ಶಕ್ತಿ ಯೋಜನೆಯನ್ನ ಕಷ್ಟದಲ್ಲೇ ಒಪ್ಪಿಕೊಂಡಿದ್ದೇವೆ – ಡಿಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು : ಶಕ್ತಿ ಯೋಜನೆಯಿಂದ ಸರ್ಕಾರಕ್ಕೆ ಹೊರೆಯಾಗಿದೆ. ಶಕ್ತಿ ಯೋಜನೆಯನ್ನ ಕಷ್ಟದಲ್ಲೇ ಒಪ್ಪಿಕೊಂಡಿದ್ದೀವಿ. ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದಕ್ಕೆ ನಾವು ಮುಂದುವರೆಸೋ ಅನಿವಾರ್ಯ ಇದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಬೇಸರ ವ್ಯಕ್ತಪಡಿಸಿದರು. ನೂತನ ಬಸ್‌ಗಳಿಗೆ ಚಾಲನೆ ನೀಡಿ ಮಾತನಾಡಿದ ಡಿಸಿಎಂ, ಇವತ್ತು ಹೊಸ ಅಧ್ಯಾಯಕ್ಕೆ ಕಾಲಿಟ್ಟಿದ್ದೇವೆ. ಪ್ರಣಾಳಿಕೆ ಯೋಜನೆಗೆ ಕೆಲವರು ಟೀಕೆ ಮಾಡಿದ್ರು, ಕೆಲ ರಾಜ್ಯದ ಮುಖ್ಯಮಂತ್ರಿಗಳೂ ವಿರೋಧ ವ್ಯಕ್ತಪಡಿಸಿದ್ರು. ಆರ್ಥಿಕವಾಗಿ ಮಹಿಳೆಯರಿಗೆ ಶಕ್ತಿ ನೀಡ್ಬೇಕು ಅಂತ ಶಕ್ತಿ ಯೋಜನೆ ಜಾರಿ ಮಾಡಿದ್ವಿ. ಇದೂವರೆಗೂ 72 ಕೋಟಿಯಷ್ಟು ಮಹಿಳೆಯರು ಉಚಿತ ಬಸ್‌ನ ಪ್ರಯೋಗ ಪಡೆದಿದ್ದಾರೆ ಎಂದರು. ಸಾರಿಗೆ ನಿಗಮದಲ್ಲಿ ಕಳೆದ 6 ವರ್ಷದಿಂದ ವೇತನ ಪರಿಷ್ಕರಣೆ ಆಗಿಲ್ಲ. ಕೆಎಸ್‌ಆರ್‌ಟಿಸಿ ಕರ್ತವ್ಯದಲ್ಲಿ ಮೃತ ನೌಕರರಿಗೆ 1 ಕೋಟಿ ವಿಮೆ ನೀಡಲಾಗ್ತಿದೆ. ಇದನ್ನ ಇತರ ನಿಗಮಗಳಿಗೂ ವಿಸ್ತರಣೆ ಮಾಡುವ ಚಿಂತನೆ ನಡೆದಿದೆ. ನಾನು ಪಲ್ಲಕ್ಕಿ ಬಸ್‌ನಲ್ಲಿ ಕುಳಿತು ಸೀಟ್ ನಲ್ಲಿ ಮಲಗಿ ನೋಡಿದೆ. ಸರಿಯಾಗಿ ಬಸ್‌ನ ಸೀಟ್ 6 ಅಡಿ ಉದ್ದವಾಗಿದೆ. ನನ್ನ ಹೆಂಡತಿಗೂ ಪಲ್ಲಕ್ಕಿ ಬಸ್‌ನಲ್ಲಿ ಮೈಸೂರಿಗೆ ಹೋಗುವಂತೆ ತಿಳಿಸಿದ್ದೇನೆ. ಇಡೀ ದೇಶದಲ್ಲೇ ನಮ್ಮ ರಾಜ್ಯದ ಸಾರಿಗೆ ಮಾದರಿಯಾಗಿದೆ. ಇಲ್ಲಿನ ಸೇವೆಯನ್ನ ಇತರ ರಾಜ್ಯಗಳ ಸಾರಿಗೆಗೂ ಅಳವಡಿಕೆ ಮಾಡುವ ಚಿಂತನೆ ಮಾಡ್ತಿದ್ದಾರೆ. ನೂತನ ಬಸ್‌ಗೆ ಪಲ್ಲಕ್ಕಿ ಹೆಸರು ಕೊಟ್ಟ ಸಚಿವರಿಗೆ ಪ್ರಶಸ್ತಿ ಕೊಡಬೇಕು. ಪಲ್ಲಕ್ಕಿ ಬಸ್ ಪ್ರತಿ ಮನೆಯರ ಮಹಾರಾಣಿಯನ್ನ ಕರೆದುಕೊಂಡು ಹೋಗಲಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement