ನವದೆಹಲಿ: ದೇಶದ ಸುತ್ತ ಮೋದಿ ಚಕ್ರವ್ಯೂಹ ಹೆಣೆದಿದ್ದು ದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಆ ಚಕ್ರವ್ಯೂಹಕ್ಕೆ ದೇಶ ಸಿಲುಕಿದೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.
ಲೋಕಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ರಾಹುಲ್ ಗಾಂಧಿ, ದೇಶದಲ್ಲಿ ಭಯದ ವಾತಾವರಣ ಸೃಷ್ಠಿಯಾಗಿದೆ ರೈತರು, ಭಾರತದ ಸುತ್ತ ಮೋದಿ ಚಕ್ರವ್ಯೂಹ ಹೆಣೆದಿದ್ದಾರೆ. ಚಕ್ರವ್ಯೂಹ 1 ಸಣ್ಣ ವ್ಯಾಪಾರಿಗಳ ಮೇಲೆ ಟ್ಯಾಕ್ಸ್, ಚಕ್ರವ್ಯೂಹ 2 ನೋಟ್ ಬ್ಯಾನ್ , ಚಕ್ರವ್ಯೂಹ 3 ಜಿಎಸ್ ಟಿ ಮೂಲಕ ಜನಸಾಮಾನ್ಯರಿಂದ ವಸೂಲಿ. ಚಕ್ರವ್ಯೂಹದಲ್ಲಿ ದೇಶವನ್ನ ದೂಡುತ್ತಿದ್ದಾರೆ. ಉದ್ಯೋಗ ನೀಡುವವರ ಮೇಲೆ ಈ ಚಕ್ರವ್ಯೂಹ ದಾಳಿ ನಡೆಸುತ್ತಿದೆ. ಸಣ್ಣ ಮಧ್ಯಮ ಕೈಗಾರಿಕೆಗಳನ್ನ ಈಗಾಗಲೇ ಮುಚ್ಚಿದ್ದಾರೆ. ಹೊಸ ಚಕ್ರವ್ಯೂಹದಿಂದ ನಿರುದ್ಯೋಗ ಪ್ರಮಾಣ ಹೆಚ್ಚಾಗಲಿದೆ ಎಂದು ಹರಿಹಾಯ್ದರು.