ಮಲ್ಲನಕಟ್ಟೆಯಲ್ಲಿ ನಡೆದ ರಥೋತ್ಸವ ಧಾರ್ಮಿಕ ಸಂಘಟನೆಯ ಸಂಕೇತವಾಗಿದೆ.ಡಾ ಎಚ್ ಕೆ ಎಸ್ ಸ್ವಾಮಿ,

WhatsApp
Telegram
Facebook
Twitter
LinkedIn

 

ಚಿತ್ರದುರ್ಗ… ನಗರದ ಹೊರವಲಯದಲ್ಲಿರುವ ಮಲ್ಲನ ಕಟ್ಟೆಯಲ್ಲಿ ಮೊನ್ನೆ ನಡೆದ ಸುಂದರವಾದ: ರಥೋತ್ಸವ, ಗ್ರಾಮೀಣ ಜನರ ಬದುಕಿನ ಸಂಕೇತವಾಗಿದೆ, ಜನರ ಬದುಕಿನಲ್ಲಿ ಆಧ್ಯಾತ್ಮಿಕತೆ, ಧಾರ್ಮಿಕ ಚಿಂತನೆ, ಧಾರ್ಮಿಕ ಸಂಘಟನೆ, ಸಹಬಾಳ್ವೆಯ ಸಂಕೇತವಾಗಿ ಈ ರಥಗಳನ್ನು ನಿರ್ಮಿಸಿ, ಅವುಗಳನ್ನ ಗ್ರಾಮಸ್ಥರ ಕೈಯಲ್ಲಿ ಪೂಜಿಸಿ, ರಥಬೀದಿಯಲ್ಲಿ ಸಂಚರಿಸಿ, ಜನರಲ್ಲಿ ಒಗ್ಗಟಿನ ಮನೋಭಾವನೆಯನ್ನು, ಒಬ್ಬರಿಗೊಬ್ಬರು ಸಹಕಾರವನ್ನು ಸೂಚಿಸುವ ಸಂಕೇತವಾಗಿದೆ.

ಈಗಲೂ ಸಹ ಗ್ರಾಮೀಣ ಸಂಸ್ಕೃತಿಯಲ್ಲಿ ಭಾರತೀಯ ಸಂಪ್ರದಾಯಗಳು ನೆಲೆ ಉರೀವೆ. ನಗರಗಳಲ್ಲಿ ರಥಗಳು ಮರೆಯಾದರೂ ಸಹ, ಗ್ರಾಮೀಣ ಜನರಲ್ಲಿ ಇನ್ನೂ ಅವು ಚೇತರಿಕೆ ಕಂಡುಕೊಳ್ಳುತ್ತಿವೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಉಪಾಧ್ಯಕ್ಷ ಮತ್ತು ಕರ್ನಾಟಕ ಸರ್ವೋದಯ ಮಂಡಳಿಯ ಜಿಲ್ಲಾಧ್ಯಕ್ಷ ಡಾ ಎಚ್ ಕೆ ಎಸ್ ಸ್ವಾಮಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಗರದ ಜನರು ಮಾನಸಿಕ ನೆಮ್ಮದಿ ಪಡೆಯಲು, ಗ್ರಾಮಗಳಲ್ಲಿ, ಜಾತ್ರೆಗಳಲ್ಲಿ, ರಥೋತ್ಸವಗಳಲ್ಲಿ ಭಾಗವಹಿಸಿ, ಮಾನಸಿಕ ನೆಮ್ಮದಿಯನ್ನು ಪಡೆಯುತ್ತಿದ್ದಾರೆ, ಹಾಗೂ ಕುಟುಂಬಸ್ಥರೆಲ್ಲ ಒಮ್ಮೆ ಹಬ್ಬದ ರೀತಿಯಲ್ಲಿ ಒಟ್ಟುಗೂಡಿ, ಊರಿನ ಹಬ್ಬದ ರೀತಿಯಲ್ಲಿ ಆಚರಣೆ ಮಾಡಿ, ಎಲ್ಲರೂ ಒಟ್ಟಿಗೆ ಕುಳಿತು, ಜಾತಿ, ಧರ್ಮ, ಮತ ಭೇದಗಳನ್ನ ಮರೆತು, ಸಂಘಟನೆ, ಗ್ರಾಮಗಳ ಅಭಿವೃದ್ಧಿಯನ್ನು, ದೇವಸ್ಥಾನದ ಆಡಳಿತ ಮಂಡಳಿಯ ಮುಖಾಂತರ ನಡೆಸಿಕೊಂಡು, ಹಣ ಸಂಗ್ರಹ ಮಾಡುವುದು, ಒಬ್ಬರಿಗೊಬ್ಬರು ಸಹಕರಿಸುವುದು, ಊಟ ಉಪಚಾರಗಳ ಮುಖಾಂತರ ಸೇವೆ ಮಾಡುವುದು, ಬಡವರಿಗೂ ಸಹ ಅನ್ನಸಂತರ್ಪಣೆ ಮಾಡುವ ಮುಖಾಂತರ, ರಥೋತ್ಸವಗಳು ಸಾಮಾಜಿಕ, ಆಧ್ಯಾತ್ಮಿಕ ಚಿಂತನೆಗಳಿಗೆ ಪ್ರೋತ್ಸಾಹ ನೀಡುತ್ತಿದೆ ಎಂದರು.

ರಥ ನಿರ್ಮಾಣ ಮಾಡುವುದು ಅಷ್ಟು ಸುಲಭವಾದ ಕೆಲಸವೆಲ್ಲ, ಅದಕ್ಕೆ ಬೇಕಾದಂತಹ ಮರ ಮುಟ್ಟುಗಳನ್ನ ಸಂಗ್ರಹಿಸಿ, ಒಳ್ಳೆಯ ಶಿಲ್ಪಿಯ ಮುಖಾಂತರ ಅವುಗಳ ಕೆತ್ತನೆ ಮಾಡಿ, ಜೋಡಣೆ ಮಾಡಿ, ಅವುಗಳಿಗೂ ಸಹ ವರ್ಷಾನುಗಟ್ಟಲೆ ಶ್ರಮ ವಹಿಸಿ, ಸುಂದರವಾದ ರಥವನ್ನು ನಿರ್ಮಾಣ ಮಾಡಿ, ಅದನ್ನ ಒಂದು ಊರಿಂದ ಇನ್ನೊಂದು ಊರಿಗೆ ಸಾಗಾಣಿಕೆ ಮಾಡಿ, ಅವುಗಳನ್ನು ಪ್ರತಿಷ್ಠಾಪನೆ ಮಾಡಿ, ಅದಕ್ಕೆ ಹೋಮ, ನಿಯಮ ಬದ್ಧವಾದ ಪೂಜಾ ವಿಧಾನಗಳನ್ನು ಅಳವಡಿಸಿ, ಜನರಲ್ಲಿ ಆಧ್ಯಾತ್ಮಿಕ, ಸಾಂಸ್ಕೃತಿಕ ಚೈತನ್ಯವನ್ನು ತುಂಬಲು ಪ್ರಯತ್ನಿಸುತ್ತಿರುವುದು ಶ್ಲಾಘನೀಯ ಎಂದರು.

ಈಗೀಗ ನಗರಗಳಲ್ಲಿ ಜನರ ಮಧ್ಯೆ ಭಾಂದವ್ಯಗಳು ಕಣ್ಮರೆಯಾಗುತ್ತಿದ್ದು, ಗ್ರಾಮಗಳಲ್ಲಿ ಮಾತ್ರ ಒಗ್ಗಟಿನ ಜೀವನ ಸ್ಥಾಪನೆ, ಒಗ್ಗಟ್ಟಿನಲ್ಲಿ ಬದುಕುವುದು, ಒಟ್ಟಿಗೆ ಕುಳಿತು ಭೋಜನ ಸೇವಿಸುವುದು, ಒಬ್ಬರಿಗೊಬ್ಬರು ಸಹಕರಿಸುವುದು, ಇನ್ನೂ ಉಳಿದುಕೊಂಡಿದೆ. ಗ್ರಾಮಗಳಲ್ಲಿ ನೆಂಟರಿಷ್ಟರಲ್ಲಾ ರಥೋತ್ಸವದಲ್ಲಿ ಬಂದು ಭಾಗವಹಿಸಿ, ಹಬ್ಬದ ರೀತಿ ಸಿಂಗರಿಸಿಕೊಂಡು, ರಸ್ತೆಗಳನ್ನೆಲ್ಲ ಸ್ವಚ್ಛಗೊಳಿಸಿ, ಶೃಂಗಾರಗೊಳಿಸಿ, ದೇವರ ಹೆಸರಿನಲ್ಲಿ ಪರಿಸರ ಉಳಿಸಿ ಪರಿಸರ ಬೆಳೆಸುವ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ, ಒಬ್ಬರಿಗೊಬ್ಬರು ಸಮಾಲೋಚನೆಯಿಂದ, ಮಾನಸಿಕ ನೆಮ್ಮದಿ ಪಡೆದು, ಜೀವನೋತ್ಸಹ ಪಡೆದು, ಸರಳತೆಯಲ್ಲೂ ಸಂಭ್ರಮವಿದೆ ಎಂಬುದನ್ನು ತೋರಿಸುವುದೇ ಗ್ರಾಮೀಣ ಜೀವನವಾಗಿದೆ. ಅಂತಹವುಗಳನ್ನು ಅನುಭವಿಸಲು ರಥೋತ್ಸವದಲ್ಲಿ ಜನರು ಭಾಗವಹಿಸಿ, ಗ್ರಾಮಸ್ಥರ ಬದುಕನ್ನ, ಸರಳತೆಯನ್ನ, ಒಗ್ಗಟ್ಟನ್ನು ಅನುಸರಿಸಲು ಉದಾಹರಣೆಯಾಗಿದೆ ಎಂದರು.

ತಾಂತ್ರಿಕ ಜ್ಞಾನ ಹೆಚ್ಚಾದಂತ ರಥಗಳಲ್ಲಿ ವಿನ್ಯಾಸಗಳು ಬದಲಾಗುತ್ತಿವೆ. ಎತ್ತರದಲ್ಲಿ ಬದಲಾವಣೆ ಆಗುತ್ತಿದೆ, ಅಗಾಧತೆಯಲ್ಲಿ ಬದಲಾವಣೆಯಾಗುತ್ತಿದ್ದು, ದೊಡ್ಡ ದೊಡ್ಡ ಯಂತ್ರಗಳ ಮುಖಾಂತರ ರಥಗಳನ್ನು ಎಳೆದು, ನಿರ್ಮಿಸಿ, ಜನರನ್ನ ಭಾವೋತ್ಮಕರನ್ನಾಗಿ ಮಾಡಿ, ಸಂತಸ ಗೊಳಿಸುವಂತಹ ವ್ಯವಸ್ಥೆಯು ಈಗ ಅನುಷ್ಠಾನಗೊಳ್ಳುತ್ತಿದೆ.  ದೊಡ್ಡ ದೊಡ್ಡ ರಥಗಳನ್ನು ಎಳೆಯುವಾಗ ಜನರು ಎಚ್ಚರಿಕೆಯಿಂದ ಭಾಗವಹಿಸಿ, ಸುರಕ್ಷಿತ ಸಾಧನೆಗಳನ್ನು ಬಳಸಿಕೊಂಡು, ರಥೋತ್ಸವವನ್ನು ಯಶಸ್ವಿಗೊಳಿಸಬೇಕಾಗಿದೆ ಎಂದರು.

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon