ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿರುವ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಹಿಂದೂಳಿದ ವರ್ಗಗಳ 25 ವಸತಿ ಶಾಲೆಗಳಲ್ಲಿ ಹಾಗೂ 02 ಪದವಿ ಪೂರ್ವ ವಸತಿ ಕಾಲೇಜುಗಳಲ್ಲಿ (ಮೊರಾರ್ಜಿ ದೇಸಾಯಿ) 2026-27ನೇ ಸಾಲಿಗೆ 6 ರಿಂದ 10ನೇ ತರಗತಿ ಹಾಗೂ ಪದವಿ ಪೂರ್ವ ತರಗತಿಗಳಿಗೆ ಆಂಗ್ಲ ಮಾಧ್ಯಮದಲ್ಲಿ ಬೋಧನೆ ಮಾಡಲು ಲಭ್ಯವಿರುವ ಮತ್ತು ಲಭ್ಯವಾಗಬಹುದಾದ ಶಿಕ್ಷಕರು/ಉಪನ್ಯಾಸಕರ ಹುದ್ದೆಗಳಿಗೆ ಗೌರವ ಧನದ ಆಧಾರದ ಮೇಲೆ ಅತಿಥಿ ಶಿಕ್ಷಕರು/ಉಪನ್ಯಾಸಕರನ್ನು ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಗಳನ್ನು ಜೂನ್ 08, 2026 ರಿಂದ ಜೂನ್ 16, 2026 ರ ಸಂಜೆ 04:30 ರೊಳಗಾಗಿ ಪಡೆದು ಅರ್ಜಿಯೊಂದಿಗೆ ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಪದವಿ (ಎಲ್ಲಾ ವರ್ಷಗಳ), ಬಿ.ಇಡಿ (ಎಲ್ಲಾ ವರ್ಷಗಳ) ಟಿ.ಇ.ಟಿ (ತೇರ್ಗಡೆಯಾಗಿದ್ದಲ್ಲಿ) ಮತ್ತು ಸ್ನಾತಕೋತ್ತರ ಪದವಿ ಅಂಕಪಟ್ಟಿ ಗಳನ್ನು (ಎಲ್ಲಾ ವರ್ಷಗಳ ಪ್ರತಿಗಳು – ಉಪನ್ಯಾಸಕರ ಹುದ್ದೆಗಾಗಿ). ಜೂನ್ 16 ಅಂತಿಮ ದಿನಾಂಕದಂದು ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗಾಗಿ ದಾವಣಗೆರೆಯ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.






























