ಸ್ವತಂತ್ರ ಲಿಂಗಾಯತ ಧರ್ಮದ ವಿಚಾರಗಳನ್ನು ಇಟ್ಟುಕೊಂಡು ರಾಜಕಾರಣಿಗಳನ್ನು ಬಿಟ್ಟು, ಶರಣರ ತತ್ವಗಳನ್ನು ನಡೆ-ನುಡಿಯಲ್ಲಿ ಪಾಲಿಸುವ ಸ್ವಾಮೀಜಿಯವರನ್ನು ಒಳಗೊಂಡಂತೆ, ಸ್ವತಂತ್ರ ಲಿಂಗಾಯತ ಧರ್ಮ ಕಟ್ಟುವಲ್ಲಿ ತಮ್ಮಗಳ ಅಭಿಪ್ರಾಯಗಳನ್ನು ಸೇರಿಸಿ ಒಂದು ವೇದಿಕೆ. ಹಾಗೂ ಚರ್ಚೆ ಪ್ರಾರಂಭಿಸ ಬಹುದೆಂಬ ಸದಾಶಯ.
https://chat.whatsapp.com/LQ14M5ZLA9qI1OgBARElbD ಈ ಲಿಂಕ್ ನಲ್ಲಿ ನಿಮ್ಮಗಳ ಚರ್ಚೆ ಅಭಿಪ್ರಾಯ ಹಂಚಿಕೊಳ್ಳಿ.
ವಚನ:
ಎಂಬತ್ತುನಾಲ್ಕು ಲಕ್ಷ ಜೀವರಾಶಿ ಬೆಂಬಳಿ
ಒಂದೊಂದು ಕುಲ, ಒಂದೊಂದು ವರ್ಣ, ಒಂದೊಂದು ಭಾಷೆ.
ಉಂಬುದು ಉಡುವುದು ಕೊಂಬುದು ಕೊಡುವುದು ಜಾತಿಗೆ ಜಾತಿ.
ಉಂಬುದು ಮನುಷ್ಯ ಜನ್ಮ ಒಂದೆ ವರ್ಣ
ಒಂದಕ್ಕೆ ಒಂದು ಕೋಟಿ ಭೇದ ಇಂಬಿಲ್ಲ ನೋಡಿದರೆ
ಇದಕ್ಕೆ ಕಾಯಕ ಕುತರ್ಕ ಸಂಬಳವ ಕಟ್ಟಿಕೊಂಡಿತು
ಕರ್ಮಧರ್ಮವೆಂಬ ವರ್ಮದ ಮೂಲವ
ನಂಬಿದ ಭಕ್ತಂಗೆ ಜಾತಿಯಿಲ್ಲ .
ಆಚಾರಕ್ಕೆ ವ್ರತವಿಲ್ಲ, ಆಕಾಶಕ್ಕೆ ನೆಳಲಿಲ್ಲ.
ಬೆಂಭೂಮಿಗೆ ಪಾತಕವಿಲ್ಲ
ನಂಬಿದರೆ ಪಂಚತತ್ವಕ್ಕೆ ಪ್ರಕಟವಿಲ್ಲ ಕಾಣಾಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.
-ವೀರಸಂಗಯ್ಯ
				
															
                    
                    
                    
                    

































