ಬೆಂಗಳೂರು : ಕರ್ನಾಟಕದಲ್ಲಿ ಅತಿಹೆಚ್ಚು ಫೈನಾನ್ಸ್ ಕಿರುಕುಳ ಪ್ರಕರಣಗಳ ಪಟ್ಟಿಯಲ್ಲಿ 25 ಕೇಸ್ ವರದಿಯಾಗಿರುವ ಉತ್ತರ ಕನ್ನಡ ಜಿಲ್ಲೆಯು ಮೊದಲ ಸ್ಥಾನದಲ್ಲಿದೆ.
ಹಾವೇರಿ ಮತ್ತು ತುಮಕೂರು ಜಿಲ್ಲೆಗಳಲ್ಲಿ ತಲಾ 12 ಪ್ರಕರಣಗಳು ವರದಿಯಾಗಿದ್ದು, 2ನೇ ಸ್ಥಾನದಲ್ಲಿದೆ. ಗದಗ ಜಿಲ್ಲೆಯಲ್ಲಿ 9 ಪ್ರಕರಣಗಳು ವರದಿಯಾಗಿದ್ದು, ಮೂರನೇ ಸ್ಥಾನದಲ್ಲಿದೆ. ಉಡುಪಿಯಲ್ಲಿ 6 ಪ್ರಕರಣಗಳು, ಮಂಡ್ಯ ಮತ್ತು ಬೆಳಗಾವಿಯಲ್ಲಿ ತಲಾ 5 ಪ್ರಕರಣಗಳು ವರದಿಯಾಗಿದೆ.
ಪೊಲೀಸ್ ದತ್ತಾಂಶದ ಪ್ರಕಾರ, 2023 ಮತ್ತು 2025 ರ ನಡುವೆ, ರಾಜ್ಯದಾದ್ಯಂತ ಒಟ್ಟು 111 ಫೈನಾನ್ಸ್ ಕಿರುಕುಳ ಪ್ರಕರಣಗಳು ವರದಿಯಾಗಿದ್ದು, 272 ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನು ಫೈನಾನ್ಸ್ ಕಿರುಕುಳಕ್ಕೆ ಸಂಬಂಧಿಸಿದಂತೆ 32 ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಫೈನಾನ್ಸ್ ಕಿರುಕುಳದಿಂದ ಎಷ್ಟು ಆತ್ಮಹತ್ಯೆ:
2023: 8 ಸಾವುಗಳು
2024: 7 ಸಾವುಗಳು
2025 (ಇಲ್ಲಿಯವರೆಗೆ): 17 ಸಾವುಗಳು
ಕಿರುಕುಳದ ಸ್ವರೂಪ
* 50,000 ರೂ. ನಿಂದ 5 ಲಕ್ಷ ರೂ. ವರೆಗೆ ಕಿರು ಸಾಲ ಕೊಟ್ಟು ಬಡ್ಡಿ ವಸೂಲಿ
* ಪಡೆದ ಅಸಲಿಗಿಂತ ಬಡ್ಡಿಯೇ ಜಾಸ್ತಿ ಕಟ್ಟಿದ್ದರೂ ಸಹ ಅಸಲು ಕೊಡಲು ಟಾರ್ಚರ್
* ಬಡ್ಡಿ ಪಾವತಿಸುವುದು ಒಂದು ದಿನ ತಡವಾಡರೂ ಸಿಬ್ಬಂದಿಯಿಂದ ಕಿರುಕುಳ
* ಬಡ್ಡಿ, ಅಸಲು ಪಾವತಿಸದಿದ್ದರೆ ಕಾರು, ಮನೆ, ಬೈಕ್ ಬಲವಂತವಾಗಿ ಜಪ್ತಿ
* ಸಾರ್ವಜನಿಕವಾಗಿ ನಿಂದಿಸುವುದರಿಂದ ಅವಮಾನ ತಾಳಲಾರದೆ ಆತ್ಮಹತ್ಯೆ
* ಪೊಲೀಸರಿಗೆ ದೂರು ಕೊಡುತ್ತೇನೆ ಎಂದರೂ ಭಯಪಡದ ವಸೂಲಿ ಸಿಬ್ಬಂದಿ
* ಫೈನಾನ್ಸ್ ಕಂಪನಿ ವ್ಯವಹಾರದಲ್ಲಿ ಕೆಲ ಪೊಲೀಸರೂ ಭಾಗಿಯಾದ ಆರೋಪ
ಸರ್ಕಾರದ ಸುಗ್ರೀವಾಜ್ಞೆ ಬಳಕ ಪ್ರಕರಣಗಳು
ಅಕ್ರಮ ಫೈನಾನ್ಸ್ ನಿರ್ವಾಹಕರಿಂದ ಕಿರುಕುಳವನ್ನು ತಡೆಯಲು ಕರ್ನಾಟಕ ಸರ್ಕಾರ ವಿಶೇಷ ಮಾರ್ಗಸೂಚಿಗಳನ್ನು ಹೊರಡಿಸಿದ ನಂತರ, ರಾಜ್ಯದಾದ್ಯಂತ ಹಲವಾರು ಪ್ರಕರಣಗಳು ದಾಖಲಾಗಿವೆ.
ಬೆಂಗಳೂರು ನಗರ: 1 ಪ್ರಕರಣ
ಬೆಳಗಾವಿ ನಗರ: 1
ತುಮಕೂರು: 4
ಕೋಲಾರ: 1
ರಾಮನಗರ: 1
ಮೈಸೂರು: 1
ಮಂಡ್ಯ: 1
ಕೊಡಗು: 1
ಬಾಗಲಕೋಟೆ: 1
ಚಿತ್ರದುರ್ಗ: 2
ಹಾವೇರಿ: 2
ಶಿವಮೊಗ್ಗ: 1
ದಾವಣಗೆರೆ: 1
ಉತ್ತರ ಕನ್ನಡ: 7
ಉಡುಪಿ: 2
ಕೊಪ್ಪಳ: 1
ವಿಜಯನಗರ: 1
ಸುಗ್ರೀವಾಜ್ಞೆ ನಂತರ ನವೀಕೃತ ಕಾರ್ಯಾಚರಣೆ ಯಡಿಯಲ್ಲಿ ಒಟ್ಟು 69 ಆರೋಪಿಗಳನ್ನು ಬಂಧಿಸಲಾಗಿದೆ. ಇಂತಹ ಪ್ರಕರಣಗಳನ್ನು ತಕ್ಷಣವೇ ವರದಿ ಮಾಡುವಂತೆ ಅಧಿಕಾರಿಗಳು ನಾಗರಿಕರಿಗೆ ಒತ್ತಾಯಿಸಿದ್ದು, ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ್ದಾರೆ.