ಪತ್ರಕರ್ತನ ಜಾತಿ ಪ್ರಶ್ನಿಸಿದ ರಾಹುಲ್ ಗಾಂಧಿ: ಎಲ್ಲೆಡೆ ಭಾರಿ ವಿರೋಧ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡೆಸುತ್ತಿರುವ ಭಾರತ್ ಜೋಡೋ ನ್ಯಾಯ ಯಾತ್ರೆ ಇದೀಗ ಉತ್ತರಪ್ರದೇಶದ ರಾಯ್ ಬರೇಲಿ ತಲುಪಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ಟಿವಿ ವರದಿಗಾರರಲ್ಲಿ ನಿಮ್ಮ ಮಾಲಕ ದಲಿತನೇ ಎಂದು ಪ್ರಶ್ನಿಸಿದ್ದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

ಭಾರತ್ ಜೋಡೋ ನ್ಯಾಯ ಯಾತ್ರೆ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಇಂಡಿಯಾ ನ್ಯೂಸ್ ನ ವರದಿಗಾರ ಹಾಗೂ ಮಾಲಕ ಜೊತೆ ಒರಟಾಗಿ ವರ್ತಿಸಿದ್ದರು. ಈ ಸಂದರ್ಭದಲ್ಲಿ ರಾಹುಲ್ ಗಾಂಧಿ, ನೀವು ಮಾಧ್ಯಮದವರೇ? ನಿಮ್ಮ ಹೆಸರೇನು? ನಿಮ್ಮ ಮಾಲಕನ ಹೆಸರೇನು? ಅವರು ಒಬಿಸಿಯೇ ಅಲ್ಲ , ದಲಿತರೇ ಎಂದು ಪ್ರಶ್ನಿಸಿದ್ದರು.

ಇದೀಗ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದಂತೆ ಇದಕ್ಕೆ ಸಮಜಾಯಷಿ ನೀಡಿರುವ ಕಾಂಗ್ರೆಸ್, ಮೀಡಿಯಾದಲ್ಲಿ ಮೀಸಲು ಕ್ಷೇತ್ರದ ಮಂದಿ ಎಷ್ಟು ಜನರಿದ್ದಾರೆ ಎಂದಿ ತಿಳಿಯಲು ಈ ರೀತಿಯ ಪ್ರಶ್ನೆಯನ್ನು ರಾಹುಲ್ ಗಾಂಧಿ ಅವರು ಕೇಳಿದ್ದಾರೆ ಎಂದು ತಿಳಿಸಿದೆ.

Advertisement

ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ದಿ ಎಡಿಟರ್ ಗಿಲ್ಡ್ ಆಫ್ ಇಂಡಿಯಾ, ಚುನಾವಣ ಸಂದರ್ಭದಲ್ಲಿ ಉದ್ವಿಗ್ನತೆ ಹೆಚ್ಚಾಗದಂತೆ, ಯಾವುದೇ ವ್ಯಕ್ತಿಗೆ ಹಾನಿಯಾಗದಂತೆ ಎಲ್ಲ ರಾಜಕೀಯ ಪಕ್ಷಗಳು ಮತ್ತು ನಾಯಕರು ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಅಗ್ರಹಿಸಿದ್ದಾರೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement