ರಾಜಸ್ಥಾನ: ಜಗಳ ಮಾಡುವ ಭರದಲ್ಲಿ ಕೋಪದ ಕೈಗೆ ಬುದ್ಧಿ ಕೊಟ್ಟ ಪತ್ನಿಯೊಬ್ಬಳು ತನ್ನ ಗಂಡನ ನಾಲಿಗೆಯನ್ನು ತುಂಡರಿಸಿದ ಘಟನೆ ರಾಜಸ್ಥಾನದ ಝಲವಾರಾಯ ಬಕಾನಿ ಗ್ರಾಮದಲ್ಲಿ ನಡೆದಿದೆ.
ಪತಿ ಮತ್ತು ಪತ್ನಿ ಯಾವುದೋ ಕ್ಷುಲ್ಲಕ ಕಾರಣಕ್ಕೆ ಆರಂಭಿಸಿದ್ದ ಜಗಳ ವಿಕೋಪಕ್ಕೆ ಹೋದ ಪರಿಣಾಮ, ಇದೇ ಸಿಟ್ಟಿನ ಭರದಲ್ಲಿ ಪತ್ನಿ ಗಂಡನ ನಾಲಿಗೆಯನ್ನೇ ಕಚ್ಚಿ ತುಂಡರಿಸಿದ್ದಾಳೆ ಬಳಿಕ ತಾನೂ ಸಾಯಲು ಹೊಗಿದ್ದಾಳೆ. ಪೊಲೀಸರ ಪ್ರಕಾರ, ಈ ಘಟನೆ ನಡೆದಿರುವುದು ಇದೇ 20ರಂದು. ಈ ದಂಪತಿ ಯಾವುದೋ ವಿಷಯಕ್ಕೆ ಜಗಳವಾಡಿದ್ದರು. ಈ ಜಗಳ ತಾರಕಕ್ಕೇರಿ ಈ ಘಟನೆಯಾಗಿದೆ ಎಂದಿದ್ದಾರೆ.
ಸದ್ಯ ಗಂಡನ ನಾಲಿಗೆ ಕಚ್ಚಿದ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಘಟನೆಯ ವಿವರ: 25 ವರ್ಷದ ಬಕಾನಿ ಪಟ್ಟಣದ ಕನ್ಹಯ್ಯಾಲಾಲ್ ಸೈನ್ ಅಲ್ಲಿಯೇ ಸಮೀಪದ ಸುನೆಲ್ ಗ್ರಾಮದ ರವಿನಾ ಸೈನ್ ಎನ್ನುವವರನ್ನು ಮದುವೆಯಾಗಿದ್ದಾರೆ. ಇವರ ಮದುವೆಯಾಗಿ ಒಂದೂವರೆ ವರ್ಷವಾಗಿದೆಯಷ್ಟೇ. ಆದರೆ ಮದುವೆ ಆದಾಗಿನಿಂದಲೂ ಇವರು ಆಗಾಗ್ಗೆ ಜಗಳ ಆಡುತ್ತಲೇ ಇದ್ದಾರೆ ಎಂದು ನೆರೆಹೊರೆಯವರು ತಿಳಿಸಿದ್ದಾರೆ.
ಆದರೆ, ಜಗಳ ಹೆಚ್ಚಾಗಿ ಈ ಅನಾಹುತ ನಡೆದಿದೆ. ಕೋಪದಲ್ಲಿದ್ದ ಹೆಂಡತಿ ಗಂಡನ ನಾಲಿಗೆಯನ್ನೇ ಕಚ್ಚಿ ತುಂಡರಿಸಿದ್ದಾಳೆ. ಕೂಗಾಟ ಕೇಳಿ ಅಕ್ಕಪಕ್ಕದ ಮನೆಯವರು ಬಂದು ಕನ್ಹಯ್ಯಾಲಾಲ್ ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದಾರೆ. ಕೊನೆಗೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದಾಗಿ. ಸದ್ಯ ಈ ನಾಲಿಗೆಯನ್ನು ಹೊಲಿದು ಸರಿ ಮಾಡಬಹುದು ಎಂದು ವೈದ್ಯರು ಹೇಳಿದ್ದಾರೆ ಎನ್ನಲಾಗಿದೆ. ಕೋಪದ ಕೈಗೆ ಬುದ್ಧಿ ಕೊಟ್ಟ ಪತ್ನಿ ನಾಲಿಗೆ ಕಟ್ ಮಾಡಿದ ಬಳಿಕ , ಕೋಣೆಗೆ ಹೋಗಿ ಬಾಗಿಲು ಮುಚ್ಚಿ ಮಣಿಕಟ್ಟನ್ನು ಕತ್ತರಿಸಿ ಸಾಯಲು ರೆಡಿಯಾಗಿದ್ದಳು. ಕೊನೆಗೆ ಆಕೆಯನ್ನೂ ರಕ್ಷಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಕನ್ಹಯ್ಯಾಲಾಲ್ ಸಹೋದರ ದೂರು ನೀಡಿದ್ದಾರೆ. ವಿವಿಧ ಸೆಕ್ಷನ್ಗಳ ಅಡಿ ಕೇಸ್ ದಾಖಲಿಸಲಾಗಿದೆ.