ತಾತ್ಕಾಲಿಕ ವೈದ್ಯರ ಹುದ್ದೆಗಳಿಗೆ ನೇಮಕಾತಿಗೆ ಅರ್ಜಿ ಆಹ್ವಾನ

 

     ದಾವಣಗೆರೆ; ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನದಡಿ, ಪಿಎಂ-ಅಭಿಯಾನ ಕಾರ್ಯಕ್ರಮದಡಿ 4 ಆಯುಷ್ಮತಿ ಕ್ಲಿನಿಕ್‍ಗಳಾದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಹೆಚ್.ಕೆ.ಆರ್ ನಗರ, ಎಸ್.ಎಂ.ಕೆ ನಗರ, ಭಾಷ ನಗರ ಹಾಗೂ ದೊಡ್ಡಪೇಟೆ ಇಲ್ಲಿ ಮಂಜೂರಾಗಿ ಖಾಲಿ  ಇರುವ ತಜ್ಞ ವೈದ್ಯರ ಹುದ್ದೆಗಳಿಗೆ ತಾತ್ಕಾಲಿಕವಾಗಿ ಸಮಾಲೋಚನೆ ಅಧಾರದಲ್ಲಿ 2025 ರ  ಮಾರ್ಚ್ 31 ರವರೆಗೆ ಹಾಗೂ 2025-26 ನೇ ಸಾಲಿನ ಪಿ.ಐ.ಪಿ ಅನುಮೋದನೆ ನಿರೀಕ್ಷಿಸಿ ತಾತ್ಕಾಲಿಕ ನೇಮಕಾತಿ ಮಾಡಲು ಎಂಬಿಬಿಎಸ್ ಹಾಗೂ ಸ್ನಾತಕೋತ್ತರ ಪದವಿ ಉತ್ತೀರ್ಣರಾದ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಅಹ್ವಾನಿಸಲಾಗಿದೆ.

ಹುದ್ದೆಯ ವಿವರ: ಸ್ತ್ರೀ ರೋಗ ತಜ್ಞರು ಹುದ್ದೆ-4, ಮೂಳೆ ಮತ್ತು ಕೀಲು ತಜ್ಞರು ಹುದ್ದೆ-4, ಶಸ್ತ್ರ ಚಿಕಿತ್ಸಾ ತಜ್ಞರು ಹುದ್ದೆ-4, ಮಕ್ಕಳ ತಜ್ಞರು ಹುದ್ದೆ-4, ಚರ್ಮ ರೋಗ ತಜ್ಞರು ಹುದ್ದೆ-4, ಫಿಜಿಷಿಯನ್ ಹುದ್ದೆ-4 ಮನರೋಗ ತಜ್ಞರು ಹುದ್ದೆ-4, ಕಿವಿ, ಮೂಗು ಮತ್ತು ಗಂಟಲು ತಜ್ಞರು ಹುದ್ದೆ-4

Advertisement

ತಜ್ಞ ವೈದ್ಯರು ಗರಿಷ್ಠ 70 ವರ್ಷ ವಯೋಮಾನದವರಾಗಿರಬೇಕು.  ಅರ್ಜಿಗಳನ್ನು ಜುಲೈ 30 ರಂದು ಬೆಳಗ್ಗೆ 10 ರಿಂದ 2 ಗಂಟೆವರೆಗೆ ಜಿಲ್ಲಾ ಆರೋಗ್ಯ ಮತ್ತು ಕು.ಕ.ಅಧಿಕಾರಿಗಳ ಕಚೇರಿ, ಶ್ರೀರಾಮನಗರ ರಸ್ತೆ, ದಾವಣಗೆರೆ ಎಸ್.ಎಸ್.ಆಸ್ಪತ್ರೆ ಹಿಂಬಾಗ, ಎನ್.ಸಿ.ಸಿ.ಕ್ಯಾಂಪ್ ಪಕ್ಕ, ದಾವಣಗೆರೆ ಇಲ್ಲಿ ಅರ್ಜಿಗಳನ್ನು ವಿತರಿಸಲಾಗುವುದು. ಇದೇ ದಿನ ಅಭ್ಯರ್ಥಿಗಳು ಅಗತ್ಯ ದಾಖಲೆಗಳ ಪ್ರತಿಗಳೊಂದಿಗೆ ಸಂಜೆ 5-00 ಗಂಟೆಗೆಯೊಳಗೆ ಕಚೇರಿಗೆ ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ 9449843195 ಗೆ ಸಂಪರ್ಕಿಸಲು  ಜಿಲ್ಲಾ ಆರೋಗ್ಯಾಧಿಕಾರಿ ಡಾ.ಷಣ್ಮುಖಪ್ಪ ತಿಳಿಸಿದ್ದಾರೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement