ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
: ಗುರುಲಿಂಗಜಂಗಮ ತ್ರಿವಿಧಪ್ರಸಾದವ
ಕೊಂಡೆವೆಂದುಲಿವ ಅಜ್ಞಾನಿಗಳು ನೀವು ಕೇಳಿರೆ.
ಗುರುಪ್ರಸಾದವ ಕೊಂಡಲ್ಲಿ ಮಲತ್ರಯದೋಷವಳಿಯಬೇಕು.
ಲಿಂಗಪ್ರಸಾದವ ಕೊಂಡಲ್ಲಿ ಇಂದ್ರಿಯ ವಿಷಯಸೂತಕವಳಿಯಬೇಕು.
ಜಂಗಮಪ್ರಸಾದವ ಕೊಂಡಲ್ಲಿ ಸರ್ವಸಂಕಲ್ಪ ಸಂಶಯವಳಿಯಬೇಕು.
ಇಂತೀ ತ್ರಿದೋಷವಳಿಯದೆ ಆದ್ಯರ ವಚನವ ಕಲಿತು,
ಮನಬಂದಂತೆ ಉಲಿವುತಿಪ್ಪ ದುಶ್ಶೀಲರನೊಲ್ಲ ,ನಮ್ಮ ಪರಮಗುರು ನಂಜುಂಡಶಿವನು.
-ನಂಜುಂಡಶಿವ