ಪ್ರಧಾನಿಗೆ 140 ಕೋಟಿ ಜನರ ಬೆಂಬಲವಿದೆ- ಸಚಿವ ಸಂತೋಷ ಲಾಡ್

WhatsApp
Telegram
Facebook
Twitter
LinkedIn

ಹುಬ್ಬಳ್ಳಿ: ಉಗ್ರರನ್ನು ಮಟ್ಟ ಹಾಕುವ ವಿಚಾರದಲ್ಲಿ ಭಾರತ ದೇಶದ 140 ಕೋಟಿ ಜನರ ಬೆಂಬಲವೂ ಪ್ರಧಾನ ನರೇಂದ್ರ ಮೋದಿ ಅವರಿಗಿದೆ. ಹಿಂದೂ, ಮುಸ್ಲಿಂ, ಸಿಖ್ ಸೇರಿದಂತೆ ಎಲ್ಲ ಸಮುದಾಯದ ಬೆಂಬಲವಿದೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನವನ್ನು ಮುಗಿಸಬೇಕು, ಧ್ವಂಸ ಮಾಡಬೇಕು, ಅಟ್ಯಾಕ್ ಮಾಡಬೇಕು, ನುಗ್ಗಿ ಹೊಡೆಯಬೇಕು ಅಷ್ಟೇ. ಏನು ಮಾಡಿದರೂ ದೇಶದ ಎಲ್ಲ ರಾಜಕೀಯ ಪಕ್ಷಗಳು ಅವರ ಪರವಾಗಿವೆ ಎಂದು ಪ್ರತಿಕ್ರಿಯಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವ ದಾಟಿಯಲ್ಲಿ `ಯುದ್ಧ ಬೇಡ’ ಎಂದಿದ್ದಾರೆ ಎಂಬುದನ್ನು ಅರ್ಥ ಮಾಡಕೊಳ್ಳಬೇಕು. ಸಿದ್ದರಾಮಯ್ಯ ಅಂತೆಯೇ ಪಿಯೂಷ್ ಗೋಯೆಲ್ ಕೂಡ ಹೇಳಿಕೆ ನೀಡಿದ್ದರು. ಅದನ್ನೇಕೆ ದೊಡ್ಡದು ಮಾಡಿಲ್ಲ ಎಂದು ಪ್ರಶ್ನಿಸಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಇಂತಹ ಘಟನೆಗಳನ್ನು ಸಮರ್ಥಿಸಿಕೊಳ್ಳುವವರಲ್ಲ ಎಂದು ಸಮಜಾಯಿಷಿ ನೀಡಿದರು.

ಪಾಕಿಸ್ತಾನದ ಒಳಗಾದರೂ ಹೋಗಲಿ, ಹೊರಗಾದರೂ ಹೊಡೆಯಲಿ. ಏನು ಮಾಡಬೇಕೋ ಅದನ್ನು ಮಾಡಲಿ. ಈ ಸಂಬಂಧ ನಾನು ಕೂಡ ಅಮಿತ್ ಶಾ ಜೊತೆಗೆ ಮಾತನಾಡಿದ್ದೇನೆ. ಪಾಕಿಸ್ತಾನವನ್ನು ಮುಗಿಸಲೇಬೇಕು. ಪ್ರಧಾನಿ ತೆಗೆದುಕೊಂಡ ನಿರ್ಧಾರಕ್ಕೆ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಬೆಂಬಲ ನೀಡಲಿದ್ದೇವೆ ಎಂದು ಪ್ರತಿಕ್ರಿಯಿಸಿದರು.

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon