ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ಎಲು ನರ ಚರ್ಮ ಮಜ್ಜೆ ಮಾಂಸದೊಳಗಾದ
ಕ್ರಿಮಿ ಎನ್ನಂಗದೊಳು ಹುಟ್ಟಿ,
ಮಲ ಹುಣ್ಣು ಉಗುಳುಗಳಲ್ಲಿ ಬೀಳುವುದ ಕಂಡು
ಅವ ನಾ ರಕ್ಷಿಸಿದೆನೆ?
ಅವು ಬೀಳಬೇಕೆಂದು ನಾ ಶಿಕ್ಷಿಸಿದೆನೆ?
ಇಂತೀ ಜೀವದ ದೃಷ್ಟವ ಕಂಡು
ಎನಗಿದೆತ್ತಣ ಸರ್ವ ಜೀವದಯ
ಈ ರಕ್ತದ ಲೇಪವ ಬಿಡಿಸಾ,
ಕಲ್ಲು ಮಣ್ಣು ಮರನಂತೆಚೆನ್ನ ದಸರೇಶ್ವರಲಿಂಗಾ.
-ದಸರಯ್ಯ