ಚಿತ್ರದುರ್ಗ: ಚಿತ್ರದುರ್ಗ ನಗರಕ್ಕೆ ಕುಡಿಯುವ ನೀರು ಸರಬರಾಜು ಆಗುವ ಶಾಂತಿಸಾಗರ ನೀರು ಸರಬರಾಜು ಯೋಜನೆಯ ನಿರ್ವಹಣೆಯ ಕೆಲಸ ನಿರ್ವಹಿಸುವ ಕಲ್ಲವ್ವನಾಗತಿಹಳ್ಳಿ ಪವನ್ ವಿದ್ಯುತ್ ಶಕ್ತಿ ಸ್ಥಾವರದ ಹತ್ತಿರ, ಹಿರೇಕಂದವಾದ ಹತ್ತಿರ, ವಡ್ಡರ ಪಾಳ್ಯದ ಹತ್ತಿರ ಮತ್ತು ಹಿರೇಕಂದವಾಡಿ ಅಡಿಕೆ ತೋಟದ ಹತ್ತಿರ ನಿರ್ವಹಣೆ ಕೆಲಸ ಇರುವುದರಿಂದ ಇದೇ ಜುಲೈ 17 ರಿಂದ 19 ರವರೆಗೆ ನೀರು ಸರಬರಾಜು ವ್ಯವಸ್ಥೆಯಲ್ಲಿ ವ್ಯತ್ಯಯವಾಗಲಿದೆ.
ಸಾರ್ವಜನಿಕರು ತಮ್ಮ ತಮ್ಮ ಪ್ರದೇಶದಲ್ಲಿನ ಕೊಳವೆ ಬಾವಿಗಳ ನೀರನ್ನು ಮತ್ತು ಶುದ್ಧ ಕುಡಿಯುವ ನೀರಿನ ಘಟಕದ ನೀರನ್ನು ಉಪಯೋಗಿಸಲು ಕೋರಿದೆ. ನೀರನ್ನು ಮಿತವಾಗಿ ಬಳಸಿ ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸಬೇಕು ಎಂದು ಚಿತ್ರದುರ್ಗ ನಗರಸಭೆ ಪೌರಾಯುಕ್ತರು ಕೋರಿದ್ದಾರೆ.
































