ದಾವಣಗೆರೆ: ಕರ್ನಾಟಕ ಫೋಟೋಗ್ರಾಫರ್ ಮತ್ತು ವಿಡಿಯೋಗ್ರಾಫರ್ ಅಸೋಸಿಯೇಷನ್ (ರಿ) ಹಾಗೂ ದಾವಣಗೆರೆ ಜಿಲ್ಲೆ, ತಾಲ್ಲೂಕು ಫೋಟೋಗ್ರಾಫರ್ ಮತ್ತು ವಿಡಿಯೋ ಗ್ರಾಫರ್ ಅಸೋಸಿಯೇಷನ್ ವತಿಯಿಂದ ದಾವಣಗೆರೆ ಜಿಲ್ಲೆಗೆ ಸಂಬಂಧಿಸಿದಂತೆ ಎಲ್ಲಾ ಪ್ರೇಕ್ಷಣೀಯ ಸ್ಥಳಗಳು ಹಾಗೂ ದೇವಸ್ಥಾನಗಳಾದ ಹರಿಹರ, ನೀಲಗುಂದ, ಸಂತೆಬೆನ್ನೂರು, ಹಾಗೂ ಬಾಗಳಿ ಹಾಗೂ ಇನ್ನಿತರೆ ದೇವಸ್ಥಾನಗಳಲ್ಲಿ ಹೊರಾಂಗಣ ಚಿತ್ರೀಕರಣ ಪ್ರಿ ವೆಡ್ಡಿಂಗ್ ಫೋಟೋಶೂಟ್ ಹಾಗೂ ವಿಡಿಯೋ ಶೂಟ್ ಮಾಡಲು ಸ್ಥಳದಲ್ಲಿಯೇ ಟಿಕೆಟ್ ಕೌಂಟರ್ ಮಾಡುವುದರ ಮೂಲಕ ದರ ನಿಗದಿಪಡಿಸಿ ಅನುಮತಿ ಕೊಡಬೇಕೆಂದು ಕೇಳಿಕೊಳ್ಳುತ್ತೇವೆ
ಹಣ ಸಂಗ್ರಹಿಸುವುದರಿಂದ ದೇವಸ್ಥಾನದ ಅಭಿವೃದ್ಧಿಗಾಗಿ ಮತ್ತು ಜೀರ್ಣೋದ್ಧಾರ ಗಾಗಿ ಹೆಚ್ಚು ಆದಾಯ ಬರುತ್ತದೆ ಇತ್ತೀಚಿನ ದಿನಗಳಲ್ಲಿ ಫೋಟೋಶೂಟ್ ಮಾಡಲು ಅನುಮತಿ ಇಲ್ಲ ಎಂದು ದೇವಸ್ಥಾನಕ್ಕೆ ಸಂಬಂಧಪಟ್ಟ ಅರ್ಚಕರು ಹಾಗೂ ಸಿಬ್ಬಂದಿಗಳು ಹೇಳುತ್ತಿದ್ದಾರೆ
ಆದ ಕಾರಣ ತಾವುಗಳು ಟಿಕೆಟ್ ಮಾಡುವುದರ ಮೂಲಕ ಅನುಮತಿ ಕೊಡಬೇಕೆಂದು ಕೇಳಿಕೊಳ್ಳುತ್ತೇವೆ ಚಿತ್ರೀಕರಣ ಮಾಡುವುದರಿಂದ ದೇವಸ್ಥಾನವನ್ನು ದೇಶ ರಾಜ್ಯದ ಎಲ್ಲೆಡೆ ಪ್ರಚಾರ ವಾಗುತ್ತದೆ ಹಾಗೂ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ಕೊಟ್ಟಂತೆ ಆಗುತ್ತದೆ
ಇತ್ತೀಚಿಗೆ ಛಾಯಾಗ್ರಾಹಕರು ಹೊನ್ನಾವರ, ಮೈಸೂರು, ಉಡುಪಿ, ಬೆಂಗಳೂರು, ಗೋವಾ, ಇನ್ನಿತರ ಊರುಗಳಿಗೆ ಹೋಗುತ್ತಿದ್ದಾರೆ ಸಮಯ ಹಣ ಇಂಧನ ವ್ಯರ್ಥವಾಗುತ್ತದೆ ದಯಮಾಡಿ ತಾವುಗಳು ಕೂಡಲೇ ಪರಿಶೀಲಿಸಿ ಪ್ರಿ ವೆಡ್ಡಿಂಗ್ ಫೋಟೋ ಶೂಟ್
ಹಾಗೂ ವಿಡಿಯೋ ಶೂಟ್ ಅನುಮತಿ ಕೊಡಬೇಕೆಂದು ಜಿಲ್ಲಾಧಿಕಾರಿಗಳಾದ ಶ್ರೀ ಜಿ.ಎಂ. ಗಂಗಾಧರ್ ಸ್ವಾಮಿ ರವರಿಗೆ ಹಾಗೂ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳಿಗೆ ಮನವಿ ಅರ್ಪಿಸಲಾಯಿತು ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಮನು ಎಂ. ದೇವನಗರಿ ರಾಜ್ಯ ಕಾರ್ಯಧ್ಯಕ್ಷ ಕೊಂಡಜ್ಜಿ ಎಸ್. ರಾಜಶೇಖರ್ ರಾಜ್ಯ ಜಂಟಿ ಕಾರ್ಯದರ್ಶಿ ಡಿ ರಂಗನಾಥ ಜಿಲ್ಲಾಧ್ಯಕ್ಷ ಬಿ ಮಂಜುನಾಥ್ ತಾಲೂಕ ಅಧ್ಯಕ್ಷ ಎಚ್ಎಫ್ ಸಂಜಯ್ ಸೇರಿದಂತೆ ಇನ್ನಿತರ ಉಪಸ್ಥಿತರಿದ್ದರು