ದಾವಣಗೆರೆ : ಮಹಾನಗರಪಾಲಿಕೆ ಜನತೆಗೆ ಕೆಯುಐಡಿಎಫ್ಸಿ ಇಲಾಖಾ ವತಿಯಿಂದ ರಾಜನಹಳ್ಳಿ ಜಾಕ್ವೆಲ್ ನಿಂದ ಬಾತಿ ನೀರು ಶುದ್ದೀಕರಣ ಘಟಕಕ್ಕೆ ಸಗಟು ನೀರನ್ನು ಸರಬರಾಜು ಮಾಡುವ ಪೈಪ್ಲೈನ್ ದುರಸ್ಥಿ ಕಾರ್ಯವನ್ನು ಕೈಗೊಂಡಿದೆ.
ಈ ದುರಸ್ಥಿ ಕಾರ್ಯವು ಮಾ.20 ರಿಂದ 24 ರವರೆಗೆ ಕೈ ಗೊಳ್ಳಲಾಗಿದ್ದು, ಹಾಗೂ ಬೆಸ್ಕಾಂ ವಿದ್ಯುತ್ ಸರಬರಾಜಿನಲ್ಲಿ ಅಡಚಣೆ ಆಗುತ್ತಿರುವುದರಿಂದ ನಗರಕ್ಕೆ ಸರಬರಾಜಾಗುವ 24*7 ಕುಡಿಯುವ ನೀರಿನ ವಿತರಣೆಯಲ್ಲಿ ವ್ಯತ್ಯಯವಾಗಲಿದೆ ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.






























