ಚಿತ್ರದುರ್ಗ: ಚಿತ್ರದುರ್ಗ ನಗರ ಉಪವಿಭಾಗ ಘಟಕ-1 ವ್ಯಾಪ್ತಿಯಲ್ಲಿ ಬರುವ ಎಫ್-10 ಜಿಲ್ಲಾ ಪಂಚಾಯತ್ ಮಾರ್ಗದಲ್ಲಿ ಇರುವ 11 ಕೆ.ವಿ ಮಾರ್ಗದಲ್ಲಿ ತುರ್ತು ಕಾಮಗಾರಿ ಇರುವುದರಿಂದ ಈ ಮಾರ್ಗದ ಕೆಲವು ಪ್ರದೇಶಗಳಲ್ಲಿ ಮೇ 22ರಂದು ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಎಫ್-10 ಮಾರ್ಗದ ಐಯುಡಿಪಿ ಲೇಔಟ್-11ನೇ ಕ್ರಾಸ್, ಗಾಂಧಿ ನಗರ, ಕಂದಾಯಗಿರಿ ನಗರ, ರಾಜೇಂದ್ರ ನಗರ, ಸಾದಿಕ್ ನಗರ, ಸೂರ್ಯಪುತ್ರ ಸರ್ಕಲ್, ಕಣುಮಪ್ಪ ಬಡಾವಣೆ, ಜೋಗಿಮಟ್ಟಿ ರಸ್ತೆ-4,5,6ನೇ ಕ್ರಾಸ್, ಜೆ.ಪಿ.ನಗರ, ಸ್ವಾಮಿ ವಿವೇಕಾನಂದ ನಗರ, ಟೀಚರ್ಸ್ ಕಾಲೋನಿ, ಬುದ್ಧ ನಗರ ಸ್ಟೇಡಿಯಂ ಸುತ್ತಮುತ್ತ, ಪ್ರಶಾಂತ್ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಚಿತ್ರದುರ್ಗ ನಗರ ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ತಿಳಿಸಿದ್ದಾರೆ.






























