ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ಕಲ್ಯಾಣಪುರದೊಳಗೆ ಬಿಜ್ಜಳಾಂಕನೆಂಬ ರಾಜನು
ಅಷ್ಟವಿಧಪ್ರಧಾನರ ಸಮೂಹದಲ್ಲಿ
ಶಿವಭಕ್ತಿ ಇಲ್ಲದೆ ರಾಜ್ಯವನಾಳುತಿರ್ಪನು.
ಇಂಗಳೇಶ್ವರನೆಂಬ ಪುರದ ವಿಪ್ರರ ಸಂದಣಿಯಲ್ಲಿ
ಬಸವೇಶ್ವರನುದ್ಭವಿಸಿ ಕಲ್ಯಾಣಕ್ಕೆ ಬಂದು
ಬಿಜ್ಜಳನ ಅಷ್ಟವಿಧಪ್ರಧಾನರ ನಷ್ಟವಮಾಡಿ,
ನವಮಪ್ರಧಾನನಾಗಿ, ಬಿಜ್ಜಳನ ರಾಜ್ಯವನ್ನಾಳುತ್ತ
ನಿತ್ಯದಲ್ಲಿ ಹಲವು ಜಂಗಮಕ್ಕೆ ಭೋಜನವ ಮಾಡುತ್ತ
ಬಸವಣ್ಣ ಇರ್ಪನು ಕಲ್ಯಾಣಪುರದಲ್ಲಿ ನೋಡೆಂದ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗನಿರ್ಮಾಯಪ್ರಭುವೆ.
-ಕಾಡಸಿದ್ಧೇಶ್ವರ






























