ಬೇಂಗಳೂರು: ರಾಜ್ಯದಲ್ಲಿ ಸದ್ಯ CM ಇದ್ದಾರೆ. ಹೀಗಾಗಿ ನಾನು ರಾಜ್ಯದ CM ಆಗುವ ಪ್ರಶ್ನೆಯೇ ಉದ್ಭವಿಸಲ್ಲ’ ಎಂದು AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಲಬುರಗಿಯಲ್ಲಿ ಹೇಳಿದ್ದಾರೆ.
‘ನಾನು CMಯಾದರೆ ಉತ್ತಮ ಎಂದು ನೀವು (ಮಾಧ್ಯಮದವರು), ಅವರು (ನಾಯಕರು) ಹಾಗೂ ಮೇಲಿನವರೂ (ಹೈಕಮಾಂಡ್) ಹೇಳುತ್ತಾರೆ.
ಆದರೆ, ನಾವು ತತ್ವ ಸಿದ್ಧಾಂತಗಳನ್ನು ನಂಬಿಕೊಂಡು ಈ ತನಕ ಪಕ್ಷದಲ್ಲಿ ದುಡಿದುಕೊಂಡು ಬಂದಿದ್ದೇವೆ. ನನ್ನ ಬಗ್ಗೆ ಬಹುತೇಕ ನಿರ್ಣಯಗಳನ್ನು ಸೋನಿಯಾ ಅವರು ತೆಗೆದುಕೊಳ್ಳುತ್ತಾರೆ’ ಎಂದಿದ್ದಾರೆ.

































