ಇನ್ನೆನು ಮಳೆ ಪ್ರಾರಂಭವಾಗಿದೆ. ನಮ್ಮ ಹಿರಿಯರು ಮಳೆ ಬಗ್ಗೆ ಹಲವು ಗಾದೆಗಳನ್ನ ಕಟ್ಟಿದ್ದಾರೆ. ವೇದ ಸುಳ್ಳಾದರೂ ಗಾದೆ ಸುಳ್ಳಲ್ಲ ಎಂಬ ಮಾತು ಚಾಲ್ತಿಯಲ್ಲಿದೆ. ಅದು ಬಿಡಿ ಮಳೆ ಬಗ್ಗೆ ಗಾದೆಗಳ ಬಗ್ಗೆ ಓದಿ ಬಿದಿ.!
ಅಶ್ವಿನಿ ಮಳೆ
- ಆಶ್ವಿನಿ ಮಳೆಗೆ ಆರು ಕಟ್ಟು ಭರಣಿ ಮಳೆಗೆ ಬೀಜ ಬಿತ್ತು
- ಅಶ್ವಿನಿ ಅರಿಶಿನಕ್ಕೆ ಮೇಲು, ಅಡಿಕೆಗೆ ಹಾಳು
- ಅಶ್ವಿನಿ ಆದ್ರೆ ಶಿಶುವಿಗೆ ಹಾಲಿಲ್ಲ, ಅಶ್ವಿನಿ ಮಳೆಯಲ್ಲಿ ಆರಂಭ ಬೇಡ
- ಅಶ್ವಿನೀ ಸಸ್ಯನಾಶಿನೀ, ಅಶ್ವಿನಿ ಮಳೆಯಲ್ಲಿ ಬಿತ್ತಿದರೆ ಸರ್ವನಾಶ
- ಅಶ್ವಿನಿ ಬೀಳಲು, ಆರಿದ್ರ ಗರ್ಜಿಸಲು, ಆಷಾಢದಲ್ಲಿ ಮಳೆಯಾಗಲು ಬೇಕಲ್ಲ
ಭರಣಿ ಮಳೆ
- ಭರಣಿಯಾದರೆ ಧರಣಿಯೆಲ್ಲಾ ಬೆಳೆ ಮಣ್ಣಿಗೆ
- ಭರಣಿ ಸುರಿದು ಧರಣಿ ಬದುಕೀತು
- ಭರಣಿ ಬಿಸಿಲು ಭರಿಸೋಕೆ ಆಗೋದಿಲ್ಲ
- ಭರಣಿ ಮಳೆ ಬಂದ್ರೆ ಧರಣಿಯೆಲ್ಲಾ ಭತ್ತ.
ಕೃತ್ತಿಕ ಮಳೆ
- ಕೃತಿಕೆ ನಕ್ಷತ್ರ ಕಾದರೆ ಗದ್ದೆಗೆ ಒಳ್ಳೆಯದು
- ಕೃತ್ತಕೆ ಮಳೆಯು ಕಿರುಬನ ಹಿಡಿದಂತೆ
- ಕೃತಿಕ ಮಳೆಯಲ್ಲಿ ಬಿತ್ತಿದರೆ ಕುರಿತಷ್ಟು ಎಳ್ಳು,
- ಆದಷ್ಟು ಎಳ್ಳನ್ನು ಕಿರ್ತಿಕೇಲಿ ಚಿಲ್ಲು, ಮಿಕ್ಕ ಎಳ್ಳನ್ನು ಮಿಶೀಲಿ ಚೆಲ್ಲು
- ಕೀರ್ತಿಕೆಯಲ್ಲಿ ಬಿತ್ತಿದರೆ, ಕಿತ್ತಿಗೊಂಡು ತಿನ್ನಾಕ ಜೋಳ ಸಿಗೋಲ್ಲ.