ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರ ಬಗ್ಗೆ ವಿಜಯೇಂದ್ರ ಹೇಳಿದ್ದು ಹೀಗೆ.!

 

ಚಿತ್ರದುರ್ಗ; ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಸಜ್ಜನ ರಾಜಕಾರಣಿಯಾಗಿದ್ದ ಆಜಾತಶತೃ ಆಗಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಇವರ ಆಯ್ಕೆ ಮುಂದಿನ ದಿನದಲ್ಲಿ ಚಿತ್ರದುರ್ಗ ಜಿಲ್ಲೆಯ ಸರ್ವಾಂಗೀಣ ಅಭಿವೃದ್ದಿಯ ದೃಷ್ಟಿಯಿಂದ ಅವರನ್ನು ಮತದಾರರು ಆಯ್ಕೆ ಮಾಡಬೇಕೆಂದು ಬಿಜೆಪಿ ರಾಜ್ಯಾದ್ಯಕ್ಷರಾದ ಬಿ.ವೈ. ವಿಜಯೇಂದ್ರ ತಿಳಿಸಿದರು.

ಚಿತ್ರದುರ್ಗ ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೋದಿ ಮತ್ತೋಮ್ಮೆ ಎಂಬುದು ಎಲ್ಲರ ಆಶಯವಾಗಿದೆ. ಮೋದಿಯವರ ಬೆಂಬಲಕ್ಕೆ ಕಾರಜೋಳ ರವರು ಲೋಕಸಭೆಯಲ್ಲಿ ಇರಬೇಕಿದೆ. ಇವರಿಗೆ ಮತದಾರರು ಆರ್ಶೀವಾದವನ್ನು ಮಾಡುತ್ತಾರೆ ಎಂಬ ನಂಬಿಕೆ ಇದೆ ಎಂದ ಅವರು ಶಿವಮೊಗ್ಗದಲ್ಲಿ ಈಶ್ವರಪ್ಪರವರ ಸ್ಪರ್ದೆಯ ಬಗ್ಗೆ ಮಾತನಾಡಿ ನನಗೆ ಇನ್ನೂ ಸಹಾ ವಿಶ್ವಾಸ ಇದೆ, ಕೇಂದ್ರದ ವರಿಷ್ಠರು ಇವರ ಜೊತೆಯಲ್ಲಿ ಮಾತನಾಡಿ ಸಮಸ್ಯೆಯನ್ನು ಬಗೆಹರಿಸುತ್ತಾರೆ ಎಂಬ ನಂಬಿಕೆ ಇದೆ ಈಶ್ವರಪ್ಪರವರ ಅಪೇಕ್ಷೆಯನ್ನು ಕೇಂದ್ರದ ವರಿಷ್ಠರ ಮುಂದೆ ಹೇಳಲ್ಲಿ ಅದನ್ನು ವರಿಷ್ಟರು ತೀರ್ಮಾನ ಮಾಡುತ್ತಾರೆ. ನಾನು ಅವರನ್ನು ವ್ಯಯತ್ತಿಕವಾಗಿ ಭೇಟಿ ಮಾಡಲಿಕ್ಕೆ ಸಾಧ್ಯವಾಗಿಲ್ಲ, ನನ್ನ ಬಗ್ಗೆ ಏನು ಕೋಪ ಎನ್ನುವುದನ್ನು ಅವರ ಜೋತೆ ಕೂತು ಚರ್ಚೆಯನ್ನು ಮಾಡಲಾಗುವುದು ಎಂದರು.

Advertisement

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement