‘ಬ್ರಿಟಿಷರ ಎದುರು ಬಂಡೆಯಂತೆ ನಿಂತಿತ್ತು ವಂದೇ ಮಾತರಂ ಗೀತೆ’ – ಪ್ರಧಾನಿ ಮೋದಿ

WhatsApp
Telegram
Facebook
Twitter
LinkedIn

ನವದೆಹಲಿ : ವಂದೇ ಮಾತರಂ ಗೀತೆಯ 150ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ನಡೆದ ವಿಶೇಷ ಚರ್ಚೆಯನ್ನು ಲೋಕಸಭೆಯಲ್ಲಿ ಆರಂಭಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಈ ಗೀತೆ ಭಾರತೀಯರ ಹೋರಾಟಕ್ಕೆ ಬಲ ತುಂಬಿದ ಬಂಡೆಯಂತೆ ನಿಂತಿತ್ತು ಎಂದು ಹೇಳಿದರು. ವಂದೇ ಮಾತರಂ ಕೇವಲ ಹಾಡಲ್ಲ, ಭಾರತ ಸ್ವಾತಂತ್ರ್ಯ ಹೋರಾಟದ ಚೈತನ್ಯ, ತ್ಯಾಗ ಮತ್ತು ಏಕತೆಯ ಮಂತ್ರವಾಗಿತ್ತು ಎಂದು ಅವರು ಸ್ಪಷ್ಟಪಡಿಸಿದರು.

ವಂದೇ ಮಾತರಂ ಮಂತ್ರವು ಸ್ವಾತಂತ್ರ್ಯ ಚಳವಳಿಗೆ ಶಕ್ತಿ ತುಂಬಿತು. ವಂದೇ ಮಾತರಂ ತನ್ನ 50 ನೇ ವಾರ್ಷಿಕೋತ್ಸವವನ್ನು ಆಚರಿಸಿದಾಗ, ದೇಶವು ಗುಲಾಮಗಿರಿಯ ಸಂಕೋಲೆಯಲ್ಲಿತ್ತು. ಅದು ತನ್ನ 100 ನೇ ವಾರ್ಷಿಕೋತ್ಸವವನ್ನು ಆಚರಿಸಿದಾಗ, ದೇಶವು ತುರ್ತು ಪರಿಸ್ಥಿತಿಯಿಂದ ಸಂಕೋಲೆಯಲ್ಲಿ ಸಿಲುಕಿತು ಮತ್ತು ಸಂವಿಧಾನದ ಕತ್ತು ಹಿಸುಕಲಾಯಿತು . ವಂದೇ ಮಾತರಂನ 150 ನೇ ವಾರ್ಷಿಕೋತ್ಸವದ ಐತಿಹಾಸಿಕ ಸಂದರ್ಭವನ್ನು ವೀಕ್ಷಿಸುವ ಅದೃಷ್ಟ ನಾವೆಲ್ಲರೂ ಹೊಂದಿದ್ದೇವೆ ಎಂದು ಹೇಳಿದರು.

ವಂದೇ ಮಾತರಂನ ಹುಟ್ಟಿನ ಹಿನ್ನೆಲೆಯನ್ನು ವಿವರಿಸಿದ ಪ್ರಧಾನಿ, 1857ರ ಬಂಡಾಯದ ನಂತರ ಬ್ರಿಟಿಷರು ಭಾರತೀಯರ ಮನೋಬಲ ಕುಗ್ಗಿಸಲು ಮತ್ತು ‘ಗಾಡ್ ಸೇವ್‌ ದಿ ಕ್ವೀನ್’ವನ್ನು ಎಲ್ಲೆಡೆ ಹೇರಲು ಪ್ರಯತ್ನಿಸುತ್ತಿದ್ದ ಸಂದರ್ಭದಲ್ಲೇ, ಬಂಕಿಮ್ ಚಂದ್ರರು 1875ರಲ್ಲಿ ವಂದೇ ಮಾತರಂ ಗೀತೆಯ ಕಲ್ಪನೆಗೆ ಜೀವ ತುಂಬಿದರು ಎಂದರು. 1882ರಲ್ಲಿ ‘ಆನಂದಮಠ’ ಕೃತಿಯಲ್ಲಿ ಅದನ್ನು ಸೇರಿಸಿದಾಗ, ಅದು ವಸಾಹತುಶಾಹಿ ವಿರುದ್ಧದ ಸಾಂಸ್ಕೃತಿಕ ಪ್ರತಿರೋಧದ ಶಕ್ತಿಶಾಲಿ ಗುರುತಾಗಿ ರೂಪುಗೊಂಡಿತು.

ಪ್ರಧಾನಮಂತ್ರಿ 1906ರ ಮೇ 20ರಂದು, ಇಂದಿನ ಬಾಂಗ್ಲಾದೇಶದಲ್ಲಿರುವ ಬಾರಿಸಾಲ್‌ನಲ್ಲಿ ನಡೆದ ಐತಿಹಾಸಿಕ ವಂದೇ ಮಾತರಂ ಮೆರವಣಿಗೆಯನ್ನು ನೆನಪಿಸಿದರು. 10,000ಕ್ಕೂ ಹೆಚ್ಚು ಜನರು, ಹಿಂದೂ, ಮುಸ್ಲಿಂ ಸೇರಿದಂತೆ ವಿವಿಧ ಧರ್ಮ ಮತ್ತು ಜಾತಿಗಳ ಜನರು, ವಂದೇ ಮಾತರಂ ಧ್ವಜಗಳನ್ನು ಹಿಡಿದು ಬೀದಿಗಿಳಿದದ್ದೇ ಬ್ರಿಟಿಷರಿಗಾಗಿ ದೊಡ್ಡ ರಾಜಕೀಯ ಸಂದೇಶವಾಗಿತ್ತು ಎಂದು ಹೇಳಿದರು. ರಂಗಪುರದ ಶಾಲೆಯಲ್ಲಿ ಮಕ್ಕಳು ವಂದೇ ಮಾತರಂ ಹಾಡಿದ ಕಾರಣಕ್ಕೆ 200 ವಿದ್ಯಾರ್ಥಿಗಳಿಗೆ ತಲಾ ಐದು ರೂಪಾಯಿ ದಂಡ ವಿಧಿಸಿದ ಘಟನೆ ಮತ್ತು ನಂತರ ಗೀತೆಯನ್ನು ಅನೇಕ ಶಾಲೆಗಳಲ್ಲಿ ನಿಷೇಧಿಸಿದ ಕ್ರಮವನ್ನು ಅವರು ಬ್ರಿಟಿಷರ ದಮನಶಾಹಿಯ ನಿದರ್ಶನವೆಂದು ವಿವರಿಸಿದರು.

ಈ ಗೀತೆ ಜಗತ್ತಿನಲ್ಲೇ ಭಾವನಾತ್ಮಕ ಶಕ್ತಿ ಹೊಂದಿತ್ತು ಎಂದು ಮೋದಿ ಪ್ರಶಂಸಿಸಿದರು. ವಂದೇ ಮಾತರಂ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಧೈರ್ಯ, ಏಕತೆ ಮತ್ತು ಪ್ರತಿರೋಧಕ್ಕೆ ಸ್ಪೂರ್ತಿಯಾಗಿದ್ದು, ಜನರನ್ನು ಒಂದೇ ದಾರಿಗೆ ಕರೆದುಕೊಂಡು ಬಂದ ಪ್ರಬಲ ಯುದ್ಧಘೋಷವಾಗಿ ಪರಿಣಮಿಸಿತು ಎಂದು ಹೇಳಿದರು.

ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಮೇಲೆ ಟೀಕಾಡಿದ ಮೋದಿ, ಅವರು ಮುಹಮ್ಮದ್ ಅಲಿ ಜಿನ್ನಾ ಅವರ ಅಭಿಪ್ರಾಯಗಳಿಗೆ ಒಲಿದುಕೊಂಡರು ಎಂದು ಆರೋಪಿಸಿದರು. ಬ್ರಿಟಿಷರು ತಮ್ಮ ‘ಒಡೆದು ಆಳುವ’ ನೀತಿಯನ್ನು ಬಂಗಾಳದಿಂದ ಪ್ರಾರಂಭಿಸಿದಾಗ, ವಂದೇ ಮಾತರಂನ ಆತ್ಮಭಾವವೇ ಸಾಮಾಜಿಕ ಏಕತೆಯನ್ನು ಉಳಿಸುವಲ್ಲಿ ಪ್ರಮುಖ ಪಾತ್ರವಹಿಸಿತು ಎಂದು ಪ್ರಧಾನಮಂತ್ರಿ ಹೇಳಿದರು. ದೇಶದ ಸಮಗ್ರತೆಯನ್ನು ಭಂಗಪಡಿಸುವ ಪ್ರಯತ್ನಗಳ ವಿರುದ್ಧ ವಂದೇ ಮಾತರಂ ಜನರಲ್ಲಿ ಬಲವಾದ ಭಾವನೆ ಮತ್ತು ಪ್ರತಿರೋಧ ಮೂಡಿಸಿತು ಎಂದು ಅವರು ಉಲ್ಲೇಖಿಸಿದರು.

 

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon