ಈ ಗ್ರಾಮಗಳ ಪಂಪ್‌ಸೆಟ್‌ಗಳಿಗೆ ಡಿ.2ರ ಬೆಳಿಗ್ಗೆ 4ರಿಂದ 10 ಗಂಟೆಯವರೆಗೆ ವಿದ್ಯುತ್ ಸರಬರಾಜು.!

 

ಹೊಸಪೇಟೆ: 110/11ಕೆ.ವಿ ಸಂಕ್ಲಾಪುರ ವಿದ್ಯುತ್ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಇರುವುದರಿಂದ ಡಿ.2ಕ್ಕೆ ಹೊಸಪೇಟೆ ಗ್ರಾಮೀಣ ಶಾಖಾ ವ್ಯಾಪ್ತಿಗೆ ಬರುವ ಕಾಕುಬಾಳು, ಗುಂಡ್ಲುವದ್ದಿಗೇರೆ, ಕಲ್ಲಹಳ್ಳಿ, ರಾಜಾಪುರ, ಬಸವನದುರ್ಗ ಮತ್ತು ನಾಗೇನಹಳ್ಳಿ ಗ್ರಾಮಗಳಿಗೆ ಹಾಗೂ ನೀರಾವರಿ ಪಂಪ್ ಸೆಟ್ ರೈತರಿಗೆ ವಿದ್ಯುತ್ ವ್ಯತ್ಯಯ ಆಗಲಿದ್ದು, ಈ ಭಾಗದ ರೈತರ ಪಂಪ್‌ಸೆಟ್‌ಗಳಿಗೆ ಅಂದು ಬೆಳಿಗ್ಗೆ 4 ರಿಂದ 10 ಗಂಟೆಯವರೆಗೆ ವಿದ್ಯುತ್ ಸರಬರಾಜು ಆಗಲಿದೆ.

ಎಲ್ಲಾ ರೈತ ಬಾಂಧವರು ಹಾಗೂ ಗ್ರಾಹಕರು ಸಹಕರಿಸಬೇಕಾಗಿ ಜೆಸ್ಕಾಂ ಹೊಸಪೇಟೆ ಗ್ರಾಮೀಣ ಕಾರ್ಯ ಮತ್ತು ಪಾಲನೆ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement