ಬೆಂಗಳೂರು: ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಆಡಳಿತಾತ್ಮಕ ಕಾರಣಗಳಿಂದ 18 ಡಿವೈಎಸ್ಪಿ (ಸಿವಿಲ್) ಅಧಿಕಾರಿಗಳನ್ನು ವಿವಿಧ ಹುದ್ದೆಗಳಿಗೆ ವರ್ಗಾವಣೆ ಮಾಡಲಾಗಿದೆ. ಪೊಲೀಸ್ ಮಹಾನಿರ್ದೇಶಕರು ಮತ್ತು ಮಹಾನಿರೀಕ್ಷಕರ (DG & IGP) ಕಚೇರಿಯಿಂದ ಈ ಕುರಿತು ಆದೇಶ ಹೊರಡಿಸಲಾಗಿದೆ.
ಪೊಲೀಸ್ ಸಿಬ್ಬಂದಿ ಮಂಡಳಿಯ ನಡಾವಳಿ ಹಾಗೂ ಸರ್ಕಾರದ ಮಾರ್ಗಸೂಚಿಗಳ ಅನ್ವಯ ಈ ವರ್ಗಾವಣೆ ಮಾಡಲಾಗಿದೆ. ವರ್ಗಾವಣೆಯಾದ ಅಧಿಕಾರಿಗಳು ಯಾವುದೇ ಸೇರ್ಪಡೆ ಕಾಲಾವಕಾಶ ಪಡೆಯದೆ ತಕ್ಷಣವೇ ಹೊಸ ಹುದ್ದೆಯಲ್ಲಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ.
ಅಲ್ಲದೆ, ಸಂಬಂಧಪಟ್ಟ ಘಟಕಗಳ ಅಧಿಕಾರಿಗಳು ವರ್ಗಾವಣೆಯಾದ ಸಿಬ್ಬಂದಿಯನ್ನು ಕೂಡಲೇ ಕರ್ತವ್ಯದಿಂದ ಬಿಡುಗಡೆ ಮಾಡಿ, ಅವರು ಹೊಸ ಸ್ಥಳದಲ್ಲಿ ಕರ್ತವ್ಯಕ್ಕೆ ಹಾಜರಾದ ಬಗ್ಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ
ವರ್ಗಾವಣೆಯಾದ 18 ಡಿವೈಎಸ್ಪಿಗಳ ಪಟ್ಟಿ
ರವಿ ಹೆಚ್ – ಸಿಐಡಿಯಿಂದ ಸಿಟಿ ಎಸ್ಬಿ, ಬೆಂಗಳೂರು ನಗರ
ಲೋಕೇಶ್ ಎ.ಸಿ – ಸಿಇಎನ್, ಉಡುಪಿಯಿಂದ ಡಿಸಿಆರ್ಇ
ಶಿವಾನಂದ ಎನ್. ಮದರಖಂಡಿ – ದಾಂಡೇಲಿ ಉಪ ವಿಭಾಗದಿಂದ ಡಿಸಿಆರ್ಇ
ಅಯ್ಯನಗೌಡ ಟಿ. ಪಾಟೀಲ್ – ರಾಜ್ಯ ಗುಪ್ತವಾರ್ತೆಯಿಂದ ಡಿಸಿಆರ್ಇ
ಪ್ರತಾಪ್ ಸಿಂಗ್ ಧೋರಾಟ್ – ರಾಜ್ಯ ಗುಪ್ತವಾರ್ತೆಯಿಂದ ಡಿಸಿಆರ್ಇ
ಮಲ್ಲೇಶಪ್ಪ ಮಲ್ಲಾಪುರ – ರಾಜ್ಯ ಗುಪ್ತವಾರ್ತೆಯಿಂದ ಕರ್ನಾಟಕ ಲೋಕಾಯುಕ್ತ
ಮುತ್ತಪ್ಪ ಎಸ್. ಪಾಟೀಲ್ – ಸಿಐಡಿಯಿಂದ ಕರ್ನಾಟಕ ಲೋಕಾಯುಕ್ತ
ಜಗದೀಶ ಹೆಚ್.ಎಸ್ – ರಾಜ್ಯ ಗುಪ್ತವಾರ್ತೆಯಿಂದ ಕರ್ನಾಟಕ ಲೋಕಾಯುಕ್ತ
ಲತಾ ಬಿ.ಕೆ – ರಾಜ್ಯ ಗುಪ್ತವಾರ್ತೆಯಿಂದ ಐಜಿಪಿ, ಪೂರ್ವ ವಲಯ, ದಾವಣಗೆರೆ
ಕೃಷ್ಣಮೂರ್ತಿ ಕೆ – ಐಜಿಪಿ, ಪೂರ್ವ ವಲಯ, ದಾವಣಗೆರೆಯಿಂದ ಡಿಸಿಆರ್ಇ
ಮೊಹಮ್ಮದ್ ಹಶ್ರತ್ ಖಾನ್ – ಹೊಳೆನರಸೀಪುರ ಉಪ ವಿಭಾಗ, ಹಾಸನದಿಂದ ಪಿಟಿಸಿ, ಕಲಬುರಗಿ
ಎಂ.ಎಸ್. ನಾಯ್ಕರ್ – ಸಿಐಡಿ, ಅರಣ್ಯ ಘಟಕ, ಹುಬ್ಬಳ್ಳಿಯಿಂದ ಬೆಳಗಾವಿ ಗ್ರಾಮೀಣ ಉಪ ವಿಭಾಗ
ಗಂಗಾಧರ್ ಬಿ.ಎಂ – ಬೆಳಗಾವಿ ಗ್ರಾಮೀಣ ಉಪ ವಿಭಾಗದಿಂದ ಡಿಸಿಆರ್ಇ
ಸುನೀಲ್ ವೈ. ನಾಯ್ಕ – ಕರ್ನಾಟಕ ಲೋಕಾಯುಕ್ತದಿಂದ ಸಿಸಿಬಿ, ಬೆಂಗಳೂರು ನಗರ
ನಾಗರಾಜ ಎಂ.ಎನ್ – ಸಿಸಿಬಿ, ಬೆಂಗಳೂರು ನಗರದಿಂದ ಡಿಸಿಆರ್ಇ
ಬಾಲಕೃಷ್ಣ ಸಿ – ಸಿಸಿಪಿಎಸ್, ವೈಟ್ಫೀಲ್ಡ್ ವಿಭಾಗದಿಂದ ಹಲಸೂರು ಉಪ ವಿಭಾಗ, ಬೆಂಗಳೂರು
ಜಿ.ಆರ್. ಶಿವಮೂರ್ತಿ – ಸಿಸಿಪಿಎಸ್, ಮಂಡ್ಯದಿಂದ ಚನ್ನರಾಯಪಟ್ಟಣ ಉಪ ವಿಭಾಗ, ಹಾಸನ
ಗಿರೀಶ್ ಬಿ – ಭಟ್ಕಳ ಉಪ ವಿಭಾಗದಿಂದ ಸಿಟಿ ಎಸ್ಬಿ, ಬೆಂಗಳೂರು ನಗರ