ಐಎಎಸ್ ಮಿನ್ನು ಪಿಎಂ ಯಸಸ್ಸಿನ ಪಯಣದ ಕಥನ

WhatsApp
Telegram
Facebook
Twitter
LinkedIn

ತಿರುವನಂತಪುರಂ : ಪ್ರತಿ ವರ್ಷ ಸಾವಿರಾರು ಯುವಕರು ಭಾರತೀಯ ಆಡಳಿತ ಸೇವೆಗಳಲ್ಲಿ ಸ್ಥಾನ ಪಡೆಯಲು ಯುಪಿಎಸ್‌ಸಿ ಪರೀಕ್ಷೆ ಬರೆಯುತ್ತಾರೆ. ಇವುಗಳಲ್ಲಿ ಕೆಲವರು ಮೊದಲ ಪ್ರಯತ್ನದಲ್ಲಿಯೇ ಯಶಸ್ವಿಯಾಗುತ್ತಾರೆ, ಇನ್ನು ಕೆಲವರು ಹಲವು ವರ್ಷಗಳ ಪ್ರಯತ್ನ ಮತ್ತು ವೈಫಲ್ಯಗಳ ಬಳಿಕ ಗುರಿಯನ್ನು ತಲುಪುತ್ತಾರೆ. ಇಂತಹ ದಿಟ್ಟ ಮನಸ್ಸುಗಳ ಪೈಕಿ ಕೇರಳದ ಮಿನ್ನು ಪಿಎಂ ಅವರ ಹೆಸರು ಉಲ್ಲೇಖಿಸದೇ ಇರುವುದು ಸಾಧ್ಯವಿಲ್ಲ. ಅವರು ಯುಪಿಎಸ್‌ಸಿ ಸಿಎಸ್‌ಇ 2020ರಲ್ಲಿ ದೇಶದಮಟ್ಟದಲ್ಲಿ 150ನೇ ರ‍್ಯಾಂಕ್‌ ಪಡೆದು, ಇದೀಗ ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯಲ್ಲಿ ಜಿಲ್ಲಾ ಪರಿಷತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಮಿನ್ನು ಪಿಎಂ ಅವರ ಪ್ರಯಾಣ ಸುಲಬದ್ದಲ್ಲ. ಜೀವರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದ ಅವರು, 22ನೇ ವಯಸ್ಸಿನಲ್ಲಿ ಕೇರಳ ಪೊಲೀಸ್ ಇಲಾಖೆಯಲ್ಲಿ ಗುಮಾಸ್ತಳಾಗಿ ವೃತ್ತಿಜೀವನ ಪ್ರಾರಂಭಿಸಿದರು. 26ನೇ ವಯಸ್ಸಿನಲ್ಲಿ ಇನ್ನಷ್ಟು ದೊಡ್ಡ ಮಟ್ಟದಲ್ಲಿ ಸಮಾಜಕ್ಕೆ ಕೊಡುಗೆ ನೀಡಬೇಕೆಂಬ ಬಲವಾದ ಬಯಕೆಯಿಂದ ಯುಪಿಎಸ್‌ಸಿ ತಯಾರಿಗೆ ಪಾದಾರ್ಪಣೆ ಮಾಡಿದರು. ಪೂರ್ಣವಾಗಿ ಹೊಸ ಕ್ಷೇತ್ರವಾಗಿದ್ದುದರಿಂದ, ಯುಪಿಎಸ್‌ಸಿ ತಯಾರಿಯ ಪ್ರಾರಂಭಿಕ ದಿನಗಳು ಮಿನ್ನುವಿಗೆ ಅತ್ಯಂತ ಕಠಿಣವಾಗಿದ್ದವು. ಪತ್ರಿಕೆ ಓದುವುದು ಸಹ ಕಷ್ಟಕರವಾಗಿತ್ತು.

ಮಿನ್ನು ಪಿಎಂ ವೈಯಕ್ತಿಕ ಜೀವನದಲ್ಲಿ ಪತಿಯು ಇಸ್ರೋ ವಿಜ್ಞಾನಿಯಾಗಿದ್ದು, ತಾಯಿಯಾಗಿ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದರು. ಮಿನ್ನು ತಮ್ಮ ಕುಟುಂಬದಿಂದ ಸಿಕ್ಕ ತುಸು ಬೆಂಬಲವನ್ನು ಆಸರೆಯಾಗಿಸಿಕೊಂಡು, ಭಾರತದಲ್ಲಿ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾದ ಯುಪಿಎಸ್‌ಸಿನಲ್ಲಿ ತಾವು ತನ್ನ ಸ್ಥಾನವನ್ನು ಗಟ್ಟಿ ಮಾಡಿದವರು.

ಕೇರಳದ ಪಠಣಂಥಿಟ್ಟದಲ್ಲಿ ಹುಟ್ಟಿದ ಮಿನ್ನು, ಎಲ್ಲ ಅಡೆತಡೆಗಳನ್ನು ಮೀರಿ ತಮ್ಮ ಗುರಿಯತ್ತ ಸಾಗಿದವರು. ಅವರ ತಂದೆ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ವೇಳೆ ಅಕಾಲಿಕವಾಗಿ ನಿಧನರಾದರು. ಅವರ ನಿಧನದ ಬಳಿಕ “ಡೈ-ಇನ್-ಹಾರ್ನೆಸ್” ಯೋಜನೆಯಡಿ ಮಿನ್ನು 2012ರಲ್ಲಿ ಕೇರಳ ಪೊಲೀಸ್ ಇಲಾಖೆಯಲ್ಲಿ ಗುಮಾಸ್ತಿಯಾಗಿ ನೇಮಕಗೊಂಡರು.

21ನೇ ವಯಸ್ಸಿನಲ್ಲಿ ಮದುವೆಯಾದ ಮಿನ್ನು, 23ರಲ್ಲೇ ತಾಯಿಯಾದರು. ಈ ಹೊತ್ತಿಗೆ ಅವರು ಗೃಹಿಣಿ, ಕೆಲಸ ಮಾಡುವ ಮಹಿಳೆ ಮತ್ತು ತಾಯಿಯಾಗಿ, ಮೂರು ಜವಾಬ್ದಾರಿಗಳ ಜತೆಗೆ ಬದುಕು ಕಟ್ಟಿಕೊಳ್ಳುತ್ತಿದ್ದರು. ಆದರೆ ಅವರು ತಮ್ಮ ಗುರಿಯ ಪ್ರತಿ ನಂಬಿಕೆಯನ್ನು ಕೈಬಿಡದೆ ತನ್ನ ಮನಸ್ಸಿನಲ್ಲಿ ಗಟ್ಟಿಯಾಗಿ ಹಿಡಿದುಕೊಂಡಿದ್ದರು.

ಮೂರು ವರ್ಷಗಳ ಬಳಿಕ, 26ರ ವಯಸ್ಸಿನಲ್ಲಿ, ಮಿನ್ನು ಐಎಎಸ್ ಪರೀಕ್ಷೆಗೆ ತಯಾರಿಯನ್ನು ಪ್ರಾರಂಭಿಸಿದರು. ಅವರು ತಾವಿರುವ ಉದ್ಯೋಗ ತಮ್ಮ ತಂದೆಯ ಸೇವೆಯ ಮುಂದುವರಿಕೆ ಎಂಬಂತೆ ಕಾಣಲ್ಪಡುವುದನ್ನು ತಿದ್ದಬೇಕು ಎಂಬ ಬಲವಾದ ಉದ್ದೇಶದಿಂದ ಯುಪಿಎಸ್‌ಸಿ ಪ್ರಯಾಣ ಆರಂಭಿಸಿದರು. ಶಂಕರ್ ಐಎಎಸ್ ಅಕಾಡೆಮಿಗೆ ಸೇರಿ, ಅವರು 6 ಪ್ರಯತ್ನಗಳ ನಂತರ ಯಶಸ್ಸು ಕಂಡರು.

ಅವರು ದಿನವಿಡೀ ಕಚೇರಿಯ ಕೆಲಸಗಳನ್ನು ನಿರ್ವಹಿಸುತ್ತಾ, ರಾತ್ರಿ ಪುಸ್ತಕಗಳನ್ನು ಓದುತ್ತಾ ಮಿನ್ನು, ಎಐಆರ್ 150 (ಅಖಿಲ ಭಾರತ ರ‍್ಯಾಂಕ್) ಸಾಧಿಸಿದರು. ಅವರು 6 ಪ್ರಯತ್ನಗಳ ನಂತರ ಯಶಸ್ಸು ಕಂಡರು. ಅವರ ಸಾಧನೆಯ ಹಿಂದಿರುವ ಶ್ರಮ, ತ್ಯಾಗ ಮತ್ತು ಧೈರ್ಯ ಇಂದಿಗೂ ಸಾವಿರಾರು ಹೆಣ್ಣುಮಕ್ಕಳಿಗೆ ದಾರಿ ತೋರುವಂತದ್ದು.

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon