ರಾಜ್ಯಸಭಾ ಸದಸ್ಯತ್ವದಿಂದ ರಾಘವ ಛಡ್ಡಾ ಅಮಾನತು

ನವದೆಹಲಿ: ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಅವರನ್ನು ಸದಸ್ಯತ್ವದಿಂದ ಅಮಾನತು ಮಾಡಲಾಗಿದೆ. ಹಕ್ಕುಬಾಧ್ಯತಾ ಸಮಿತಿಯು ವರದಿ ಸಲ್ಲಿಸುವವರೆಗೆ ಈ ಅಮಾನತು ಆದೇಶ ಜಾರಿಯಲ್ಲಿ ಇರಲಿದೆ. ಸಂಸತ್ತಿ ಮುಂಗಾರು ಕೊನೆಯ ಅಧಿವೇಶನದ ದಿನವೇ ಈ ಗಮನಾರ್ಹ ಬೆಳವಣಿಗೆ ನಡೆದಿದೆ. ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಕರ್ ಈ ಬಗ್ಗೆ ಮಾಹಿತಿ ನೀಡಿದ್ದು, ಹಕ್ಕುಬಾಧ್ಯತಾ ಸಮಿತಿಯ ವರದಿಯನ್ನು ಕೌನ್ಸಿಲ್ ಪಡೆಯುವವರೆಗೆ ನಾನು ರಾಘವ್ ಚಡ್ಡಾ ಅವರನ್ನ ರಾಜ್ಯಸಭಾ ಸೇವೆಯಿಂದ ಅಮಾನತುಗೊಳಿಸುತ್ತೇನೆ ಎಂದು ಘೋಷಿಸಿದ್ದಾರೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement