ಹೊಸದಾಗಿ ಮದುವೆಯಾಗುವವರಿಗೆ ಗುಡ್ ನ್ಯೂಸ್..! ಸರ್ಕಾರದಿಂದ 2.50 ಲಕ್ಷ ರೂ.ಪ್ರೋತ್ಸಾಹ ಧನ

ಕೇಂದ್ರ ಸರಕಾರದ ಡಾ.ಅಂಬೇಡ್ಕರ್ ಫೌಂಡೇಶನ್ ವಿವಾಹ ಯೋಜನೆಯಡಿ ಹೊಸದಾಗಿ ಮದುವೆಯಾಗುವವರಿಗೆ 2.50 ಲಕ್ಷ ರೂ.ಪ್ರೋತ್ಸಾಹ ಧನ ನೀಡಲಾಗುತ್ತದೆ.

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.

ಡಾ.ಅಂಬೇಡ್ಕರ್ ಫೌಂಡೇಶನ್ ವಿವಾಹ ಯೋಜನೆಯಡಿ ಅರ್ಜಿ ಸಲ್ಲಿಸಿ ದಲಿತರನ್ನು ಒಳಗೊಂಡ ಜೋಡಿಗಳ ಅಂತರ್ಜಾತಿ ವಿವಾಹಕ್ಕೆ ಈ ಯೋಜನೆಯಡಿ ಪ್ರೋತ್ಸಾಹ ಧನವನ್ನು ಡಾ.ಅಂಬೇಡ್ಕರ್ ಫೌಂಡೇಶನ್ ವತಿಯಿಂದ ನೀಡಲಾಗುತ್ತದೆ. ಕಾನೂನುಬದ್ಧ ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹಧನ ಪ್ರತಿ ಮದುವೆಗೆ ರೂ.2.50 ಲಕ್ಷ.  ನಾನ್ ಜುಡಿಷಿಯಲ್ ಸ್ಟ್ಯಾಂಪ್ ಪೇಪರ್‌ನಲ್ಲಿ ಪ್ರಿ-ಸ್ಟ್ಯಾಂಪ್ಡ್ ರಸೀದಿಯನ್ನು ಪಡೆದ ಮೇಲೆ ರೂ. 1.50 ಲಕ್ಷವನ್ನು ಅರ್ಹ ದಂಪತಿಗಳಿಗೆ RTGS/NEFT ಮೂಲಕ ದಂಪತಿಗಳ ಜಂಟಿ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ.

Advertisement

ತದನಂತರ ಉಳಿದ ಮೊತ್ತವನ್ನು 3 ವರ್ಷಗಳ ಅವಧಿಗೆ ಫೌಂಡೇಶನ್‌ನಲ್ಲಿ ಸ್ಥಿರ ಠೇವಣಿಯಲ್ಲಿ ಇರಿಸಲಾಗುತ್ತದೆ. ಈ ಮೊತ್ತವನ್ನು ಫೌಂಡೇಶನ್‌ನಿಂದ 3 ವರ್ಷಗಳ ಪ್ರೋತ್ಸಾಹಧನ ಮಂಜೂರಾದ ಮೇಲೆ ಅದರ ಮೇಲೆ ಬರುವ ಬಡ್ಡಿಯೊಂದಿಗೆ ದಂಪತಿಗಳಿಗೆ 3 ವರ್ಷದ ನಂತರ ವರ್ಗಾವಣೆ ಮಾಡಲಾಗುತ್ತದೆ.

ಈ ಯೋಜನೆಯ ಪ್ರಯೋಜನ ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅರ್ಹತಾ ಮಾನದಂಡಗಳೇನು?

ಈ ಯೋಜನೆಯಡಿ ಪ್ರಯೋಜನ ಪಡೆಯಲು ಅಂತರ್-ಜಾತಿ ವಿವಾಹವಾಗಿರಬೇಕು ಅಂದರೆ ಸಂಗಾತಿಗಳಲ್ಲಿ ಒಬ್ಬರು ಪರಿಶಿಷ್ಟ ಜಾತಿಗೆ ಸೇರಿದವರು ಅಥವಾ ಪರಿಶಿಷ್ಟ ಜಾತಿಗೆ ಸೇರಿದವರಾಗಿರಬೇಕು.

ಮದುವೆಯು ಕಾನೂನಿನ ಪ್ರಕಾರ ಮಾನ್ಯವಾಗಿರಬೇಕು ಮತ್ತು ಹಿಂದೂ ವಿವಾಹ ಕಾಯಿದೆ, 1955 ರ ಅಡಿಯಲ್ಲಿ ಕ್ರಮಬದ್ಧವಾಗಿ ನೋಂದಣಿ ಅಗಿರಬೇಕಾಗುತ್ತದೆ.

ಎರಡನೇ ಮದುವೆಯಾದವರಿಗೆ ಈ ಯೋಜನೆಯಡಿ ಪ್ರೋತ್ಸಾಹ ಧನ  ಪಡೆಯಲು ಅರ್ಹರಿರುವುದಿಲ್ಲ.

ಮದುವೆಯಾದ ಒಂದು ವರ್ಷದೊಳಗೆ ಅರ್ಜಿ ಸಲ್ಲಿಸಿದರೆ ಮಾತ್ರ ಈ ಯೋಜನೆಯ ಪ್ರಯೋಜನ ಪಡೆಯಲು ಸಾಧ್ಯವಾಗುತ್ತದೆ.

ಮದುವೆಯಾಗುವ ಜೋಡಿಯಲ್ಲಿ ಗಂಡ ಅಥವಾ ಹೆಂಡತಿ ಇಬ್ಬರಲ್ಲಿ ಒಬ್ಬರು ದಲಿತರಾಗಿರಬೇಕು. ಅಂದರೆ ಮಾತ್ರ ಈ ಯೋಜನೆಯ ಲಾಭ ಪಡೆಯಬಹುದಾಗಿದೆ.

ದಂಪತಿಗಳ ವಾರ್ಷಿಕ ಆದಾಯವು 5 ಲಕ್ಷ ರೂ.ಕ್ಕಿಂತಲೂ ಕಡಿಮೆ ಇರಬೇಕು.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು:

1) ಅರ್ಜಿ ನಮೂನೆ/application form.

2) ಜಾತಿ ಮತ್ತು ಆದಾಯ ಪ್ರಮಾಣಪತ್ರ/caste and income certificate.

3) ಹಿಂದೂ ವಿವಾಹ ಕಾಯಿದೆ 1955 ರ ಅಡಿಯಲ್ಲಿ ಮದುವೆಯ/Marriage certificate ಪ್ರಮಾಣಪತ್ರ.

4) ಹಿಂದೂ ವಿವಾಹ ಕಾಯ್ದೆ 1955 ರ ಹೊರತಾಗಿ ಧರ್ಮದ ಪ್ರಮಾಣಪತ್ರ.

5) ಸಂಸದ/ಶಾಸಕರಿಂದ ಶಿಫಾರಸು ಪ್ರಮಾಣ ಪತ್ರ.

6) ಅರ್ಜಿದಾರರ ಅಧಾರ್ ಕಾರ್ಡ/Aadhar card ಪ್ರತಿ.

7) ಬ್ಯಾಂಕ್ ಪಾಸ್ ಬುಕ್/Bank pass book ಪ್ರತಿ.

8) ಪೋಟೋ

-ಎಲ್ಲಿ ಅರ್ಜಿ ಸಲ್ಲಿಸಬೇಕು?

ಮೇಲೆ ತಿಳಿಸಿರುವ ಎಲ್ಲಾ ದಾಖಲೆಗಳನ್ನು ಸಿದ್ದಪಡಿಕೊಂಡು ಅರ್ಹ ಅರ್ಜಿದಾರರು ಅರ್ಜಿ ನಮೂನೆಯನ್ನು ಭರ್ತಿ ಮಾಡಿಕೊಂಡು ನಿಮ್ಮ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿ ಭೇಟಿ ಮಾಡಿ ಅರ್ಜಿ ಸಲ್ಲಿಸಬೇಕು.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement