Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಲವ್ ಮಾಡುವಂತೆ ಶಿಕ್ಷಕಿ ಮಗ ಕಿರುಕುಳ: ಬೇಸತ್ತು SSLC ವಿದ್ಯಾರ್ಥಿನಿ ಆತ್ಮಹತ್ಯೆ

0

ಹೊಸಕೋಟೆ: ಲವ್ ಮಾಡುವಂತೆ ಶಾಲಾ ಶಿಕ್ಷಕಿಯ ಮಗ ವಿದ್ಯಾರ್ಥಿನಿಯೊಬ್ಬಳ ಹಿಂದೆ ಬಿದ್ದಿದ್ದಾನೆ. ಆದ್ರೇ ಆತ ಪ್ರೀತಿಗೆ ಒಪ್ಪದಂತ ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವಂತ ಘಟನೆ ಹೊಸಕೋಟೆಯ ಪಾರ್ವತಿಪುರದಲ್ಲಿ ನಡೆದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ಪಾರ್ವತಿಪುರ ನಿವಾಸಿ ಸಾರಾ(16) ಎಂಬ ವಿದ್ಯಾರ್ಥಿನಿಯೇ ಆತ್ಮಹತ್ಯೆಗೆ ಶರಣಾದಂತವರಾಗಿದ್ದಾರೆ.

ಸ್ಯಾಂಡಲ್‌ವುಡ್‌ನ ಹಿರಿಯ ನಿರ್ಮಾಪಕ ಕೆಸಿಎನ್ ಮೋಹನ್ ವಿಧಿವಶ

ಖಾಸಗಿ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಓದುತ್ತಿದ್ದಂತ ಸಾರಾ ಹಿಂದೆ ಅದೇ ಶಾಲೆಯ ಶಿಕ್ಷಕಿಯ ಪುತ್ರನೊಬ್ಬ ಲವ್ ಮಾಡುವಂತೆ ಹಿಂದೆ ಬಿದ್ದಿದ್ದನಂತೆ. ಆದ್ರೇ ಆತನ ಪ್ರೀತಿಗೆ ಸಾರಾ ಒಪ್ಪಲು ನಿರಾಕರಿಸಿದ್ದರು. ಸಾರಾ ಪ್ರೀತಿಸಲು ಒಪ್ಪದ ಕಾರಣ, ಶಿಕ್ಷಕಿಯ ಪುತ್ರ ಹಲವು ರೀತಿಯಲ್ಲಿ ಕಿರುಕುಳ ನೀಡುತ್ತಿದ್ದನಂತೆ. ಈ ಹಿನ್ನಲೆಯಲ್ಲಿ ಶಿಕ್ಷಕಿಯ ಮಗನ ಕಿರುಕುಳಕ್ಕೆ ಬೇಸತ್ತು ಸಾರಾ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವುದಾಗಿ ಬಾಲಕಿಯ ಪೋಷಕರು ಆರೋಪಿಸಿದ್ದಾರೆ.

ಈ ಸಂಬಂಧ ಹೊಸಕೋಟೆ ಠಾಣೆಗೆ ತೆರಳಿ ತಮ್ಮ ಮಗಳ ಸಾವಿಗೆ ಶಾಲಾ ಶಿಕ್ಷಕಿ ಹಾಗೂ ಅವರ ಮಗ ಕಾರಣ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ ಎನ್ನಲಾಗಿದೆ.

Leave A Reply

Your email address will not be published.