4ನೇ ಪ್ರಯತ್ನದಲ್ಲಿ UPSC ಪಾಸ್ ಮಾಡಿ IAS ಆದ ದೇವ್ ಚೌಧರಿ

WhatsApp
Telegram
Facebook
Twitter
LinkedIn

ರಾಜಸ್ಥಾನ : ಸತತ ಸೋಲಿನ ಬಳಿಕ ಯಶಸ್ಸು ಕಂಡವರಲ್ಲಿ ಐಎಎಸ್ ಅಧಿಕಾರಿ ದೇವ್ ಚೌಧರಿ ಕೂಡ ಒಬ್ಬರು. ಬಾರ್ಮರ್ ಮೂಲದ ದೇವ್ ಚೌಧರಿ ಅನೇಕ ವೈಫಲ್ಯಗಳ ನಂತರ 2016 ರಲ್ಲಿ UPSC ಅನ್ನು ಪಾಸ್‌ ಮಾಡುವ ಮೂಲಕ IAS ಅಧಿಕಾರಿಯಾದರು. ಅವರ ಸಕ್ಸಸ್ ಸ್ಟೋರಿ ಇಲ್ಲಿದೆ.

ರಾಜಸ್ಥಾನ ಕೇಡರ್ ನ 2016 ರ ಬ್ಯಾಚ್ ನ ಐಎಎಸ್ ಅಧಿಕಾರಿ ದೇವ್ ಚೌಧರಿ ಅವರು ಗಡಿ ಜಿಲ್ಲೆ ಬಾರ್ಮರ್ ನ ನಿವಾಸಿಯಾಗಿದ್ದಾರೆ. ದೇವ್ ತಮ್ಮ ನಾಲ್ಕನೇ ಪ್ರಯತ್ನದಲ್ಲಿ ಈ ಯಶಸ್ಸನ್ನು ಸಾಧಿಸಿದ್ದರು.

ದೇವ್ ಚೌಧರಿ ಅವರ ತಂದೆ ಶಿಕ್ಷಕರಾಗಿದ್ದರು. ಅವರ ಪ್ರಾಥಮಿಕ ಶಿಕ್ಷಣವು ಹಳ್ಳಿಯ ಶಾಲೆಯಲ್ಲಿ ನಡೆಯಿತು.ದೇವ್ ಚೌಧರಿ ಚಿಕ್ಕ ವಯಸ್ಸಿನಲ್ಲೇ ಐಎಎಸ್ ಆಗಬೇಕೆಂದು ನಿರ್ಧರಿಸಿದ್ದರು. ಪದವಿ ಮುಗಿದ ಕೂಡಲೇ ಯುಪಿಎಸ್ಸಿಗೆ ತಯಾರಿ ಆರಂಭಿಸಿದರು. ದೇವ್ ಚೌಧರಿ ಅವರು 2012 ರಲ್ಲಿ ಮೊದಲ ಬಾರಿಗೆ UPSC ಪರೀಕ್ಷೆಯನ್ನು ನೀಡಿದರು. ಮೊದಲ ಯತ್ನದಲ್ಲಿ ಪ್ರಿಲಿಮ್ಸ್ ಪಾಸ್‌ ಮಾಡಿದರು, ಆದರೆ ಮೇನ್ಸ್ನಲ್ಲಿ ವಿಫಲರಾದರು.

ದೇವ್ ತನ್ನ ಮುಂದಿನ ಪ್ರಯತ್ನವನ್ನು 2013 ರಲ್ಲಿ ನೀಡಿದರು. ಈ ಬಾರಿ ಪ್ರಿಲಿಮ್ಸ್ ಜೊತೆಗೆ ಮೇನ್ಸ್ ತೇರ್ಗಡೆಯಾಗಿದ್ದಾರೆ. ಆದರೆ ಸಂದರ್ಶನದ ಸುತ್ತಿನಲ್ಲಿ ಅವರು ಹೊರಬಿದ್ದರು. ಮತ್ತೆ ಅವರು 2014 ರಲ್ಲಿ ಮತ್ತೊಮ್ಮೆ UPSC ಪರೀಕ್ಷೆಯನ್ನು ನೀಡಿದರು. ಆ ಬಾರಿಯೂ ಐಎಎಸ್ ಆಗಲು ಸಾಧ್ಯವಾಗಲಿಲ್ಲ.ದೇವ್ ಚೌಧರಿ ಅವರು UPSC 2015 ರಲ್ಲಿ ತಮ್ಮ ನಾಲ್ಕನೇ ಪ್ರಯತ್ನದಲ್ಲಿ UPSC ಪರೀಕ್ಷೆಯಲ್ಲಿ ತೇರ್ಗಡೆಯಾದರು.

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon