ಮಂಗಳೂರು:- ಇತ್ತೀಚೆಗೆ ಕೆಲವರು ಸೋಶಿಯಲ್ ಮೀಡಿಯಾಗಳಲ್ಲಿ ಅವರೇ ಇನ್ವಿಷ್ಟಿಗೇಷನ್ ಮಾಡಿಕೊಂಡು ಯಾವ ಪ್ರಕರಣದಲ್ಲಿ ಯಾರನ್ನು ಅರೆಸ್ಟ್ ಮಾಡಬೇಕು ಯಾರನ್ನು ಬಿಡಬೇಕು ಎಂದು ಅವರೇ ಡಿಸೈಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟರ್ ಹಾಕುತ್ತಿರುವುದು ನಮ್ಮ ಗಮನಕ್ಕೆ ಬಂದಿದ್ದು ಅನಗತ್ಯ ಸಂದೇಶ ಹರಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಮಂಗಳೂರು ಪೋಲಿಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ
ತನಿಖೆಯನ್ನು ಸಾಕ್ಷ್ಯಗಳ ಆಧಾರದ ಮೇಲೆ ಪೋಲಿಸರು ಮಾಡುತ್ತಾರೆ ಯಾರೇ ಆರೋಪಿತರ ಮೇಲೆ ಸಾಕ್ಷ್ಯ ಸಿಕ್ಕಿದರೆ ಅವರನ್ನು ಅರೆಸ್ಟ್ ಮಾಡುತ್ತಾರೆ.
ಸಾಕ್ಷ್ಯ ಸಿಗದಿದ್ದರೆ ಅಂತರವನ್ನು ಅರೆಸ್ಟ್ ಮಾಡಲು ಆಗುವುದಿಲ್ಲ ಯಾರಾಲ್ಲಾದರೂ ಯಾವ ಕೇಸಾಲ್ಲಾದರೂ ಸಾಕ್ಷ್ಯ ಇದ್ದರೆ ನೇರವಾಗಿ ಪೋಲಿಸ್ ಠಾಣೆಗೆ ಬನ್ನಿ ನಾವು ಆ ಸಾಕ್ಷ್ಯವನ್ನು ಪರಿಗಣಿಸುತ್ತೇವೆ ಆರೋಪಿತರ ವಿರುದ್ದ ಸಾಕ್ಷ್ಯ ಇದ್ದರೂ ಪರವಾಗಿಲ್ಲ ಪೋಲಿಸರು ಹಿಡಿಯುತ್ತಿದ್ದಾರೆ ಅಂತ ಅನಿಸಿ ನಿರಾಪರಾಧಿ ಎಂದು ಸಾಕ್ಷಿ ಇದ್ದರೆ ಅದೂ ಪರವಾಗಿಲ್ಲ ಪ್ರತಿ ಸಾಕ್ಷ್ಯವನ್ನು ಕೂಡ ಪೋಲಿಸರು ಯಾವಾಗಲೂ ಪರಿಗಣಿಸುತ್ತಾರೆ ಅದನ್ನು ಬಿಟ್ಟು ಸೋಶಿಯಲ್ ಮೀಡಿಯಾದಲ್ಲಿ ಇನ್ವಸ್ಟಿಗೇಷನ್ ಟ್ರೈ ಮಾಡಲು ಹೋದರೆ ಅದು ಕೂಡ ಒಂದು ಅಪರಾಧವಾಗುತ್ತದೆ ಮತ್ತು ನಿಮ್ಮ ವಿರುದ್ದ ಕೂಡ ಪ್ರಕರಣ ದಾಖಲಾಗುತ್ತದೆ ಈ ರೀತಿ ಯಾರು ಮಾಡದೇ ಜವಾಬ್ದಾರಿಯುತವಾಗಿ
ಪ್ರತಿಯೊಬ್ಬರು ಇರಬೇಕು ಎಂದು ಕಮೀಷನರ್ ಅವರು ಎಚ್ಚರಿಕೆ ನೀಡಿದ್ದಾರೆ