ಬೆಂಗಳೂರು: ಪ್ರಶ್ನೆ ಮಾಡಿದ ಯುವತಿಯ ಮೇಲೆ BMTC ಬಸ್ ಹತ್ತಿಸಲು ಮುಂದಾಗಿದ್ದ ಬಸ್ ಚಾಲಕನನ್ನು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸೂಚನೆಯ ಮೇರೆಗೆ ಅಮಾನತುಗೊಳಿಸಿ, BMTC ಈ ಬಗ್ಗೆ ಆದೇಶ ಪ್ರಕಟಿಸಿದೆ.
ಮೇ 23 ರಂದು ಎಂಜಿ ರಸ್ತೆಯಲ್ಲಿ ಈ ಘಟನೆ ನಡೆದಿತ್ತು. ಪ್ರಶ್ನೆ ಮಾಡಿದ ಯುವತಿ ಮೇಲೆ ಬಸ್ ಚಾಲಕ ಬಸ್ ಹತ್ತಿಸಲು ಯತ್ನಿಸಿದ್ದ, ಅದೃಷ್ಟವಶಾತ್ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಪ್ರಶಾಂತ್ ಅಮಾನತಾದ ಚಾಲಕ. BMTC ಬಸ್ ಚಾಲಕನಿಗೆ ಯುವತಿ ಏನು ಪ್ರಶ್ನೆ ಮಾಡಿದ್ದಾಳೆಂದು ತಿಳಿದುಬಂದಿಲ್ಲ.