ಹಿಟ್ಟಿನ ಗಿರಣಿಯಲ್ಲಿ ವಿದ್ಯುತ್‌ ಸ್ಪರ್ಶ – ಒಂದೇ ಕುಟುಂಬದ ನಾಲ್ವರು ಮೃತ್ಯು

ಜೈಪುರ: ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ಹಿಟ್ಟಿನ ಗಿರಣಿಯಲ್ಲಿ ವಿದ್ಯುತ್‌ ಸ್ಪರ್ಶಗೊಂಡು ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಘಟನೆ ನಡೆದಿದೆ.

ಈ ಹಿಟ್ಟಿನ ಗಿರಣಿ ಅರ್ಜುನ ಸಿಂಗ್ ಎಂಬವರಿಗೆ ಸೇರಿದ್ದು, ಅರ್ಜುನ ಸಿಂಗ್‌ ಅವರು ಘಟನೆ ನಡೆದ ದಿನ ಅನ್ಯ ಕೆಲಸದ ಕಾರಣ ದೆಹಲಿಗೆ ತಲುಪಿದ್ದರು. ಈ ಕಾರಣದಿಂದ ಅರ್ಜುನ ಸಿಂಗ್‌ ಅವರ ಪತ್ನಿ ಹಿಟ್ಟಿನ ಗಿರಣಿಯನ್ನು ನೋಡಿಕೊಳ್ಳುತ್ತಿದ್ದರು.

ಇನ್ನು ವಿದ್ಯುತ್‌ ನಿಂದ ಚಲಿಸುವ ಹಿಟ್ಟಿನ ಗಿರಣಿಯನ್ನು ಬಳಸುವಾಗ ಅರ್ಜುನ ಸಿಂಗ್‌ ಅವರ ಪತ್ನಿಗೆ ವಿದ್ಯುತ್‌ ಶಾಕ್‌ ಹೊಡೆದಿದೆ. ಇದನ್ನು ನೋಡಿದ ಅವರ ಇಬ್ಬರು ಮಕ್ಕಳು ಕೂಡಲೇ ತಾಯಿಯನ್ನು ರಕ್ಷಿಸಲು ಹೋಗಿದ್ದಾರೆ. ಆದರೆ ಅವರ ಸಂಪರ್ಕಕ್ಕೆ ಬಂದ ಕಾರಣ ವಿದ್ಯುತ್‌ ಸ್ಪರ್ಶದಿಂದ ಮಕ್ಕಳು ಕೂಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Advertisement

ಅರ್ಜುನ ಅವರ ಮಾವ ಮೂವರನ್ನು ವಿದ್ಯುತ್‌ ಶಾಕ್‌ ನಲ್ಲಿ ನೋಡಿದಾಗ ರಕ್ಷಣೆ ಮಾಡಲು ಹೋಗಿದ್ದು, ಅವರು ಕೂಡ ವಿದ್ಯುತ್‌ ಸ್ಪರ್ಶಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement