ದಾವಣಗೆರೆ : ಯುಗಾದಿ ಹಬ್ಬದ ಪ್ರಯುಕ್ತ ಕಾಳಿಕಾದೇವಿ ರಸ್ತೆಯಲ್ಲಿರುವ ಶ್ರೀ ಕಾಳಿಕಾ ದೇವಿ ವಿಶ್ವಕರ್ಮ ದೇವಸ್ಥಾನದಲ್ಲಿ ಮಾ.29ರ ಶನಿವಾರ ಯುಗಾದಿ ಅಮಾವಾಸ್ಯೆ ಪ್ರಯುಕ್ತ ಶ್ರೀ ದೇವಿಗೆ ಬೆಳಿಗ್ಗೆ ಪಂಚಾಮೃತ ಅಭಿಷೇಕ, ಪುಷ್ಪಾಲಂಕಾರ ಮತ್ತು ಗೋಧಿ ಉಡಿ ತುಂಬುವುದು, ನಂತರ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ.
ಮಾ. 30ರ ಭಾನುವಾರ ಯುಗಾದಿ ಪಾಡ್ಯ ದಿನದಂದು ಬೆಳಿಗ್ಗೆ ಪಂಚಾಮೃತ ಅಭಿಷೇಕ, ಪುಷ್ಪಾಲಂಕಾರ, ಮಂಗಳಾರತಿ, ಸಂಜೆ 6-30ಕ್ಕೆ ಶ್ರೀ ಕಾಳಿಕಾದೇವಿ ರಥೋತ್ಸವವನ್ನು ದೇವಸ್ಥಾನದಿಂದ ರಾಜಬೀದಿಗಳಲ್ಲಿ ನೆರವೇರಿಸಲಾಗುವುದು. ನಂತರ ಮಹಾಮಂಗಳಾರತಿ, ಬೇವು-ಬೆಲ್ಲದ ಪ್ರಸಾದವನ್ನು ವಿತರಿಸಲಾಗುವುದು. ರಥೋತ್ಸವ ಕಾರ್ಯಕ್ರಮಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ಶ್ರೀ ಕಾಳಿಕಾದೇವಿ ವಿಶ್ವಕರ್ಮ ದೇವಸ್ಥಾನ ಆಡಳಿತ ಸಮಿತಿ ಟ್ರಸ್ಟ್ ತಿಳಿಸಿದೆ.