಷೆಯಲ್ಲಿ ಫೇಲ್‌ ಆಗಿದ್ದರು. ಆದರು ತಮ್ಮ ಛಲ ಬಿಡದೇ ಓದಿದ ಮನೋಜ್‌ ಕುಮಾರ್‌ ದೇಶದ ಕಠಿಣ ಪರೀಕ್ಷೆಯಾದ ನಾಗರೀಕ ಸೇವೆಗಳ ಪರೀಕ್ಷೆ ಬರೆದು ಐಪಿಎಸ್‌ ಅಧಿಕಾರಿ ಆಗುವವರೆಗೆ ಹಿಂದೆ ತಿರುಗಿ ನೋಡಲೇ ಇಲ್ಲ. ಹನ್ನೆರಡನೇ ತರಗತಿ ಫೇಲ್‌ ಹಾಗೂ ಐಪಿಎಸ್ ಅಧಿಕಾರಿ ಆಗುವುದರ ನಡುವೆ ಇವರ ಜೀವನ ಮತ್ತು ಓದಿದ ಬಗೆಯಂತು ಪ್ರತಿಯೊಬ್ಬ ಬಡ ಕುಟುಂಬದ ಯುಪಿಎಸ್‌ಸಿ ಆಕಾಂಕ್ಷಿಗೆ ಸ್ಪೂರ್ತಿ ನೀಡದೇ ಇರದು.

ಮನೋಜ್ ಕುಮಾರ್ ರವರು ಮೂಲತಃ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯವರು. ಚಿಕ್ಕ ವಯಸ್ಸಿನಿಂದಲೇ ಇವರು ಐಎಎಸ್‌ ಅಧಿಕಾರಿ ಆಗುವ ಕನಸು ಕಂಡವರು. ದುರದೃಷ್ಟವಶಾತ್ ಇವರು ದ್ವಿತೀಯ ಪಿಯುಸಿ / 12ನೇ ತರಗತಿಯಲ್ಲಿ ಫೇಲ್‌ ಆದರು. ಅಷ್ಟೇ ಅಲ್ಲದೇ ಇವರು 9, 10ನೇ ತರಗತಿಯಲ್ಲಿ ಸಿ ಗ್ರೇಡ್‌ ಸ್ಟೂಡೆಂಟ್‌ ಆಗಿದ್ದವರು.

ಹನ್ನೆರಡನೇ ತರಗತಿಯಲ್ಲಿ ಹಿಂದಿ ವಿಷಯ ಒಂದನ್ನು ಹೊರತು ಪಡಿಸಿ ಮಿಕ್ಕೆಲ್ಲಾ ವಿಷಯಗಳಲ್ಲಿ ಇವರು ಫೇಲ್‌ ಆಗಿದ್ದರು. ಈ ಸೋಲುಗಳು ಇದ್ದರೂ ಸಹ ಅವರ ನಂಬಿಕೆ ಹಾಗೂ ಛಲವನ್ನು ಬಿಡಲಿಲ್ಲ. ಗುರಿಯನ್ನು ಪಕ್ಕಕ್ಕೆ ಸರಿಸಲಿಲ್ಲ. ದೇಶದ ಉನ್ನತ ಪರೀಕ್ಷೆ ಹಾಗೂ ಅತಿ ಟಫ್ ಪರೀಕ್ಷೆಯಾದ ಯುಪಿಎಸ್‌ಸಿ ಸಿಎಸ್‌ಇ ಪರೀಕ್ಷೆಗೆ ಓದಲು ಆರಂಭಿಸಿದರಂತೆ.

ಮನೋಜ್ ಕುಮಾರ್ ರವರು ತಮ್ಮ ಬಗ್ಗೆಯೇ ಒಂದು ಪುಸ್ತಕವನ್ನು ‘Twelth Fail’ ಎಂಬ ಹೆಸರಿನೊಂದಿಗೆ ಬರೆದಿದ್ದಾರೆ. ಇದರಲ್ಲಿ ಅವರು ತಾವು ಓದುವಾಗ ಗ್ವಾಲಿಯಾರ್‌ನಲ್ಲಿ ಟೆಂಪೊ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದೆ ಎಂದು ಬರೆದಿದ್ದಾರೆ. ಇದಕ್ಕೆ ಕಾರಣ ಅವರ ಕುಟುಂಬದ ಕಡುಬಡತನ. ಇರಲು ಸಹ ಒಂದು ಮನೆಯೂ ಇರದಂತಹ ಒಂದು ಬಡತನವಾಗಿತ್ತು.

ಲ್ರೈಬರಿ ಪೀವನ್‌ ಆಗಿ ದೆಹಲಿಯಲ್ಲಿ ಕೆಲಸ ಮಾಡಿದ್ದರು. ಇದೇ ವೇಳೆ ಅವರು ದೊಡ್ಡ ದೊಡ್ಡ ವ್ಯಕ್ತಿಗಳ ಕುರಿತು ಓದಿಕೊಂಡಿದ್ದರಂತೆ. ಗೋರ್ಕಿ ಮತ್ತು ಅಬ್ರಹಾಂ ಲಿಂಕನ್ ರಿಂದ ಮುಕ್ತಬೋಧ್‌ ವರೆಗೆ ಓದಿದ್ದರಂತೆ. ಈ ಬುಕ್‌ಗಳನ್ನು ಓದಿದ ನಂತರ ತಮ್ಮ ಬದುಕಿನ ಆಯಾಮಗಳನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದರ ಬಗ್ಗೆ ಹೇಳಿಕೊಂಡಿದ್ದಾರೆ.

ತಮ್ಮ ಕಠಿಣ ಪರಿಶ್ರಮದಿಂದ ಯುಪಿಎಸ್‌ಸಿ ಪರೀಕ್ಷೆ ಬರೆದು ಯಶಸ್ಸು ಪಡೆದ ಮನೋಜ್ ಕುಮಾರ್ 2005 ರಲ್ಲಿ ಮಹಾರಾಷ್ಟ್ರ ಕೇಡರ್‌ನಲ್ಲಿ ಐಪಿಎಸ್‌ ಅಧಿಕಾರಿ ಆದರು. ಪ್ರಸ್ತುತ ಮುಂಬೈ ಪಶ್ಚಿಮ ವಿಭಾಗದಲ್ಲಿ ಹೆಚ್ಚುವರಿ ಕಮಿಷನರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon